ಗಂಗಾವತಿ: ಮತದಾರರನ್ನು ಸೆಳೆಯುವ ಸಲುವಾಗಿ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗವು ಬಣ್ಣಬಣ್ಣದ ಗುರುತಿನ ಚೀಟಿ ವಿತರಿಸಿದೆ. ಆದರೆ, ಬಹುತೇಕ ಕಾರ್ಡ್ಗಳಲ್ಲಿ ದೋಷ ಕಂಡು ಬಂದಿದೆ.
ಗಂಗಾವತಿಯಲ್ಲಿ ಆಯ್ದ ಕೆಲವರ ಮನೆಗಳಿಗೆ ಅಂಚೆ ಇಲಾಖೆ ಮೂಲಕ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತಿದೆ. ತಾಂತ್ರಿಕ ಲೋಪದೋಷಗಳಿಂದ ಕನ್ನಡದಲ್ಲಿ ವಿವರಣೆ ಸರಿಯಿದ್ದರೆ, ಇಂಗ್ಲಿಷ್ನಲ್ಲಿ ಇರುವ ಮಾಹಿತಿ ತಪ್ಪಿದೆ ಎಂದು ಗುರುತಿನ ಚೀಟಿ ಪಡೆದ ಸ್ಥಳೀಯರು ಆರೋಪಿಸಿದರು.
ಕೆಲ ಗುರುತಿನ ಚೀಟಿಗಳಲ್ಲಿ ಕನ್ನಡ ಭಾಷೆಯಲ್ಲಿ ಅಪ್ಪನ ಹೆಸರು ಒಂದು ರೀತಿಯಿದ್ದರೆ, ಇಂಗ್ಲಿಷ್ನಲ್ಲಿ ಬದಲಾಗಿದೆ. ತಾಂತ್ರಿಕ ದೋಷದಿಂದ ಕೂಡಿರುವ ಇವುಗಳ ಸರಿಪಡಿಸುವಿಕೆಗೆ ನಮ್ಮ ಕೆಲಸ-ಕಾರ್ಯಗಳನ್ನೆಲ್ಲ ಬಿಟ್ಟು ಕಚೇರಿಗಳತ್ತ ಅಲೆಯಬೇಕು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ಕೂಡಲೇ ಚುನಾವಣಾ ಆಯೋಗ ಈ ಕುರಿತು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.