ಕೊಪ್ಪಳ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸಾರ್ವಜನಿಕರಿಗೆ ವೈರಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಶಿಕ್ಷಕರೊಬ್ಬರು ಗೀತೆಯನ್ನು ರಚಿಸಿ ಹಾಡುವ ಮೂಲಕ ಮನವಿ ಮಾಡಿದ್ದಾರೆ.
ಈವರೆಗೆ ಹಲವಾರು ಜಾಗೃತಿ ಗೀತೆಗಳನ್ನು ರಚಿಸಿ ಹಾಡಿರುವ ತಾಲೂಕಿನ ಬೋಚನಹಳ್ಳಿ ಗ್ರಾಮದ ಶಿಕ್ಷಕ ಹನುಮಂತಪ್ಪ ಕುರಿ ಅವರು, ಇದೀಗ ಕೊರೊನಾದಿಂದ ಭಯಪಡಬೇಡಿ, ಜಾಗರೂಕರಾಗಿರಿ ಎಂಬ ಗೀತೆಯನ್ನು ರಚಿಸಿ ಹಾಡಿದ್ದಾರೆ.
ಜನರು ಅನಾವಶ್ಯಕವಾಗಿ ಓಡಾಡಬಾರದು, ವೈರಸ್ನಿಂದ ಮುಕ್ತಿ ಪಡೆಯಲು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಹಾಗೂ ಕೊರೊನಾ ಸೋಂಕಿನ ಬಗ್ಗೆ ಜನರು ಜಾಗರೂಕರಾಗಿರುವಂತೆ ಸಂದೇಶವುಳ್ಳ ಅಂಶಗಳನ್ನು ಶಿಕ್ಷಕ ಹನುಮಂತಪ್ಪ ಕುರಿ ತಮ್ಮ ಜಾಗೃತಿ ಗೀತೆಯಲ್ಲಿ ಹಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಗಳಿಸಿದ್ದಾರೆ.
ಓದಿ: ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜೆಡಿಎಸ್ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸಿಡಿದೆದ್ದು ಬರಲಿದೆ: ಹೆಚ್ಡಿಕೆ