ಗಂಗಾವತಿ: ಆಶ್ರಯ ಯೋಜನೆಯ ನಿವೇಶನಗಳ ಅರ್ಜಿ ಪಡೆಯಲು ಮುಗಿಬಿದ್ದ ಮಹಿಳೆಯರು

author img

By

Published : Oct 11, 2021, 7:07 PM IST

ಆಶ್ರಯ ನಿವೇಶನಕ್ಕೆ ಹತ್ತು ಸಾವಿರ

ಅರ್ಜಿ ಸ್ವೀಕರಿಸಲು ಮೊದಲ ದಿನವಾಗಿದ್ದ ಸೋಮವಾರ ಬೆಳಗ್ಗೆ ಸಾವಿರಾರು ಜನ ಮಹಿಳೆಯರು ನಗರಸಭೆಯ ಮುಂದೆ ಜಮಾಯಿಸಿದ್ದರು. ಇದರಿಂದ ಸಿಬ್ಬಂದಿ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿತ್ತು.

ಗಂಗಾವತಿ: ನಗರಸಭಾ ವ್ಯಾಪ್ತಿಯ ಹೊಸಳ್ಳಿ ಸಮೀಪ ಆಶ್ರಯ ಯೋಜನೆಯಡಿ ವಿತರಿಸಲು ನಿಗದಿ ಮಾಡಲಾದ 540 ನಿವೇಶನಗಳನ್ನು ಅರ್ಹ ಪಲಾನುಭವಿಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆ ಭಾಗವಾಗಿ ನಗರಸಭೆಯಲ್ಲಿ ಅರ್ಜಿ ವಿತರಣೆ ಆರಂಭವಾಗಿದೆ.

ಅರ್ಜಿ ಸ್ವೀಕರಿಸಲು ಮೊದಲ ದಿನವಾಗಿದ್ದ ಸೋಮವಾರ ಬೆಳಗ್ಗೆ ಸಾವಿರಾರು ಜನ ಮಹಿಳೆಯರು ನಗರಸಭೆಯ ಮುಂದೆ ಜಮಾಯಿಸಿದ್ದರು. ಇದರಿಂದ ಸಿಬ್ಬಂದಿ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿತ್ತು.

ನಗರಸಭೆಯ ಮುಂದೆ ಜಮಾಯಿಸಿದ ಮಹಿಳೆಯರು
ಆಶ್ರಯ ಯೋಜನೆಯ ನಿವೇಶನಗಳ ಅರ್ಜಿ ಪಡೆಯಲು ಮುಗಿಬಿದ್ದ ಮಹಿಳೆಯರು

ಬೆಳಗ್ಗೆ 8 ಗಂಟೆಯಿಂದಲೇ ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿದ್ದರು. ಸಂಜೆ 5 ಗಂಟೆಯಾದರೂ ಅರ್ಜಿ ಸಿಗದೇ ಕೆಲವರು ಬರಿಗೈಯಲ್ಲಿ ವಾಪಸ್​ ಆದರು. ಅರ್ಜಿ ವಿತರಿಸಲು ಒಂದೇ ಕೌಂಟರ್ ಆರಂಭಿಸಿದ್ದು, ಸಮಸ್ಯೆಗೆ ಕಾರಣವಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.