ETV Bharat / state

ರಾಜೀನಾಮೆ ವಿಚಾರದಲ್ಲಿ ಸಿದ್ದು ಪಾತ್ರ ಇಲ್ಲ: ಎಸ್.ಎನ್.ನಾರಾಯಣಸ್ವಾಮಿ

author img

By

Published : Jul 6, 2019, 6:04 PM IST

ನಾವೂ ಕೂಡ ಅನೇಕ ಬಾರಿ ಸಿದ್ದರಾಮಣ್ಣ ಅವರನ್ನ ಭೇಟಿ ಮಾಡಿದ್ದೇವೆ, ಯಾವುದೇ ಕಾರಣಕ್ಕೂ ಈ ಸರ್ಕಾರವನ್ನ ಕೆಡವಬೇಕು ಎನ್ನುವ ಭಾವನೆ ಅವರಲ್ಲಿ ಇಲ್ಲ ಎಂದರು.

ಎಸ್.ಎನ್.ನಾರಾಯಣಸ್ವಾಮಿ

ಕೋಲಾರ: ಶಾಸಕರ ರಾಜೀನಾಮೆ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಖಂಡಿತ ಇಲ್ಲ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಬೇಕು ಎನ್ನುವ ಆಶಯ ಸಿದ್ದರಾಮಣ್ಣನವರ ಮನಸ್ಸಿನಲ್ಲಿದೆ. ನಾವೂ ಕೂಡ ಅನೇಕ ಬಾರಿ ಸಿದ್ದರಾಮಣ್ಣ ಅವರನ್ನ ಭೇಟಿ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಈ ಸರ್ಕಾರವನ್ನ ಕೆಡವಬೇಕು ಎನ್ನುವ ಭಾವನೆ ಅವರಲ್ಲಿ ಇಲ್ಲ ಎಂದರು.

ಎಸ್.ಎನ್.ನಾರಾಯಣಸ್ವಾಮಿ

ಈಗ ಮಧ್ಯಂತರ ಚುನಾವಣೆಗೆ ಹೋದರೆ ಜನರು ಛೀಮಾರಿ ಹಾಕುತ್ತಾರೆ, ಹೀಗಾಗಿಯೇ ಚುನಾವಣೆಗೆ ಹೋಗಲು ಯಾರಿಗೂ ಮನಸ್ಸಿಲ್ಲ. ಒಂದು ವೇಳೆ ಅನಿವಾರ್ಯವಾಗಿ ಚುನಾವಣೆ ಬಂದರೆ, ಅದನ್ನು ಎದುರಿಸುವಲ್ಲಿ ಕಾಂಗ್ರೆಸ್ ಪಕ್ಷ ಸಮರ್ಥವಾಗಿದೆ ಎಂದರು.

Intro:ಕೋಲಾರ
ದಿನಾಂಕ - 06-07-19
ಸ್ಲಗ್ - ಎಸ್.ಎನ್.ನಾರಾಯಣಸ್ವಾಮಿ
ಫಾರ್ಮೆಟ್ - ಎವಿಬಿ




ಆಂಕರ್ : ಶಾಸಕರ ರಾಜಿನಾಮೆ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಾತ್ರ ಖಂಡಿತ ಇಲ್ಲ ಎಂದು ಕೋಲಾರದಲ್ಲಿ ಅಂಬೇಡ್ಕರ್ ಅಭಿವೃದ್ದಿ ನಿಗಮ ಮಂಡಳಿಯ ಅದ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ ಹೇಳಿಕೆ ನೀಡಿದ್ರು. ಇಂದು ಕೋಲಾರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಬೇಕು ಎನ್ನುವ ಆಶಯ ಸಿದ್ದರಾಮಣ್ಣನವರ ಮನಸ್ಸಿನಲ್ಲಿದೆ, ನಾವೂ ಕೂಡ ಅನೇಕ ಬಾರಿ ಸಿದ್ದರಾಮಣ್ಣನವರನ್ನ ಭೇಟಿ ಮಾಡಿದ್ದೇವೆ, ಯಾವುದೇ ಕಾರಣಕ್ಕೂ ಈ ಸರ್ಕಾರವನ್ನ ಕೆಡವಬೇಕು ಎನ್ನುವ ಭಾವನೆ ಇಲ್ಲ ಎಂದರು. ಇನ್ನು ಮದ್ಯಂತರ ಚುನಾವಣೆ ಕುರಿತು ಮಾತನಾಡಿದ ಅವರು, ಈಗ ಮಧ್ಯಂತರ ಚುನಾವಣೆಗೆ ಹೋದರೆ ಜನರು ಛೀಮಾರಿ ಹಾಕುತ್ತಾರೆ, ಹೀಗಾಗಿ ಚುನಾವಣೆಗೆ ಹೋಗಲು ಕಾಂಗ್ರೇಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷಗಳಿಗೆ ಮನಸ್ಸಿಲ್ಲ ಎಂದ ಅವರು ಚುನಾವಣೆ ಬರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ರು. ಅಲ್ಲದೆ ಒಂದು ವೇಳೆ ಅನಿವಾರ್ಯವಾಗಿ ಚುನಾವಣೆ ಬಂದರೆ, ಚುನಾವಣೆಯನ್ನ ಎದುರಿಸುವಲ್ಲಿ ಕಾಂಗ್ರೇಸ್ ಪಕ್ಷ ಸಮರ್ಥವಾಗಿದೆ ಎಂದರು.


ಬೈಟ್ 1: ಎಸ್.ಎನ್,ನಾರಾಯಣಸ್ವಾಮಿ (ಅಂಬೇಡ್ಕರ್ ಅಭಿವೃದ್ದಿ ನಿಗಮ ಮಂಡಳಿಯ ಅದ್ಯಕ್ಷ )Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.