ETV Bharat / state

ಆತನ ಬಗ್ಗೆ ಮಾತನಾಡಲು ಅಸಹ್ಯವಾಗುತ್ತಿದೆ: ವರ್ತೂರ್​ಗೆ ಶ್ರೀನಿವಾಸ್​ಗೌಡ ತಿರುಗೇಟು

author img

By

Published : Dec 26, 2019, 10:12 AM IST

ಆತನ ಬಗ್ಗೆ ಮಾತನಾಡಲು ಅಸಹ್ಯ ಎನಿಸುತ್ತಿದೆ. ಮನುಷ್ಯನಿಗೆ ಇತಿಮಿತಿ ಇರಬೇಕು. ಸಚಿವನಾಗಿದ್ದ ಆತನಿಗೆ ಅದ್ಯಾವುದು ಇಲ್ಲ ಎಂದು ಕೋಲಾರ ಶಾಸಕ ಶ್ರೀನಿವಾಸಗೌಡ ಮಾಜಿ ಸಚಿವ ವರ್ತೂರು ಪ್ರಕಾಶ್​ ವಿರುದ್ಧ ಹರಿಹಾಯ್ದರು.

Shrinivas reaction about Varthur prakash statement
ವರ್ತೂರ್​ಗೆ ಶ್ರೀನಿವಾಸ್​ಗೌಡ ತಿರುಗೇಟು

ಕೋಲಾರ: ಆತನ ಬಗ್ಗೆ ಮಾತನಾಡಲು ಅಸಹ್ಯ ಎನಿಸುತ್ತಿದೆ. ಮನುಷ್ಯನಿಗೆ ಇತಿಮಿತಿ ಇರಬೇಕು. ಸಚಿವನಾಗಿದ್ದ ಆತನಿಗೆ ಅದ್ಯಾವುದೂ ಇಲ್ಲ ಎಂದು ಕೋಲಾರ ಶಾಸಕ ಶ್ರೀನಿವಾಸಗೌಡ ಮಾಜಿ ಸಚಿವ ವರ್ತೂರು ಪ್ರಕಾಶ್​ ವಿರುದ್ಧ ಹರಿಹಾಯ್ದರು.

ಸತ್ತ ನಾಯಿಗೆ ಹೋಲಿಸಿ ಹೇಳಿಕೆ ನೀಡಿದ್ದ ವರ್ತೂರು ಪ್ರಕಾಶ್‍ಗೆ ತಿರುಗೇಟು ನೀಡಿದ ಶಾಸಕ, ಆತನ ಮಾತಿಗೆ ಉತ್ತರ ಕೊಡುವುದಕ್ಕಿಂತ ನಮ್ಮ ಬಾಯಿ ಶುದ್ದವಾಗಿಟ್ಟುಕೊಳ್ಳುವುದು ಲೇಸು. ಕೋಲಾರ ಕ್ಷೇತ್ರದಲ್ಲಿ ಎಂತೆಂಥಾ ಮಹಾನುಭಾವರು ಗೆದ್ದಿದ್ದಾರೆ. 40 ವರ್ಷದ ರಾಜಕಾರಣದಲ್ಲಿ ಹಿರಿಯರ ತತ್ವಾದರ್ಶಗಳನ್ನ ಮೈಗೂಡಿಸಿಕೊಂಡು ಬಂದವನು. ನಾಲಿಗೆಗೆ ಹಿಡಿತ ಇರಬೇಕು. ಹಾಗೆ ನಾಲಿಗೆ ಮೇಲೆ ಹಿಡಿತ ಇಲ್ಲದವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದು ಹೇಳಿದರು.

ವರ್ತೂರ್​ಗೆ ಶ್ರೀನಿವಾಸ್​ಗೌಡ ತಿರುಗೇಟು

ಮಂತ್ರಿ ಆಗಿದ್ದವನು ಗೌರವಯುತವಾಗಿ ಮಾತನಾಡಲಿ. ಎಣ್ಣೆ ಪಾರ್ಟಿ ಮಾಡಿಕೊಂಡು ಇದೆಲ್ಲಾ ಬೇಕಾ ಎಂದು ವರ್ತೂರ್‌ ಬಗ್ಗೆ ಶ್ರೀನಿವಾಸ್ ಗೌಡ ತೀವ್ರ ವಾಗ್ದಾಳಿ ನಡೆಸಿದರು.

Intro:ಆಂಕರ್ : ಆತನ ಬಗ್ಗೆ ಮಾತನಾಡಲು ನನಗೆ ಅಸಹ್ಯ, ಮನುಷ್ಯ ಒಂದು ಹಂತಕ್ಕೆ ಬಂದ ಮೇಲೆ ಇತಿಮಿತಿ ಇರಬೇಕು, ಸಚಿವನಾಗದ್ದ ಆತನಿಗೆ ಅದ್ಯಾವುದು ಇಲ್ಲ, ನಿನ್ನೆ ಸತ್ತ ನಾಯಿಗೆ ಹೋಲಿಕೆ ಮಾಡಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್‍ಗೆ ತಿರುಗೇಟು ನೀಡಿದ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿಕೆ. Body:ಆತನ ಮಾತಿಗೆ ಉತ್ತರ ಕೊಡುವುದಕ್ಕಿಂತ ನಮ್ಮ ಬಾಯಿ ಶುದ್ದವಾಗಿರಿಸಿಕೊಳ್ಳುವುದು ಲೇಸು ಎಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೀಗೆ ತಿರುಗೇಟು ನೀಡಿದ್ರು. ಕೋಲಾರ ಕ್ಷೇತ್ರದಲ್ಲಿ ಎಂಥೆಂತಾ ಮಹಾನುಭಾವರು ಗೆದ್ದು ರಾಜಕಾರಣ ಮಾಡಿದ್ದಾರೆ, ಕೋಲಾರಕ್ಕೆ ಬಂದು ಕಾಸು ಕೊಟ್ಟು ಗೆದ್ದ ಮಾತ್ರಕ್ಕೆ ಹೀಗೆ ಕುಡಿದವರಂತೆ ಮಾತನಾಡುತ್ತ ಇದ್ದಾರೆ ಎಂದು ತಿರುಗೇಟು ನೀಡಿದ್ರು. ಈ ಹಿಂದೆ ಬಿಜೆಪಿ ಕೊಟ್ಟ 30 ಕೋಟಿ ಹಣ ಅವರನ್ನು ಹೀಗೆ ಆಡಿಸುತ್ತಿದೆ, 40 ವರ್ಷದ ರಾಜಕಾರಣದಲ್ಲಿ ಹಿರಿಯರ ತತ್ವಾದರ್ಶಗಳನ್ನ ಮೈಗೂಡಿಸಿಕೊಂಡು ಬಂದವನು, ನಾಲಿಗೆಗೆ ಹಿಡಿತ ಇರಬೇಕು, ಹಾಗೆ ನಾಲಿಗೆ ಮೇಲೆ ಹಿಡಿತ ಇಲ್ಲದವರ ಬಗ್ಗೆ ನಾನ್ಯಾಕೆ ಮಾತನಾಡಲಿ. ನಾನೇನು ಆಲೂಗಡ್ಡೆ ಹಾಕಲ್ಲಾ ಅವನಂಗೆ ಜಮೀನು ಕಳೆದುಕೊಂಡ ಡಿಅರ್‍ಡಿಓ ಹಣ ಬಂದ ಹಿನ್ನೆಲೆ ಚುನಾವಣೆ ಮಾಡಿದ್ದೇನೆ, ತನ್ನದೆ ಸಮುದಾಯದ ಸಿದ್ದರಾಮಯ್ಯ ಬಗ್ಗೆ ಮಾತನಾಡಿ ಆತ ಹೀಗೆ ಆಗಿದ್ದಾನೆ. Conclusion:ಈತ ಬದುಕಿರುವಾಗಲೆ ಕ್ಯಾಕರಿಸಿ ಉಗಿತಾ ಇದ್ದಾರೆ ಜನ, ಇನ್ನೂ ಸತ್ತ ಮೇಲೆ ಹೆಂಗೆ, ಮಂತ್ರಿ ಆಗಿದ್ದವನು ಗೌರಯುತವಾಗಿ ಮಾತನಾಡಲಿ, ಎಣ್ಣೆ ಪಾರ್ಟಿ ಮಾಡಿಕೊಂಡು ಇದೆಲ್ಲಾ ಬೇಕಾ ಎಂದು ವಾಗ್ದಾಳಿ ನಡೆಸಿದ್ರು.

ಬೈಟ್ 1: ಶ್ರೀನಿವಾಸಗೌಡ (ಕೋಲಾರ ಶಾಸಕ)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.