ETV Bharat / state

ಜೆಡಿಎಸ್​​​ ಶಾಸಕನನ್ನು ಸತ್ತ ನಾಯಿ ಹೋಲಿಸಿದ ವರ್ತೂರ್​​ ಪ್ರಕಾಶ್​​​

author img

By

Published : Dec 24, 2019, 9:43 PM IST

ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರನ್ನ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಸತ್ತ ನಾಯಿಗೆ ಹೋಲಿಸಿದ ಪ್ರಸಂಗ ಇಂದು ಕೋಲಾರದಲ್ಲಿ ನಡೆದಿದೆ.

R vartur prakash
ಆರ್.ವರ್ತೂರ್ ಪ್ರಕಾಶ್

ಕೋಲಾರ: ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರನ್ನ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಸತ್ತ ನಾಯಿಗೆ ಹೋಲಿಸಿದ ಪ್ರಸಂಗ ಇಂದು ಕೋಲಾರದಲ್ಲಿ ನಡೆದಿದೆ.

ಮಾಜಿ ಶಾಸಕ ವರ್ತೂರ್ ಪ್ರಕಾಶ್

ಇಂದು ಕೋಲಾರದಲ್ಲಿ ಮಾಜಿ ಶಾಸಕ ವರ್ತೂರ್ ಪ್ರಕಾಶ್ ತಮ್ಮ ಹುಟ್ಟುಹಬ್ಬದ ಹಿನ್ನೆಲೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಇವರ ಕೈಯಲ್ಲಿ ಒಬ್ಬ ಪಿಡಿಒ ಅಥವಾ ಒಬ್ಬ ಪೊಲೀಸ್ ಪೇದೆಯನ್ನ ವರ್ಗಾವಣೆ ಮಾಡುವುದಕ್ಕೆ ಆಗುವುದಿಲ್ಲ. ಇನ್ನು ಹಿಂದಿನ ಚುನಾವಣೆಯಲ್ಲಿ ಇವರು ಯಾರ ಯಾರ ಬಳಿ ಹಣ ತೆಗೆದುಕೊಂಡು ಚುನಾವಣೆ ಮಾಡಿದ್ದಾರೆ ಎಂದು ಗೊತ್ತಿದೆ. ಚುನಾವಣೆಯಲ್ಲಿ ಖರ್ಚು ಮಾಡಿರುವುದನ್ನ ಆಲೂಗಡ್ಡೆ ಮಾರಿ ತೀರುಸುತ್ತಾರಾ ಎಂದು ಪ್ರಶ್ನಿಸಿದರು. ಇನ್ನು ಮತ್ತೆ ಯಾವ ಸಂದರ್ಭದಲ್ಲಾದ್ರೂ ಚುನಾವಣೆ ಬರಬಹುದು. ನೀವೆಲ್ಲಾ ಸಿದ್ಧರಾಗಿ ಎಂದು ತಮ್ಮ ಅಭಿಮಾನಿಗಳಿಗೆ ಕರೆ ನೀಡಿದರು.

Intro:
ಆಂಕರ್ : ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರನ್ನ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಸತ್ತ ನಾಯಿಗೆ ಹೋಲಿಸಿದ ಪ್ರಸಂಗ ಇಂದು ಕೋಲಾರದಲ್ಲಿ ಜರುಗಿತು. Body:ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಒಬ್ಬ ಸತ್ತ ನಾಯಿ ಇದ್ದ ಹಾಗೆ ಎನ್ನುವುದರ ಮೂಲಕ ಮಾಜಿ ಶಾಸಕ ಆರ್.ವರ್ತೂರ್ ಪ್ರಕಾಶ್ ವಾಗ್ದಾಳಿ ನಡೆಸಿದ್ರು. ಇಂದು ಕೋಲಾರದಲ್ಲಿ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಹುಟ್ಟುಹಬ್ಬದ ಹಿನ್ನಲೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ ಶ್ರೀನಿವಾಸಗೌಡ ಅವರ ವಿರುದ್ದ ಏಕವಚನದಲ್ಲಿ ಪ್ರಹಾರ ನಡೆಸಿದ್ರು, ನಿನ್ನ ಕೈನಲ್ಲಿ ಒಬ್ಬ ಪಿಡಿಓ ಅಥವಾ ಒಬ್ಬ ಪೊಲೀಸ್ ಪೇದೆಯನ್ನ ವರ್ಗಾವಣೆ ಮಾಡುವುದಕ್ಕೆ ಆಗುವುದಿಲ್ಲ, ನೀನು ಎಂ.ಎಲ್.ಎ ಆಗಿದ್ದರೂ ಕೂಡ ಸತ್ತ ನಾಯಿಯ ಹಾಗೆ ಎಂದು ವಾಗ್ದಾಳಿ ನಡೆಸಿದ್ರು. ಇನ್ನು ಹಿಂದಿನ ಚುನಾವಣೆಯಲ್ಲಿ ನೀನು ಯಾರ ಯಾರ ಬಳಿ ಹಣತೆಗೆದುಕೊಂಡು ಚುನಾವಣೆ ಮಾಡಿದ್ದೀಯ ಎಂದು ಗೊತ್ತಿದೆ, ಚುನಾವಣೆಯಲ್ಲಿ ಖರ್ಚು ಮಾಡಿರುವುದನ್ನ ನೀನು ಆಲೂಗಡ್ಡೆ ಮಾರಿ ತೀರುಸುತ್ತೀಯ ಎಂದು ಪ್ರಶ್ನಿಸಿದ್ರು. Conclusion:ಇನ್ನು ಕಂಡವರ ಬಳಿ ದುಡ್ಡು ಹೊಡೆದು ರಾಜಕಾರಣ ಮಾಡುವತಹವರು ನೀನು, ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೆ ಯಾವ ಸಂದರ್ಭದಲ್ಲಾದ್ರೂ ಚುನಾವಣೆ ಬರಬಹುದು ನೀವೆಲ್ಲಾ ಸಿದ್ದರಾಗಿ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದ್ರು.

ಬೈಟ್ 1: ಆರ್.ವರ್ತೂರ್ ಪ್ರಕಾಶ್ (ಮಾಜಿ ಸಚಿವ)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.