ETV Bharat / state

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ: ಶಾಸಕ ನಾರಾಯಣಸ್ವಾಮಿ ಆರೋಪ

author img

By

Published : Apr 1, 2020, 9:05 PM IST

ಕೋಲಾರ ಜಿಲ್ಲಾ ಪಂಚಾಯ್ತಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಅಲ್ಲದೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ಬಂಗಾರಪೇಟೆ ಶಾಸಕ ಎಸ್.​ಎನ್.​ನಾರಾಯಣಸ್ವಾಮಿ ಆರೋಪಿಸಿದ್ದಾರೆ.

government  No grant for Corona control: MlA  allegation
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ: ಶಾಸಕ ಎಸ್.​ಎನ್.​ ನಾರಾಯಣಸ್ವಾಮಿ

ಕೋಲಾರ: ಕೊರೊನಾ ಕುರಿತು ನಡೆಯುತ್ತಿದ್ದ ಸಭೆ ಬಹಿಷ್ಕರಿಸಿ ಶಾಸಕರೊಬ್ಬರು ಹೊರ ನಡೆದ ಘಟನೆ ಕೋಲಾರದಲ್ಲಿ ನಡೆದಿದೆ.

ಶಾಸಕ ಎಸ್.​ಎನ್.​ನಾರಾಯಣಸ್ವಾಮಿ

ಕೋಲಾರ ಜಿಲ್ಲಾ ಪಂಚಾಯ್ತಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಅಲ್ಲದೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ಬಂಗಾರಪೇಟೆ ಶಾಸಕ ಎಸ್.​ಎನ್.​ನಾರಾಯಣಸ್ವಾಮಿ ಆರೋಪಿಸಿದರು. ಅಲ್ಲದೇ ಇಲ್ಲಿ ಅಧಿಕಾರಿಗಳು ಹೇಳುವ ಮಾಹಿತಿಗೂ ವಾಸ್ತವವಾಗಿ ಸ್ಥಳದಲ್ಲಿರುವ ಅಂಕಿ-ಅಂಶಕ್ಕೂ ಹೊಂದಾಣಿಕೆಯಾಗುತ್ತಿಲ್ಲ ಎಂದು ಆರೋಪಿಸಿದರು.

ಈ ವೇಳೆ ಮಧ್ಯಪ್ರವೇಶಿಸಿ ಶಾಸಕ ರಮೇಶ್ ಕುಮಾರ್​ ಸಮಾಧಾನಪಡಿಸಲು ಹೋದಾಗ, ಆಕ್ರೋಶಗೊಂಡ ಶಾಸಕ ನಾರಾಯಣಸ್ವಾಮಿ ಸಭೆಯಿಂದ ಏಕಾಏಕಿ ಎದ್ದು ಹೊರ ನಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.