ETV Bharat / state

ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಅಧಿಕಾರ ಮದ ಏರಿದೆ: ಹಿರಿಯ ಕಾಂಗ್ರೆಸ್​ ಮುಖಂಡ ಸುರ್ದಶನ್

author img

By

Published : Oct 21, 2020, 3:43 PM IST

ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಅಧಿಕಾರ ಮದ ಏರಿದೆ. ಹಾಗಾಗಿ ದುರಂಕಾರದ ಮತ್ತು ಬೇಜವಾಬ್ದಾರಿತನ ಹೇಳಿಕೆಗಳನನ್ನು ನೀಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್​ ಮುಖಂಡ ವಿ.ಆರ್.ಸುರ್ದಶನ್ ಹೇಳಿದರು.

ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಅಧಿಕಾರ ಮದ ಏರಿದೆ: ಹಿರಿಯ ಕಾಂಗ್ರೆಸ್​ ಮುಖಂಡ ಸುರ್ದಶನ್

ಕೋಲಾರ: ಡಿ.ಕೆ ಶಿವಕುಮಾರ್ ಮೀರ್ ಸಾಧಿಕ್ ಎಂದಿದ್ದ ಡಿಸಿಎಂ ಅಶ್ವತ್ಥ ನಾರಾಯಣಗೆ ಕೋಲಾರದಲ್ಲಿ ಹಿರಿಯ ಕಾಂಗ್ರೆಸ್​ ಮುಖಂಡ ವಿ.ಆರ್.ಸುರ್ದಶನ್ ಟಾಂಗ್ ನೀಡಿದ್ರು.

ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಅಧಿಕಾರ ಮದ ಏರಿದೆ: ಹಿರಿಯ ಕಾಂಗ್ರೆಸ್​ ಮುಖಂಡ ಸುರ್ದಶನ್

ಕೋಲಾರದ ಪತ್ರಕರ್ತರ ಭವನದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಸಂಬಂಧ ಕಾಂಗ್ರೆಸ್​ ಅಭ್ಯರ್ಥಿ ರಮೇಶ್ ಬಾಬುಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಅಧಿಕಾರ ಮದ ಏರಿದೆ. ಹಾಗಾಗಿ ದುರಂಕಾರದ ಮತ್ತು ಬೇಜವಾಬ್ದಾರಿತನ ಹೇಳಿಕೆಗಳನನ್ನು ನೀಡುತ್ತಿದ್ದಾರೆ. ಅದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದ್ರು.

ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ಮೀರ್ ಸಾಧಿಕ್ ಎಂದಿರುವ ಡಿಸಿಎಂ ಅಶ್ವತ್ಥ ನಾರಾಯಣ ರಾಜ್ಯದ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ರು. ಸರ್ಕಾರದ ಸಾಧನೆಗಳ ಬಗ್ಗೆ ಹೇಳಿಕೊಳ್ಳಲಿ, ಆದ್ರೆ ಟೀಕೆ ಮಾಡುವುದರಲ್ಲಿ ಬೇಜವಾಬ್ದಾರಿತನ ತೋರಬಾರದು. ಬಿಜೆಪಿ ಚಿಕ್ಕ ವಯಸ್ಸಿನಲ್ಲಿ ಡಿಸಿಎಂ ಪಟ್ಟ ಕೊಟ್ಟಿದೆ. ಅಧಿಕಾರದ ಮದ ತಲೆಗೆ ಹತ್ತಿಸಿಕೊಳ್ಳದೆ, ಈ ರೀತಿಯ ಟೀಕೆ, ಹೇಳಿಕೆಗಳನ್ನು ನೀಡುವುದನ್ನ ಬಿಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.