ಮಡಿಕೇರಿ(ಕೊಡಗು): ನಾಪೋಕ್ಲು ಸಮೀಪದ ಚೆರಿಯಪರಂಬು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕೊಡಗಿನಲ್ಲಿ ಮೊದಲೆಲ್ಲ ಹಬ್ಬ-ಹರಿದಿನಗಳಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯುತ್ತಿತ್ತು. ಆದರೆ ಕಳೆದೆರಡು ವರ್ಷದಿಂದ ಕೋವಿಡ್ ಕಾರಣಕ್ಕೆ ಅಷ್ಟಾಗಿ ಸ್ಪರ್ಧೆ ನಡೆದಿರಲಿಲ್ಲ. ಇದೀಗ ಕೊರೊನಾ ಸೋಂಕು ಹರಡುವಿಕೆ ತಗ್ಗಿದ್ದು ನಾಪೋಕ್ಲುವಿನ ನಾಲ್ನಾಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ರಾಜ್ಯಮಟ್ಟದ ಮುಕ್ತ ಸ್ಪರ್ಧೆ ಆಯೋಜಿಸಲಾಗಿತ್ತು. ಜೊತೆಗೆ, ವಿಶೇಷ ಪ್ರಯತ್ನವಾಗಿ ಮೊಟ್ಟೆಗೆ ಗುರಿಯಿಡುವ ಸ್ಪರ್ಧೆಯೂ ನಡೆಯಿತು.
ತುಂತುರು ಮಳೆಯ ನಡುವೆ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸ್ಪರ್ಧಿಗಳು ಆಗಮಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರಿ ಪರೀಕ್ಷೆಯಲ್ಲಿ ತೊಡಗಿದರು. ಮಕ್ಕಳು, ಹಿರಿಯರು, ಮಹಿಳೆಯರಿಗೆ ಪ್ರತ್ಯೇಕವಾಗಿ ಗುರಿ ಪರೀಕ್ಷೆ ನಡೆಸಲಾಯಿತು.