ಕೊಡಗು : ಲಾಕ್ಡೌನ್ ಪರಿಣಾಮ ಇದೀಗ ಆನೆಗಳ ಮೇಲೂ ಬೀರಿದೆ. ದುಬಾರೆ ಆನೆ ಶಿಬಿರದಲ್ಲಿರುವ ಆನೆಗಳ ಆಹಾರಕ್ಕೆ ಸಮಸ್ಯೆ ಉಂಟಾಗಿದೆ. ಲಾಕ್ಡೌನ್ನಿಂದಾಗಿ ಆನೆಗಳಿಗೆ ಸಮರ್ಪಕವಾಗಿ ಆಹಾರ ಸಾಮಗ್ರಿಗಳನ್ನು ಪೂರೈಸಲು ಆಗುತ್ತಿಲ್ಲ. ಇದರಿಂದ ಶಿಬಿರದಲ್ಲಿರುವ 30 ಆನೆಗಳಿಗೆ ಪ್ರತಿದಿನ ಕೊಡುತ್ತಿದ್ದ ಭತ್ತದ ಹುಲ್ಲು, ಬೆಲ್ಲದ ಕೊರತೆ ಕಾಡುತ್ತಿದೆ. ಜೊತೆಗೆ ಮಾವುತ, ಕವಾಡಿಗರಿಗೂ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಪಡಿತರ ಅಂಗಡಿಯಿಂದ ಕೇವಲ ಅಕ್ಕಿ, ಗೋಧಿಗಳ ಪೂರೈಸಲಾಗುತ್ತಿದೆ. ತರಕಾರಿ ಪೂರೈಕೆಯೂ ಇಲ್ಲದೆ ಸುಮಾರು 90 ಕುಟುಂಬ ಪರಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಾವುತ ಹಾಗೂ ಕವಾಡಿಗರು ಸೇರಿ 90 ಆದಿವಾಸಿ ಕುಟುಂಬಗಳು ನದಿಯಿಂದ ಆಚೆ ಇರುವುದರಿಂದ ಅಗತ್ಯ ವಸ್ತುಗಳ ಪೂರೈಕೆಗೆ ಆದಿವಾಸಿ ಕುಟುಂಬಗಳೂ ಹೆಣಗಾಡುತ್ತಿವೆ. ಯಾರಾದರೂ ದಾನಿಗಳು ಹಾಗೂ ಜಿಲ್ಲಾಡಳಿತ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅವರು ಮನವಿ ಮಾಡಿದ್ದಾರೆ.