ETV Bharat / state

ಹಾಡಿ ಜನರಿಗೆ ಆಧಾರ್: ಸಂಚಾರಿ ವಾಹನದ ಮೂಲಕ ಮನೆ ಭಾಗಿಲಿಗೆ ಸೌಲಭ್ಯ

author img

By

Published : Jul 27, 2019, 8:36 PM IST

ಹಾಡಿ ಜನರಿಗೆ ಆಧಾರ್ ಕಾರ್ಡ್ ಇಲ್ಲದೆ ಸರ್ಕಾರದಿಂದ ಸಿಗುವ ಸೌಲಭ್ಯ ಸಿಗುತ್ತಿರಲಿಲ್ಲ. ಹೇಗಾದರೂ ಮಾಡಿ ಇವರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ನಿರ್ಧರಿಸಿದ ಜಿಲ್ಲಾಡಳಿತ ಸಂಚಾರಿ ಆಧಾರ್ ನೊಂದಣಿಗೆ ಚಾಲನೆ ಕೊಟ್ಟಿತ್ತು. ಅದರಂತೆ ಎಲ್ಲಾ ಹಾಡಿಗಳಿಗೆ ತೆರಳುತ್ತಿರುವ ಆಧಾರ್ ನೋಂದಣಿ ಸಿಬ್ಬಂದಿ ಹಾಡಿ ಜನರಿಗೆ ಸ್ಥಳದಲ್ಲೇ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದಾರೆ.

ಬುಡಕಟ್ಟು ಜನರಿಗೆ ಆಧಾರ್

ಕೊಡಗು : ಅವರೆಲ್ಲ ಕಾಡಿನಲ್ಲಿ ಸ್ವಚ್ಚಂಧವಾಗಿ ಬದುಕಿ ಬಾಳುತ್ತಿದ್ದ ಮಕ್ಕಳು. ನಾಡಿನಿಂದ ದೂರವೇ ಉಳಿದಿರುವ ಅವರಿಗೆಲ್ಲ, ಆಧಾರ್ ಕಾರ್ಡ್ ಮರೀಚಿಕೆಯಾಗಿತ್ತು. ಆಧಾರ್ ಇಲ್ಲ ಎಂಬ ಕಾರಣಕ್ಕಾಗಿಯೇ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದರು. ಕೊಡಗು ಜಿಲ್ಲಾಡಳಿತದ ವಿನೂತನ ಹೆಜ್ಜೆಯಿಂದ‌ ಜನರು ಆಧಾರ್ ಕೈಗೆ ಸಿಗುವ ಖುಷಿಯಲ್ಲಿದ್ದಾರೆ.

ಹಾಡಿ ಜನರಿಗೆ ಸ್ಥಳದಲ್ಲೇ ಆಧಾರ್ ಕಾರ್ಡ್

ಬದುಕಿಗೆ ಆಧಾರವಿಲ್ಲದ ಬುಡಕಟ್ಟು ಜನರಿಗೆ ಆಧಾರ್ ಇಲ್ಲದೆ ಸರ್ಕಾರದಿಂದ ಸಿಗುವ ಸೌಲಭ್ಯ ಸಿಗುತ್ತಿರಲಿಲ್ಲ. ಹೇಗಾದರೂ ಮಾಡಿ ಇವರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ನಿರ್ಧರಿಸಿದ ಕೊಡಗು ಜಿಲ್ಲಾಡಳಿತ ಸಂಚಾರಿ ಆಧಾರ್ ನೊಂದಣಿಗೆ ಚಾಲನೆ ಕೊಟ್ಟಿತ್ತು.

ಹೀಗಾಗಿಯೇ ಜಿಲ್ಲೆಯ ಎಲ್ಲಾ ಹಾಡಿಗಳಿಗೆ ತೆರಳುತ್ತಿರುವ ಆಧಾರ್ ನೋಂದಣಿ ಸಿಬ್ಬಂದಿ ಹಾಡಿ ಜನರಿಗೆ ಸ್ಥಳದಲ್ಲೇ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೂ ಆಧಾರ್ ಮಾಡಿ ಕೊಡುತ್ತಿರುವುದರಿಂದ ವಿದ್ಯಾರ್ಥಿ ವೇತನ ಪಡೆಯಲು ಮತ್ತು ದಾಖಲಾತಿಗಳಿಗೆ ಪರದಾಡುತ್ತಿದ್ದ ಶಿಕ್ಷಕರಿಗೂ ಅನುಕೂಲ ಆಗ್ತಿದೆ. ಕಾಡಿನ ಮಕ್ಕಳಿಗೂ ಆಧಾರ್ ಕಾರ್ಡ್ ದೊರಕಿಸಿಕೊಟ್ಟು, ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡುವಲ್ಲಿ ಜಿಲ್ಲಾಡಳಿತ ಯಶ ಕಂಡಿದೆ.

Intro:ಹಾಡಿ ಜನರಿಗೆ ಆಧಾರ್ ; ಸಂಚಾರಿ ವಾಹನದ ಮೂಕಲ ಮನೆ ಭಾಗಿಲಿಗೆ ಸೌಲಭ್ಯ

ಕೊಡಗು: ಅವರೆಲ್ಲ ಕಾಡಿನಲ್ಲಿ ಸ್ವಚ್ಚಂದವಾಗಿ ಬದುಕು ಕಳೆಯುವ ಮಕ್ಕಳು. ನಾಡಿನಿಂದ ದೂರವೇ ಉಳಿದಿರುವ
ಅವರಿಗೆಲ್ಲ ಆಧಾರ್ ಕಾರ್ಡ್ ಅನ್ನೋದು ಮರಿಚಿಕೆಯಾಗಿತ್ತು. ಇನ್ನು ಆಧಾರ್ ಇಲ್ಲ ಎಂಬ ಕಾರಣಕ್ಕಾಗಿಯೇ ಸರ್ಕಾರದ ಹಲವು ಸವಲತ್ತುಗಳಿಂದ ವಂಚಿತರಾಗಿದ್ದರು. ಇದೀಗ ಕೊಡಗು ಜಿಲ್ಲಾಡಳಿತದ ವಿನೂತನ ಹೆಜ್ಜೆಯಿಂದ‌ ಜನರು ಆಧಾರ್ ಸಿಗುವ ಖುಷಿಯಲ್ಲಿದ್ದಾರೆ.

ನಾವೆಲ್ಲಾ ಕಾಡಿನಲ್ಲಿ ವಾಸಿಸುತ್ತಿಸುತ್ತಿರುವ ಹಾಡಿ ಜನ. ರೇಷನ್ ಕಾರ್ಡ್, ಆದಾಯ ದೃಢೀಕರಣ ಪತ್ರ, ಬ್ಯಾಂಕ್‌ ಅಕೌಂಡ್ ಎಲ್ಲವೂ ಇವರ ಜೀವನದಲ್ಲಿ ಮರಿಚಿಕೆ ಆಗಿತ್ತು.
ಏಕೆಂದರೆ ಪ್ರಮುಖ ದಾಖಲಾತಿ ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಮಕ್ಕಳೂ ದಾಖಲಾತಿ ಆಗಿರಲಿಲ್ಲ. ಇದೀಗ ಆಧಾರ್ ಕಾರ್ಡ್ ಇವರಿಗೆ ಸಿಗುತ್ತಿರುವುದರಿಂದ
ಸಾಕಷ್ಟು ಖುಷಿಯಾಗಿದ್ದಾರೆ ಎನ್ನುತ್ತಿದ್ದಾರೆ ಫಲಾನುಭವಿ ದಿವ್ಯಾ.

ಬೈಟ್-1 ದಿವ್ಯಾ, ಹಾಡಿಯ ಫಲಾನುಭವಿ.

ಬದುಕಿಗೆ ಆಧಾರವಿಲ್ಲದ ಬುಡಕಟ್ಟು ಜನರಿಗೆ ಆಧಾರ್ ಕಾರ್ಡ್ ಕೂಡ ಇಲ್ಲದೆ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿದ್ದರು. ಆದರೆ ಇದನ್ನು ಹೇಗಾದರೂ ಸರಿಮಾಡಿ ಎಲ್ಲಾ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ನಿರ್ಧರಿಸಿದ ಜಿಲ್ಲಾಡಳಿತ ಸಂಚಾರಿ ಆಧಾರ್ ನೊಂದಣಿಗೆ ಚಾಲನೆ ನೀಡಿದೆ. ಹೀಗಾಗಿಯೇ ಜಿಲ್ಲೆಯ ಎಲ್ಲಾ ಹಾಡಿಗಳಿಗೆ ತೆರಳುತ್ತಿರುವ ಆಧಾರ್ ನೋಂದಣಿ ಸಿಬ್ಬಂದಿ ಹಾಡಿ ಜನರಿಗೆ ಸ್ಥಳದಲ್ಲೇ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದಾರೆ. ಇದರಿಂದ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು
ಅನುಕೂಲವಾಯಿತು ಎನ್ನುವ ಖುಷಿಯಲ್ಲಿ ಇದ್ದಾರೆ.
ಇನ್ನೂ ಶಾಲಾ ವಿದ್ಯಾರ್ಥಿಗಳಿಗೂ ಆಧಾರ್ ಕಾರ್ಡ್ ಮಾಡಿ ಕೊಡುತ್ತಿರುವುದರಿಂದ ವಿದ್ಯಾರ್ಥಿ ವೇತನ ಪಡೆಯಲೂ ದಾಖಲಾತಿಗಳಿಗೆ ಪರದಾಡುತ್ತಿದ್ದ ಶಿಕ್ಷಕರಿಗೂ ಇದರಿಂದ ಅನುಕೂಲ ಆಗುತ್ತಿದೆ ಅಂತಿದ್ದಾರೆ ಆಶ್ರಮ ಶಾಲೆಯ ಶಿಕ್ಷಕ ಆನಂದ.

ಬೈಟ್-2 ಆನಂದ, ಆಶ್ರಮಶಾಲಾ ಶಿಕ್ಷಕ

ಒಟ್ಟಿನಲ್ಲಿ ಕಾಡಿನ ಮಕ್ಕಳಿಗೂ ಆಧಾರ್ ಕಾರ್ಡ್ ದೊರಕಿಸಿಕೊಟ್ಟು ಸರ್ಕಾರದ ಸೌಲಭ್ಯಗಳನ್ನು ಸಿಗುವಂತೆ ಮಾಡಲು ಜಿಲ್ಲಾಡಳಿತ ವಿನೂತನ ದಾರಿ ಕಂಡುಕೊಂಡಿದೆ.
ಜಿಲ್ಲಾಡಳಿತದ ಇಂತಹ ವಿನೂತನ ಕ್ರಮದಿಂದ ಆಧಾರ್ ಇಲ್ಲದೆ ಪರದಾಡುತ್ತಿದ್ದ ಹಾಡಿ ಜನರು ಮನೆ ಭಾಗಿಲಿಗೆ ಸರ್ಕಾರದ ಸವಲತ್ತು ಬಂತಲ್ಲಾ ಎಂಬ ಸಂತಸದಲ್ಲಿ ಇದ್ದಾರೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.