ಮಡಿಕೇರಿ: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಎಫ್​ಡಿಎ

author img

By

Published : Jul 18, 2022, 10:48 PM IST

ರವಿಕುಮಾರ್
ರವಿಕುಮಾರ್ ()

ಏಪ್ರಿಲ್ ನಲ್ಲಿ ನಿವೃತ್ತಿ ಹೊಂದಿದ ಸರ್ವೆ ಅಧೀಕ್ಷಕರು ತಮ್ಮ ನಿವೃತ್ತಿ ವೇತನ ಫೈಲ್ ಮೂವ್ ಮಾಡಿಸಲು ಕೊಡಗು ಜಿಲ್ಲೆಯ ಮಡಿಕೇರಿಯ ಖಜಾನೆ ಕಚೇರಿಯ ಎಫ್. ಡಿ. ಎ ರವಿಕುಮಾರ್ ಅವರನ್ನ ಸಂಪರ್ಕಿಸಿದ್ದಾರೆ. ಆಗ ಫೈಲ್ ಮೂವ್ ಮಾಡಲು 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.ಇದರಿಂದ ಬೇಸತ್ತ ನಿವೃತ್ತ ಸರ್ವೆ ಅಧೀಕ್ಷಕರು ಕೊಡಗು ಜಿಲ್ಲೆಯ ಎಸಿಬಿ ಪೊಲೀಸರ ಮೊರೆ ಹೋಗಿ ದೂರು ಕೊಟ್ಟಿದ್ದಾರೆ.

ಮಡಿಕೇರಿ: ನಿವೃತ್ತಿ ವೇತನ ಫೈಲ್ ಮೂವ್ ಮಾಡಲು ಲಂಚ ಪಡೆದ ಕೊಡಗು ಜಿಲ್ಲೆ ಖಜಾನೆಯ ಪ್ರಥಮ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾರೆ. ರವಿಕುಮಾರ್ 5 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಏಪ್ರಿಲ್ ನಲ್ಲಿ ನಿವೃತ್ತಿ ಹೊಂದಿದ ಸರ್ವೆ ಅಧೀಕ್ಷಕರು ತಮ್ಮ ನಿವೃತ್ತಿ ವೇತನ ಫೈಲ್ ಮೂವ್ ಮಾಡಿಸಲು ಕೊಡಗು ಜಿಲ್ಲೆಯ ಮಡಿಕೇರಿಯ ಖಜಾನೆ ಕಚೇರಿಯ ಎಫ್. ಡಿ. ಎ ರವಿಕುಮಾರ್ ಅವರನ್ನ ಸಂಪರ್ಕಿಸಿದ್ದಾರೆ. ಆಗ ಫೈಲ್ ಮೂವ್ ಮಾಡಲು 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಬೇಸತ್ತ ನಿವೃತ್ತ ಸರ್ವೆ ಅಧೀಕ್ಷಕರು ಕೊಡಗು ಜಿಲ್ಲೆಯ ಎಸಿಬಿ ಪೊಲೀಸರ ಮೊರೆ ಹೋಗಿ ದೂರು ಕೊಟ್ಟಿದ್ದಾರೆ.

ಎಸಿಬಿ ಎಸ್​ಪಿ ಸಚಿತ್ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲೆ ಎಸಿಬಿ ಅಧಿಕಾರಿಗಳು ಟ್ರಾಪ್ ಮಾಡಿದ್ದಾರೆ. ಕಚೇರಿಯಲ್ಲೇ 5 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಂಚದ ಹಣದ ಸಮೇತ ಆರೋಪಿ ರವಿಕುಮಾರ್ ಅವರನ್ನು ಬಂದಿಸಿದ್ದಾರೆ.

ಓದಿ: ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವರ್ಗಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.