ETV Bharat / state

ಪಿಎಸ್ಐ ಪರೀಕ್ಷೆ ಅಕ್ರಮ: ಸಿಐಡಿ ಕೈಗೆ ಸಿಗದ ದಿವ್ಯಾ, ಆರ್​ಟಿಐ ಕಾರ್ಯಕರ್ತ, ಪತ್ರಕರ್ತನ ಹೆಸರೂ ತಳಕು!

author img

By

Published : Apr 28, 2022, 12:02 PM IST

17 ದಿನಗಳಿಂದ ತೆಲೆ ತೆಲೆಮರಿಸಿಕೊಂಡು ಓಡಾಡುತ್ತಿರುವ ಅಕ್ರಮದ ಮುಖ್ಯ ಆರೋಪಿ ಎನ್ನಲಾದ ದಿವ್ಯಾ & ಗ್ಯಾಂಗ್ ಎಲ್ಲಿದ್ದಾರೆ ಅನ್ನೋದು ಇಲ್ಲಿವರಗೆ ಸುಳಿವು ಸಿಕ್ಕಿಲ್ಲ. ವಿದ್ಯಾ ಬಗ್ಗೆ ಮಾಹಿತಿ ಸಿಕ್ಕಲೆಲ್ಲ ಸಿಐಡಿ ಹೋಗಿ ಹುಡುಕಾಟ ನಡೆಸುತ್ತಿದ್ದಾರೆ. ಕಾಶ್ಮೀರದವರಗೆ ಸಿಐಡಿ ಶೋಧ ಮಾಡಿದರೂ ದಿವ್ಯಾ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದಾಳೆ.

ಪಿಎಸ್ಐ ಪರೀಕ್ಷೆ ಅಕ್ರಮ
ಪಿಎಸ್ಐ ಪರೀಕ್ಷೆ ಅಕ್ರಮ

ಕಲಬುರಗಿ: ರಾಜ್ಯಾದ್ಯಂತ ಭಾರಿ ಕೋಲಾಹಲಕ್ಕೆ ಕಾರಣವಾದ ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮದ ಪಾತ್ರಧಾರಿ ಹಾಗೂ ಸೂತ್ರಧಾರಿಗಳಿಗಾಗಿ ಸಿಐಡಿ ಶೋಧ ಕಾರ್ಯ ಮುಂದುವರೆಸಿದೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಶೋಧದಲ್ಲಿ ತೊಡಗಿರುವ ಸಿಐಡಿ ಹಲವು ಮಹತ್ವದ ಸಾಕ್ಷಿಗಳನ್ನು ಕಲೆ ಹಾಕುತ್ತಿದೆ. ಆರೋಪಿಗಳ ಬಂಧನಕ್ಕಿಂತ ಸಾಕ್ಷಿ ಸಂಗ್ರಹಕ್ಕೆ ಹೆಚ್ಚಿನ ಒತ್ತು ಕೊಡುತ್ತಿದೆ.

2021ರ ಅಕ್ಟೋಬರ್ 3ರಂದು 545 ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ರಾಜ್ಯಾದ್ಯಂತ 92 ಕೇಂದ್ರಗಳಲ್ಲಿ ಒಟ್ಟು 54,104 ಅಭ್ಯರ್ಥಿಗಳು ಪರೀಕ್ಷೆಗೆ ಬರೆದಿದ್ದರು. ಆದರೆ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆಯ ನಂತರ ಕೆಲವು ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆ ಸಿಐಡಿ ತನಿಖೆ ನಡೆಸಲಾಗುತ್ತಿದೆ.

ಜ್ಞಾನಜ್ಯೋತಿ ಕೇಂದ್ರದಲ್ಲಿ 7 ಅಭ್ಯರ್ಥಿಗಳ ಅಕ್ರಮ: ಜಿಲ್ಲೆಯಲ್ಲಿ ಒಟ್ಟು 11 ಪಿಎಸ್ಐ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಜಿಲ್ಲೆಯಿಂದ 92 ಅಭ್ಯರ್ಥಿಗಳು ನೇಮಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಾಜಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರವೊಂದರಲ್ಲಿಯೇ 11 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ.‌

ಇದರಲ್ಲಿ 7 ಅಭ್ಯರ್ಥಿಗಳು ಅಕ್ರಮದ ಹಾದಿಯಿಂದ ನೇಮಕ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿರುವುದು ಸಿಐಡಿ ತನಿಖೆಯಿಂದ ಬಯಲಾಗಿದೆ. ಇನ್ನುಳಿದ ನಾಲ್ವರಲ್ಲಿ ಇಬ್ಬರ ವಿಚಾರಣೆ ನಡೆದಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.‌ ಈ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿವರೆಗೆ 7 ಜನ ಅಭ್ಯರ್ಥಿಗಳು ಸೇರಿ ಒಟ್ಟು 16 ಜನರ ಬಂಧನವಾಗಿದೆ.

ದಿವ್ಯಾ ಹಾಗರಗಿಗಾಗಿ ಎಲ್ಲೆಡೆ ಶೋಧ: 17 ದಿನಗಳಿಂದ ತೆಲೆ ತೆಲೆಮರಿಸಿಕೊಂಡು ಓಡಾಡುತ್ತಿರುವ ಅಕ್ರಮದ ಮುಖ್ಯ ಆರೋಪಿ ಎನ್ನಲಾದ ದಿವ್ಯಾ & ಗ್ಯಾಂಗ್ ಎಲ್ಲಿದ್ದಾರೆ ಅನ್ನೋದು ಇಲ್ಲಿವರಗೆ ಸುಳಿವು ಸಿಕ್ಕಿಲ್ಲ. ವಿದ್ಯಾ ಬಗ್ಗೆ ಮಾಹಿತಿ ಸಿಕ್ಕಲೆಲ್ಲಾ ಸಿಐಡಿ ಹೋಗಿ ಹುಡುಕಾಟ ನಡೆಸುತ್ತಿದೆ. ಕಾಶ್ಮೀರದವರಗೆ ಸಿಐಡಿ ಶೋಧ ಮಾಡಿದರೂ ದಿವ್ಯಾ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ತೆಲೆ ಮರೆಸಿಕೊಂಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆ, ಅಲ್ಲಿಯೂ ಶೋಧ ನಡೆಸಲಾಗುತ್ತಿದೆ.

ಆರ್‌ಟಿಐ ಕಾರ್ಯಕರ್ತ, ಓರ್ವ ಪತ್ರಕರ್ತನ ಹೆಸರು ತಳಕು: ಈ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಓರ್ವ ಆರ್​ಟಿಐ ಕಾರ್ಯಕರ್ತ ಮತ್ತು ಓರ್ವ ಪರ್ತಕರ್ತನ ಹೆಸರು ಸಹ ತಳಕು ಹಾಕಿಕೊಂಡಿದೆ. ಈಗಾಗಲೇ ಆರ್​​ಟಿಐ ಕಾರ್ಯಕರ್ತನನ್ನು ಎರಡು ಬಾರಿ ಬೇರೆ ಬೇರೆ ಸ್ಥಳಕ್ಕೆ ಕರೆಸಿ ಸಿಐಡಿ ವಿಚಾರಣೆ ನಡೆಸಿದೆ. ಅಕ್ರಮದ ರೂವಾರಿಗಳ ಜೊತೆ ಅತಿ ಹೆಚ್ಚು ನಿಕಟ ಸಂಬಂಧ ಹೊಂದಿರುವ ಹಿನ್ನಲೆ ಆರ್​ಟಿಐ ಕಾರ್ಯಕರ್ತನ ವಿಚಾರಣೆ ಮಾಡಲಾಗಿದೆ.

ಇತ್ತ, ಮಹಾರಾಷ್ಟ್ರದ ಖಾಸಗಿ ವಾಹಿನಿಯೊಂದರಲ್ಲಿ ಕೆಲಸ ಮಾಡುವ ವ್ಯಕ್ತಿಯ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಸೊಲ್ಲಾಪೂರದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತ, ಆರೋಪಿ ಆರ್.ಡಿ.ಪಾಟೀಲ್​ನ ಸಹೋದರ ಎನ್ನಲಾಗಿದೆ. ಈತನನ್ನೂ ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ನಡೆಯುವಾಗಲೇ ನೇಮಕಾತಿ ವಿಭಾಗದ ಎಡಿಜಿಪಿ ವರ್ಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.