ಗಣೇಶೋತ್ಸವ: ಪ್ರಮೋದ್ ಮುತಾಲಿಕ್‌ ಸೇರಿ ನಾಲ್ವರ ಭಾಷಣಕ್ಕೆ ಕಲಬುರಗಿ ಡಿಸಿ ನಿರ್ಬಂಧ

author img

By

Published : Sep 20, 2022, 7:08 AM IST

Updated : Sep 20, 2022, 8:06 AM IST

Kn_klb_03

ಗಣೇಶ ಮೂರ್ತಿ ನಿಮಜ್ಜನದಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ನಾಲ್ವರು ಸಾರ್ವಜನಿಕ‌ ಭಾಷಣ ಮಾಡದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಕಲಬುರಗಿ: ಜೇವರ್ಗಿ ಪಟ್ಟಣದಲ್ಲಿ ಶ್ರೀರಾಮ ಸೇನೆ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ನಿಮಜ್ಜನ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ‌್ ಮುತಾಲಿಕ್ ಸೇರಿದಂತೆ ನಾಲ್ವರು ಸಾರ್ವಜನಿಕ‌ ಭಾಷಣ ಮಾಡದಂತೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ನಿರ್ಬಂಧ ವಿಧಿಸಿದ್ದಾರೆ.

Kn_klb_03
ಡಿಸಿ ಆದೇಶ

ಕಾನೂನು ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಪ್ರಮೋದ‌್ ಮುತಾಲಿಕ್, ಕುಂದಾಪುರನ ಕು.ಚೈತ್ರಾ ನಾಯಕ, ಕು.ಹಾರಿಕಾ ಮಂಜುನಾಥ ಹಾಗೂ ಕಾಳಿ ಶ್ರೀಸ್ವಾಮಿಗಳಿಗೆ ಸೆ.20ರ ಬೆಳಿಗ್ಗೆ 6 ಗಂಟೆಯಿಂದ ಸೆ.21ರ‌ ಮಧ್ಯರಾತ್ರಿ 12 ಗಂಟೆ ವರೆಗೆ ಸಾರ್ವಜನಿಕ‌ ಭಾಷಣ ಮಾಡದಂತೆ ಸಿ.ಆರ್.ಪಿ.ಸಿ ಕಾಯ್ದೆ-1973ರ ಸೆಕ್ಷನ್ 133, 143 ಹಾಗೂ 144ರನ್ವಯ ನಿರ್ಬಂಧಿಸಲಾಗಿದೆ ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.

ಜೇವರ್ಗಿಯ ಅಖಂಡೇಶ್ವರ ಎ.ಪಿ.ಎಂ.ಸಿ ಯಾರ್ಡ್ ಮತ್ತು ಗಣೇಶ ಚೌಕ್​ನಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ ನಿಮಜ್ಜನ ಇದೇ ಸೆ.21 ಬುಧವಾರ ನಡೆಯಲಿದೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮೋದ್ ಮುತಾಲಿಕ್​ಗೆ ದ.ಕ ಜಿಲ್ಲಾ ಪ್ರವೇಶ ನಿಷೇಧ

Last Updated :Sep 20, 2022, 8:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.