ETV Bharat / state

ಹಳೆ ವೈಷಮ್ಯದ ಹಿನ್ನೆಲೆ ಕಲಬುರಗಿಯಲ್ಲಿ ಯುವಕನ ಕಗ್ಗೊಲೆ

author img

By

Published : May 14, 2021, 3:20 PM IST

ಹಳೆ ವೈಷಮ್ಯದಿಂದ ಭೀಮರಾಯ್ ಎಂಬಾತನನ್ನು ತಲವಾರ್‌ನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರ್ (ಬಿ) ಗ್ರಾಮದಲ್ಲಿ ನಡೆದಿದೆ.

murder-in-kalburgi
ಹಳೆ ವೈಷಮ್ಯದ ಹಿನ್ನೆಲೆ ಕಲಬುರಗಿಯಲ್ಲಿ ಯುವಕನ ಕಗ್ಗೊಲೆ

ಕಲಬುರಗಿ: ಹಳೆ ವೈಷಮ್ಯದ ಹಿನ್ನೆಲೆ ತಲವಾರ್‌ನಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರ್ (ಬಿ) ಗ್ರಾಮದಲ್ಲಿ ನಡೆದಿದೆ.

ಭೀಮರಾಯ್(22 ) ಕೊಲೆಯಾದ ಯುವಕ. ಇಂದು ಬೆಳಗಿನ ಜಾವ 3 ಗಂಟೆಗೆ ಭೀಮರಾಯ್ ಮನೆಯಲ್ಲಿ ಮಲಗಿದ್ದಾಗ, ಅದೇ ಗ್ರಾಮದ 20 ವರ್ಷದ ಸಿದ್ದಪ್ಪ ಎಂಬಾತ ತಲವಾರ್‌ನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಓದಿ:ಕೊರೊನಾ ಎಫೆಕ್ಟ್: ಕುಲುಮೆಯಲ್ಲಿ ದುಡಿಮೆ ಕಂಡುಕೊಂಡ ಚಿತ್ರ ಸಾಹಿತಿ

ಸ್ಥಳಕ್ಕೆ ಚಿತ್ತಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಂತಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.