ETV Bharat / state

ಯುವತಿಯ ವಿಚಾರಕ್ಕೆ ಯುವಕನ ಕೊಲೆ ಪ್ರಕರಣ: ನಾಲ್ವರ ಬಂಧನ

author img

By

Published : Apr 26, 2020, 10:02 PM IST

ಯುವತಿಯ ಕಾರಣಕ್ಕೆ ಚಿರಂಜೀವಿ ಎಂಬಾತನನ್ನು ಹತ್ಯೆಗೈದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಬ್ರಹ್ಮಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

murder accused arrest in kalburgi
ಯುವಕನ ಕೊಲೆ ಪ್ರಕರಣ ಸಂಬಂಧಿಸಿದಂತೆ ನಾಲ್ವರ ಬಂಧನ

ಕಲಬುರಗಿ: ಯುವತಿಯ ವಿಚಾರವಾಗಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಪುರ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

murder accused arrest in kalburgi
ಯುವಕನ ಕೊಲೆ ಪ್ರಕರಣ: ನಾಲ್ವರ ಬಂಧನ

ಏಪ್ರಿಲ್ 24ರಂದು ನಗರದ ಮಾಂಗರವಾಡಿ ಬಡಾವಣೆಯ ಚಿರಂಜೀವಿ ಎಂಬಾತನನ್ನು ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದಿದ್ದರು. ಈ ಸಂಬಂಧ ಕಾಶಿನಾಥ ಉಪಾಧ್ಯಾ, ವಿಶ್ವನಾಥ ಉಪಾಧ್ಯಾಯ, ರಘುನಾಥ ಉಪಾಧ್ಯಾಯ, ಮೋಹನ ಬನಸಿಲ ಉಪಾಧ್ಯಾಯ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಬ್ರಹ್ಮಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.