ETV Bharat / state

ಸಿದ್ದರಾಮಯ್ಯ ವಿವೇಚನೆ ಅತ್ಯಂತ ದುರದೃಷ್ಟಕರ: ಶ್ರೀನಿವಾಸ ಪೂಜಾರಿ ಬೇಸರ

author img

By

Published : Sep 28, 2021, 1:19 PM IST

ಆರ್‌ಎಸ್‌ಎಸ್‌ ಸಂಘಟನೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಾಲಿಬಾನ್‌ಗೆ ಹೋಲಿಕೆ ವಿಚಾರ ತೀವ್ರವಾಗಿ ಖಂಡಿಸಿದರು‌. ಕೆಲವರ ಬಾಯಲ್ಲಿ ಭಗವದ್ಗೀತೆ ಬರುವುದಿಲ್ಲ. ಒಳ್ಳೆ ವಿಚಾರ ಹೇಳಬೇಕಾದರೆ ಮನಸ್ಸು ಶುದ್ಧ ಇರಬೇಕು ಎಂದು ಶ್ರೀನಿವಾಸ ಪೂಜಾರಿ ಕಿಡಿಕಾರಿದರು‌.

ಕಲಬುರಗಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ
ಕಲಬುರಗಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಕಲಬುರಗಿ: ಸಿದ್ದರಾಮಯ್ಯ ವಿವೇಚನೆ ಅತ್ಯಂತ ದುರದೃಷ್ಟಕರವಾಗಿದೆ. ಕೆಲವರ ಬಾಯಲ್ಲಿ ಭಗವದ್ಗೀತೆ ಬರುವುದಿಲ್ಲ. ಒಳ್ಳೆ ವಿಚಾರ ಹೇಳಬೇಕಾದರೆ ಮನಸ್ಸು ಶುದ್ಧ ಇರಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಸಂಘಟನೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಾಲಿಬಾನ್‌ಗೆ ಹೋಲಿಕೆ ವಿಚಾರ ತೀವ್ರವಾಗಿ ಖಂಡಿಸಿದರು‌. ಕೆಲವರ ಬಾಯಲ್ಲಿ ಭಗವದ್ಗೀತೆ ಬರುವುದಿಲ್ಲ. ಒಳ್ಳೆ ವಿಚಾರ ಹೇಳಬೇಕಾದರೆ ಮನಸು ಶುದ್ಧ ಇರಬೇಕು ಎಂದು ಕಿಡಿಕಾರಿದರು‌.

ಇನ್ನು ಇದೇ ವೇಳೆ, ಸಿಂದಗಿ - ಹಾನಗಲ್ ವಿಧಾನಸಭೆ ಉಪಚುನಾಣೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಕೋಟಾ ಶ್ರೀನಿವಾಸ, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಸುಸಂಘಟಿತ ರಾಜಕೀಯ ಪಕ್ಷವಾಗಿ ಬಿಜೆಪಿ ಚುನಾವಣೆ ಎದುರಿಸುತ್ತದೆ. ರಾಜ್ಯಾಧ್ಯಕ್ಷ ಕಟೀಲ್ ಮತ್ತು ಸಿಎಂ ಬೊಮ್ಮಾಯಿ‌ ನೇತೃತ್ವದಲ್ಲಿ ಉಪಚುನಾಣೆ ಸಮರ್ಥವಾಗಿ ಎದುರಿಸಲಿದ್ದೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.