ETV Bharat / state

ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ನಳಿನ್​ ಕುಮಾರ್​ ಕಟೀಲ್

author img

By

Published : Oct 27, 2021, 6:41 AM IST

Updated : Oct 27, 2021, 7:37 AM IST

ಸಿಂದಗಿ ಮತ್ತು ಹಾನಗಲ್​ನಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದೆ. ಕಾಂಗ್ರೆಸ್‌ ನಾಯಕರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಸೋಲಿನ ಭೀತಿಯಿಂದ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ನಳಿನ್​ ಕುಮಾರ್​ ಕಟೀಲ್ ಟೀಕಿಸಿದರು.

ನಳಿನ್​ ಕುಮಾರ್​ ಕಟೀಲ್
ನಳಿನ್​ ಕುಮಾರ್​ ಕಟೀಲ್

ಹಾವೇರಿ: ಕಲಬುರಗಿ, ಹುಬ್ಬಳ್ಳಿ ಹಾಗು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ನಮ್ಮ ವಿಜಯಯಾತ್ರೆಯ ಸಂಕೇತ. ಮುಂದಿನ ಎರಡು ಉಪಚುನಾವಣೆಯಲ್ಲೂ ಸಹ ನಾವು ಗೆಲ್ಲುತ್ತೇವೆ. ಆದ್ರೆ ಕಾಂಗ್ರೆಸ್‌ ನಾಯಕರು ಸೋಲಿನ ಭೀತಿಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ಟೀಕಿಸಿದ್ದಾರೆ.

ಹಾನಗಲ್ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿಂದಗಿ ಮತ್ತು ಹಾನಗಲ್​ನಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದೆ. ದಿ.ಉದಾಸಿಯವರ ಕೆಲಸಗಳಿಗೆ ಮತ ಕೊಡಬೇಕೆಂಬ ಭಾವನೆ ಜನರಲ್ಲಿದೆ. ಯಡಿಯೂರಪ್ಪ, ಬೊಮ್ಮಾಯಿ ಮತ್ತು ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ಹಾನಗಲ್ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ನಳಿನ್​ ಕುಮಾರ್​ ಕಟೀಲ್

ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ ಮತ್ತು ನಿರುದ್ಯೋಗ ಇದು ಕಾಂಗ್ರೆಸ್​ನವರು ದೇಶಕ್ಕೆ ಕೊಟ್ಟ ಕೊಡುಗೆ. ಇದೆಲ್ಲವನ್ನು ನಿವಾರಣೆ ಮಾಡುವ ಕೆಲಸವನ್ನು ನಮ್ಮ ಪ್ರಧಾನಿ ಮೋದಿಯವರು ಮಾಡ್ತಿದ್ದಾರೆ ಎಂದರು.

Last Updated : Oct 27, 2021, 7:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.