ETV Bharat / state

ಪಂಜಾಬ್​​ ರಸ್ತೆ ಅಪಘಾತ ಮೃತಪಟ್ಟ ಯೋಧ ಶಿವರಾಜ್​ ಅಂತ್ಯಕ್ರಿಯೆ

author img

By

Published : Oct 3, 2022, 10:56 PM IST

Updated : Oct 5, 2022, 9:33 PM IST

ಪಂಜಾಬ್​ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಾವೇರಿಯ ಯೋಧ ಶಿವರಾಜ್​ ಅವರ ಅಂತ್ಯಕ್ರಿಯೆ ಇಂದು ನಡೆದಿದೆ.

funeral-of-soldier-shivraj-who-died-in-a-punjab-road-accident
ಪಂಜಾಬ್​​ ರಸ್ತೆ ಅಪಘಾತ ಮೃತಪಟ್ಟ ಯೋಧ ಶಿವರಾಜ್​ ಅಂತ್ಯಕ್ರಿಯೆ

ಹಾವೇರಿ : ಶನಿವಾರ ಪಂಜಾಬ್‌ನ ಬಟಿಂಡಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರದ ಯೋಧ ಶಿವರಾಜ್ (23) ಅಂತ್ಯಕ್ರಿಯೆ ಇಂದು ಸಂಜೆ ನಡೆಯಿತು. ಯೋಧ ಶಿವರಾಜ್ ಗಂಗಮ್ಮನವರ್ ಪಾರ್ಥೀವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮೃತ ಶಿವರಾಜ್ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಮೃತ ಶರೀರವನ್ನು ಶೀಲವಂತಸೋಮಾಪುರಕ್ಕೆ ಕರೆತರುವ ಮೊದಲು ಗಂಗ್ಯಾನೂರು ಮತ್ತು ದುಂಡಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಗ್ರಾಮದ ನಿವಾಸಕ್ಕೆ ಆಗಮಿಸಿದ ಪಾರ್ಥೀವ ಶರೀರಕ್ಕೆ ಕುಟುಂಬದ ಸದಸ್ಯರು ಅಂತಿಮ ನಮನ ಸಲ್ಲಿಸಿದರು.ನಂತರ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಮೃತ ಯೋಧನಿಗೆ ಗೌರವ ಸಲ್ಲಿಸಿದರು.

ಯೋಧ ಶಿವರಾಜ್​ ಅಂತ್ಯಕ್ರಿಯೆ

ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಮೃತ ಯೋಧ ಶಿವರಾಜ್ ಗಂಗಮ್ಮನವರ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮಸ್ಥರೆಲ್ಲ ಬಂದು ಯೋಧ ಶಿವರಾಜ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಗ್ರಾಮದ ಬಸ್ ನಿಲ್ದಾಣದ ಬಳಿ ಶಿವರಾಜ್ ಅಂತ್ಯಕ್ರಿಯೆ ನಡೆಸಲಾಯಿತು.

ಇದನ್ನೂ ಓದಿ : ಪಂಜಾಬ್​​ ರಸ್ತೆ ಅಪಘಾತದಲ್ಲಿ ಹಾವೇರಿ ಯೋಧ ಸಾವು : ಸಿಎಂ ಸಂತಾಪ

Last Updated : Oct 5, 2022, 9:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.