ETV Bharat / state

ಪಂಚಮಸಾಲಿ 2ಎ ಮೀಸಲಾತಿ.. ಜ.13ಕ್ಕೆ ಸಿಎಂ ಮನೆಗೆ ಮುತ್ತಿಗೆ: ವಿಜಯಾನಂದ ಕಾಶಪ್ಪನವರ

author img

By

Published : Jan 10, 2023, 8:40 PM IST

ಪಂಚಮಸಾಲಿ 2ಎ ಮೀಸಲಾತಿ ವಿಚಾರ - ಜ.13ಕ್ಕೆ ಶಿಗ್ಗಾಂವಿಯಲ್ಲಿನ ಸಿಎಂ ಮನೆಗೆ ಮುತ್ತಿಗೆಗೆ ವಿಜಯಾನಂದ ಕಾಶಪ್ಪನವರ ಕರೆ - ಮನೆ ಮುತ್ತಿಗೆಗೆ ಬರುವಂತೆ ಪಂಚಮಸಾಲಿಗಳಿಗೆ ಕಾಶಪ್ಪನವರ ಒತ್ತಾಯ.

Kn_hvr_02_kodal_2a_7202143
ಪಂಚಮಸಾಲಿ 2ಎ ಮೀಸಲಾತಿ ಪ್ರತಿಭಟನೆ

ವಿಜಯಾನಂದ ಕಾಶಪ್ಪನವರ ಪ್ರತಿಕ್ರಿಯೆ

ಹಾವೇರಿ: ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವ ಕುರಿತಂತೆ ಸರ್ಕಾರ ಚೆಲ್ಲಾಟವಾಡಿಕೊಂಡೇ ಬರುತ್ತಿದೆ ಎಂದು ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಆರೋಪಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಳ್ಳಿನ ಸರಮಾಲೆಯನ್ನ ಸುರಿಸಿದೆ. ಮೊಸಳೆ ಕಣ್ಣೀರು ಸುರಿಸುವುದು, ತಾಯಿ ಮೇಲೆ ಆಣಿ ಮಾಡುವದು ಹಿಂದೆ ಸಹ ಸಿಎಂ ಯಡಿಯೂರಪ್ಪ ಇದೇ ರೀತಿ ಮಾಡಿದ್ದರು.

ಮಾಜಿ ಸಿಎಂ ಯಡಿಯೂರಪ್ಪ ಸಹ ಸಮಾಜ ಉಪಯೋಗಿಸಿಕೊಂಡು ಮುಖ್ಯಮಂತ್ರಿಯಾದರು. ಆದರೆ, ಪಂಚಮಸಾಲಿಗಳಿಗೆ ಮೋಸ ಮಾಡಿದರು. ತಮ್ಮ ಸಮಾಜಕ್ಕೆ ಮೀಸಲಾತಿ ತಗೆದುಕೊಂಡು ಈಗ ನಮ್ಮ ಸಮಾಜಕ್ಕೆ ಮೀಸಲಾತಿ ನೀಡದಿರುವದು ಎಷ್ಟು ಸರಿ. ನಮಗೆ ಮೀಸಲಾತಿ ಕೊಟ್ಟರೆ ನಮ್ಮ ಸಮಾಜ ಎಲ್ಲಿ ಮುಂದಕ್ಕೆ ಬರುವದು ಎಂಬ ಹೊಟ್ಟೆಕಿಚ್ಚು ಅವರಿಗೆ ಕಾಡುತ್ತಿದೆ ಹೊಟ್ಟೆಕಿಚ್ಚಿನಿಂದ ಯಡಿಯೂರಪ್ಪ ನಮಗೆ ಮೀಸಲಾತಿ ನೀಡಲಿಲ್ಲ. ಪ್ರಸ್ತುತ ಸಿಎಂ ಬಸವರಾಜ ಬೊಮ್ಮಾಯಿ ಸಹ ಅದನ್ನೇ ಮಾಡುತ್ತಾ ಇದ್ದಾರೆ ಎಂದು ಕಾಶಪ್ಪನವರ್ ಆರೋಪಿಸಿದರು.

ಮಾಡು ಇಲ್ಲವೇ ಮಡಿ ಹೋರಾಟ: ಇದರಿಂದ ರೋಸಿಹೋಗಿರುವ ಪಂಚಮಸಾಲಿಗಳು ಇದೀಗ ಅಂತಿಮ ಹಂತಕ್ಕೆ ಬಂದಿದ್ದೇವೆ. ಇದೇ 13 ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿರುವ ಸಿಎಂ ಮನೆ ಮುತ್ತಿಗೆ ಹಾಕುವ ಕಾರ್ಯವನ್ನ ಪಂಚಮಸಾಲಿಗಳು ಮಾಡಲಿದ್ದಾರೆ ಎಂದು ತಿಳಿಸಿದರು. ಇದು ಅಂತಿಮ ಹೋರಾಟ ಕೊನೆಯ ಹೋರಾಟ ಮಾಡು ಇಲ್ಲವೆ ಮಡಿ, ಮಡಿಯುವುದಾದರೇ ಮೀಸಲಾತಿ ಪಡೆದು ಮಡಿ ಎಂಬ ಹೋರಾಟ. ಸರ್ಕಾರ ಮೀಸಲಾತಿ ನೀಡಬೇಕು, ಇಲ್ಲ ತಿರಸ್ಕಾರ ಮಾಡಬೇಕು ಎರಡರಲ್ಲಿ ಒಂದಾಗಬೇಕು. ಪ್ರತಿ ಬಾರಿ ಹೋರಾಟ ಕೊನೆಯ ಹೋರಾಟ ಎಂದು ಹೇಳಿ ಹೇಳಿ ನನಗೆ ಬೇಸರವಾಗಿದೆ. ಆದರೆ ಇದು ನಿಜವಾಗಿ ಕೊನೆಯ ಹೋರಾಟ ಎಲ್ಲ ಪಂಚಮಸಾಲಿ ಸಿಎಂ ಮನೆ ಮುತ್ತಿಗೆಗೆ ಬರಬೇಕು ಎಂದು ಕಾಶಪ್ಪನವರ್ ಒತ್ತಾಯಿಸಿದ್ದಾರೆ.

ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ: ವಿಧಾನಸಭೆ ಚುನಾವಣೆಗೆ 80 ದಿನಗಳು ಬಾಕಿ ಇದ್ದು ನಮ್ಮ ಅಂತಿಮ ಹೋರಾಟ ಇದರಲ್ಲಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ. ಪಂಚಮಸಾಲಿಗಳು 150 ಕ್ಷೇತ್ರಗಳಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದೇವೆ. ಇದು ಸಿಎಂಗೆ ಸಹ ಗೊತ್ತಿದೆ ಇದೇ ರೀತಿ ಚೆಲ್ಲಾಟ ಆಡಿದರೆ 13 ಕ್ಕೆ ಮನೆ ಮುತ್ತಿಗೆ ಹಾಕಿ ಅಂತಿಮ ಹೋರಾಟ ಕೈಗೊಳ್ಳುತ್ತೇವೆ. ರಾಜ್ಯ ಸರ್ಕಾರ ಆಗುವುದಿಲ್ಲ ಎಂದು ತಿಳಿಸಿದರೇ ದೆಹಲಿಗೆ ಪಾದಯಾತ್ರೆ ಮಾಡುತ್ತೇವೆ. ಅಲ್ಲಿನ ಪಾರ್ಲಿಮೆಂಟ್ ಮುತ್ತಿಗೆ ಹಾಕುವುದಾಗಿ ತಿಳಿಸಿದರು.

ನಮಗೆ 2ಎ ಸಮಾನ ಪ್ರತಿಶತ 15 ರಷ್ಟು ಮೀಸಲಾತಿ ನೀಡಬೇಕು. ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಬಾರದು ಎಂಬ ಕಾಣದ ಕೈಗಳು ಸರ್ಕಾರದಲ್ಲಿಯೇ ಇವೆ. ಸಚಿವರಿದ್ದಾರೆ ಹಿಂದೆ ಡಿಸಿಎಂ ಆದವರು ಇದ್ದಾರೆ. ಸರ್ಕಾರದಲ್ಲಿರುವವ ನಮ್ಮವರು ಸಹ ನಮ್ಮ ಜೊತೆ ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯಶ್ರೀಗಳು ಮಾತನಾಡಿ, ’’ಮೀಸಲಾತಿ ಘೋಷಣೆಗೆ ಸರ್ಕಾರ ಎರಡು ತಿಂಗಳು ಕೇಳುತ್ತಿದೆ. ಆದರೆ ಸರ್ಕಾರ ಎರಡು ತಿಂಗಳು ಕೇಳಿ ಚುನಾವಣೆ ನೀತಿ ಸಂಹಿತಿ ಬಂದರೆ ಮತ್ತೆ ಮುಂದುಡಲಾಗುತ್ತೆ. ಅದಕ್ಕಾಗಿ ಇದೇ 13 ರೊಳಗೆ ಸರ್ಕಾರ ಮೀಸಲಾತಿ ನೀಡಬೇಕು. 13 ರೊಳಗಾಗಿ ಸಿಎಂ ನಮ್ಮ ಸಮಾಜದ ಮುಖಂಡರ ಸಭೆ ಕರೆದು ಸ್ಪಷ್ಟೀಕರಣ ನೀಡಲಿ ಇಲ್ಲದಿದ್ದರೆ ಮುಂದಿನ ಹೋರಾಟದ ಬಗ್ಗೆ ತಿಳಿಸುವುದಾಗಿ’’ ಶ್ರೀಗಳು ತಿಳಿಸಿದರು.

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ವಿಚಾರ: ಸರ್ಕಾರಕ್ಕೆ ಮತ್ತೆ ಗಡುವು ನೀಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ

ಇದನ್ನೂ ಓದಿ: ಬೇಡಿಕೆ ಪೂರೈಸದಿದ್ದರೆ ಮನೆ ಮುಂದೆ ಧರಣಿ ಕೂರುತ್ತೇವೆ: ಪಂಚಮಸಾಲಿ ಶ್ರೀಗಳ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.