ETV Bharat / state

ಅರಕಲಗೂಡಿನಲ್ಲಿ ಎಸ್​ಬಿಐ ನೌಕರ ಆತ್ಮಹತ್ಯೆ

author img

By

Published : Nov 18, 2020, 9:38 AM IST

ಅರಕಲಗೂಡು ಪಟ್ಟಣದಲ್ಲಿ ಎಸ್​ಬಿಐ ಬ್ಯಾಂಕ್​ ಕ್ಯಾಶಿಯರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.

dsd
ಎಸ್​ಬಿಐ ನೌಕರ ಆತ್ಮಹತ್ಯೆ

ಅರಕಲಗೂಡು: ಪಟ್ಟಣದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಸ್​ಬಿಐ ನೌಕರ ಆತ್ಮಹತ್ಯೆ ಶರಣಾಗಿದ್ದಾರೆ.

ಎಸ್​ಬಿಐ ನೌಕರ ಆತ್ಮಹತ್ಯೆ

ಬಿಹಾರ ಮೂಲದ ಪ್ರಕಾಶ್ ಕುಮಾರ್ ಸಿಂಗ್ ನೇಣಿಗೆ ಕೊರಳೊಡ್ಡಿದವ. ತಾಲೂಕಿನ ಕಸಬಾ ಹೋಬಳಿ ಹೆಬ್ಬಾಲೆ ಗ್ರಾಮದ ಎಸ್​ಬಿಐ ಶಾಖೆಯಲ್ಲಿ ಕ್ಯಾಶಿಯರ್ ಆಗಿ ಈತ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ವ್ಯಕ್ತಿಯ ಕುಟುಂಬದವರು ಬಿಹಾರಕ್ಕೆ ತೆರಳಿದ ವೇಳೆ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಕುಟುಂಬದವರು ಕರೆ ಮಾಡಿದಾಗ ಸ್ಪಂದಿಸದ ಕಾರಣ ಸ್ಥಳೀಯ ಎಸ್​ಬಿಐ ಬ್ಯಾಂಕ್ ಶಾಖೆ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ. ಈ ವೇಳೆ ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.