ETV Bharat / state

ಸಾರ್ವಜನಿಕ ಸಮಸ್ಯೆ ನಿವಾರಿಸುವಲ್ಲಿ ನಗರಸಭೆ ವಿಫಲ, ಸಾರ್ವಜನಿಕರ ಆಕ್ರೋಶ

author img

By

Published : Dec 8, 2019, 7:46 PM IST

ಹಾಸನ ನಗರಸಭೆ ಸಾರ್ವಜನಿಕ ಸಭೆಯಲ್ಲಿ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಎದುರು ಸಾರ್ವಜನಿಕರು ಪ್ರಮುಖ ಸಮಸ್ಯೆಗಳನ್ನು ತೆರೆದಿಟ್ಟರು.

ಸಾರ್ವಜನಿಕ ಸಮಾಲೋಚನೆ ಸಭೆ
ಸಾರ್ವಜನಿಕ ಸಮಾಲೋಚನೆ ಸಭೆ

ಹಾಸನ : ನಗರದ ಸಂತೆಪೇಟೆಯಲ್ಲಿರುವ ನಗರಸಭೆಯ ಕುವೆಂಪು ಸಭಾಂಗಣದಲ್ಲಿ 2020-21ನೇ ಸಾಲಿನ ಆಯವ್ಯಯದ ರೂಪುರೇಷೆ ಕುರಿತಂತೆ ಮೊದಲನೇ ಸುತ್ತಿನ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಎದುರು ಸಾರ್ವಜನಿಕರು ಪ್ರಮುಖ ಸಮಸ್ಯೆಗಳನ್ನು ತೆರೆದಿಟ್ಟರು.

ಸಾರ್ವಜನಿಕ ಸಮಾಲೋಚನೆ ಸಭೆ

ಬೀದಿ ದೀಪ, ಕಸ ವಿಲೇವಾರಿ, ವಾಯುಮಾಲಿನ್ಯ, ರಸ್ತೆ ಸಿಗ್ನಲ್​ ಸಮಯದಲ್ಲಿ ಪಾದಚಾರಿಗಳಿಗೆ ಆಗುತ್ತಿರುವ ತೊಂದರೆ, ಶಾಲೆಗಳ ಸಮಸ್ಯೆ, ಬೀದಿ ಬದಿ ವ್ಯಾಪಾರಿಗಳಿಂದ ಆಗುತ್ತಿರುವ ತೊಂದರೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ವಿವಾರಿಸುವ ನಿಟ್ಟಿನಲ್ಲಿ ನಗರಸಭೆ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ನಗರಸಭೆ ಕಾರ್ಯವೈಖರಿಯನ್ನು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ರು.

ಸಾರ್ವಜನಿಕರ ಅಹವಾಲುಗಳಿಗೆ ಉತ್ತರಿಸಿದ ನಗರಸಭೆ ಆಯುಕ್ತ ಕೃಷ್ಣಮೂರ್ತಿ, ವಿದ್ಯುತ್​ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು.

ವಾರ್ಡ್ ಸದಸ್ಯ ಮಂಜುನಾಥ್ ಮಾತನಾಡಿ, ಅಂಬೇಡ್ಕರ್ ಪುಣ್ಯತಿಥಿ ಕಾರ್ಯಕ್ರಮ ನಡೆದಿದೆ. ನಗರಸಭೆಯಲ್ಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ಒಂದು ಹಾರ ತಂದು ಹಾಕಲು ಹಣ ಇಲ್ಲವೇ ಎಂದು ಪ್ರಶ್ನಿಸಿದರು. ಸರ್ಕಾರದಿಂದ ಅನುದಾನದ ರೂಪದಲ್ಲಿ ಬರುವ ಹಣವೆಷ್ಟು? ಪರಿಶಿಷ್ಟ ಜಾತಿ/ಪಂಗಡದವರಿಗೆ ಮೀಸಲು ಹಣ ಕೊಡುತ್ತಿದ್ದೀರಾ? ಎಂದು ಪ್ರಶ್ನಿಸಿದರು. ಸರ್ಕಾರದಿಂದ ಬರುವ ಅನುದಾನವನ್ನು ನಗರಸಭೆಯ 35 ವಾರ್ಡ್‌ಗಳಿಗೂ ಸಮನಾಗಿ ಹಂಚಬೇಕು ಎಂದು ಸಲಹೆ ನೀಡಿದರು.

Intro:ಹಾಸನ: ನಗರದ ಸಂತೇಪೇಟೆಯಲ್ಲಿರುವ ನಗರಸಭೆ ಕುವೆಂಪು ಸಭಾಂಗಣದಲ್ಲಿ ೨೦೨೦-೨೧ನೇ ಸಾಲಿನ ಆಯ-ವ್ಯಯದ ರೂಪುರೇಷೆ ಕುರಿತಂತೆ ಮೊದಲನೇ ಸುತ್ತಿನ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಎದುರು ಸಾರ್ವಜನಿಕರು ಒಂದೊಂದಾಗಿ ನಗರದ ಪ್ರಮುಖ ಸಮಸ್ಯೆಯನ್ನು ತೆರೆದಿಟ್ಟರು.
೧ನೇ ವಾರ್ಡ್ ಪ್ರಗತಿ ನಗರದಲ್ಲಿ ಹಗಲು ಹೊತ್ತಿನಲ್ಲಿ ಬೀದಿ ದೀಪಗಳು ಊರಿಯುತ್ತಿರುತ್ತದೆ, ಕಳೆದ ಹಲವಾರು ವರ್ಷಗಳಿಂದ ನಾನೇ ಬೀದಿ ದೀಪಗಳನ್ನು ಒಂದನೇ ವಾರ್ಡಿನಲ್ಲಿ ಆಫ್ ಮಾಡುತ್ತಿದ್ದೇನೆ. ಒಲ್ಲವಾದರೇ ಇಡೀ ದಿನ ವಿದ್ಯುತ್ ದೀಪ ಚಾಲನೆಯಲ್ಲಿರುತ್ತದೆ. ಪ್ರತಿ ನಗರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು ಯಾವ ಪ್ರಯೋಜನವಾಗಿರುವುದಿಲ್ಲ, ಇನ್ನು ಯುಜಿಡಿ ನೀರು ಓಪನಾಗಿ ಹರಿಯುತ್ತಿದ್ದರೂ ಸರಿಪಡಿಸಿರುವುದಿಲ್ಲ. ವಾಸನೆ ಕುಡಿದುಕೊಂಡು ಜೀವನ ಸಾಗಿಸಬೇಕಾಗಿದೆ. ಈ ಯುಜಿಡಿ ಲೈನ್ ಸರಿಪಡಿಸಲು ಇಲ್ಲಿವರೆಗೂ ಲಕ್ಷಾಂತರ ರೂಗಳು ಖರ್ಚು ಆಗಿದ್ದರೂ ಕೆಲಸವಾಗಿರುವುದಿಲ್ಲ. ನಗರಸಭೆ ಸಿಬ್ಬಂದಿಗಳು ಸ್ವಚ್ಛತೆ ಮಾಡುತ್ತಿದ್ದರೂ ಕಸವನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚುತ್ತಿದ್ದಾರೆ. ಇಡೀ ನಗರವೆಲ್ಲಾ ಹೊಗೆಮಯವಾಗುತ್ತಿದ್ದು, ಇದನ್ನು ತಪ್ಪಿಸಿ ಎಂದು ಅನೇಕ ಬಾರಿ ಹೇಳಿದರೂ ಯಾವ ಪ್ರಯೋಜನವಾಗಿರುವುದಿಲ್ಲ. ನಗರದ ಜಿಲ್ಲಾ ಸರಕಾರಿ ಆಸ್ಪತ್ರೆ ಬಳಿ ಉದ್ದಕ್ಕೂ ಕಸಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಹಬ್ಬ-ಹರಿದಿನಗಳಲ್ಲಿ ರಸ್ತೆ ಬದಿಯಲ್ಲೆ ಅಂಗಡಿ ಹಾಕಿ ರಸ್ತೆ ಸಂಪೂರ್ಣ ಜಾಮ್ ಆಗುತ್ತದೆ. ಸಂತೇಪೇಟೆ ವೃತ್ತದ ಬಳಿ ಇರುವ ವಸ್ತು ಪ್ರದರ್ಶನ ಆವರಣದಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಟ್ಟರೆ ಉತ್ತಮ.
ದಯಮಾಡಿ ಗಮನಹರಿಸಿ. ನಗರಸಭೆ ವ್ಯಾಪ್ತಿ ನಿರ್ವಹಣೆ ಮಾಡುವಲ್ಲಿ ಸೋತಿದ್ದೀರಿ ಎಂದು ನಗರಸಭೆ ಕಾರ್ಯವೈಕರಿಯನ್ನು ದೂರಿದರು.
ಎಂದು ಸಮಾಜ ಸೇವಕ ರಾಜೀವ್‌ಗೌಡ ನಗರಸಭೆ ಆಯುಕ್ತರ ಗಮನಸೆಳೆದರು.
ಇದಕ್ಕೆ ಉತ್ತರಿಸಿದ ನಗರಸಭೆ ಆಯುಕ್ತ ಕೃಷ್ಣಮೂರ್ತಿರವರು, ಬೀದಿ ದೀಪಗಳ ಪಾಲನೆ ನಮಗೆ ಸೇರುವುದಿಲ್ಲ ಇದು ವಿದ್ಯುತ್ ಇಲಾಖೆ ಸಿಬ್ಬಂದಿಯವರು ಮಾಡಬೇಕು. ಹಬ್ಬ-ಹರಿದಿನಗಳಲ್ಲಿ ವ್ಯಾಪಾರ ಮಾಡುವ ಬಗ್ಗೆ ಈಗಾಗಲೇ ಶಾಸಕರು ರೂಪರೇಶ ಮಾಡಿದ್ದಾರೆ. ಪುಡ್ ಕೋರ್ಟ್ ಮಾಡಲು ಅನೇಕರ ಸಲಹೆಯನ್ನು ಪಡೆಯಲಾಗಿದೆ. ಬೀದಿ ಬದಿ ವ್ಯಾಪಾರಸ್ತರಿಗೆ ಅವರಿಗೆ ಆಕ್ಟ್ ಶುರುವಾಗಿದ್ದು, ಎಲ್ಲಿ ಟ್ರಾಫೀಕ್ ಸಮಸ್ಯೆ ಇದೆ ಬಗೆಹರಿಸಲಾಗುವುದು. ಮಳೆ ಹೆಚ್ಚಾಗಿರುವುದರಿಂದ ಯುಜಿಡಿ ನೀರು ರಸ್ತೆ ಮೇಲೆ ಹರಿದಿದೆ ಎಂದರು. ಹಾಗೇ ಉಳಿದ ನಗರ ಸ್ವಚ್ಛತೆ ಬಗ್ಗೆ ಗಮನಕೊಡುವುದಾಗಿ ಹೇಳಿದರು.
ನಗರದ ಎನ್.ಆರ್. ವೃತ್ತದಲ್ಲಿ ಮೇಲು ಸೇತುವೆ ಮಾಡುವುದು ಉತ್ತಮ. ಸಿಗ್ನಲ್ ಬಂದಾಗ ಪಾದಾಚಾರಿಗಳು ತಿರುಗಾಡಲು ಯಾವ ಅವಕಾಶ ಕೊಟ್ಟಿರುವುದಿಲ್ಲ. ರಸ್ತೆಗಳ ಜಾಗ ಹೊತ್ತುವರಿಯಾಗಿ ಯಾವ ಬಸ್ಸುಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ಕಸ್ತೂರ ಬಾ ರಸ್ತೆಯಲ್ಲಿ ಹೂವನ್ನು ಮಾರಾಟ ಮಾಡುವವರಿಗೆ ಶಾಶ್ವತ ಜಾಗ ಕಲ್ಪಿಸಿಕೊಡಬೇಕು. ವಾಲ್‌ಮೆನ್‌ಗಳಿ ರಾತ್ರಿ ಸಮಯದಲ್ಲಿ ಟಾರ್ಚ್ ಕೊಡುವ ವ್ಯವಸ್ಥೆ ಮಾಡಿ ಎಂದು ಮನೋಹರ್ ನಗರಸಭೆ ಆಯುಕ್ತರ ಗಮನಸೆಳೆದರು.
ನಗರಸಭೆ ಎರಡನೇ ವಾರ್ಡ್ ಸದಸ್ಯ ಮಂಜುನಾಥ್ ಮಾತನಾಡಿ, ನೆನ್ನೆ ಅಂಬೇಡ್ಕರ್ ಪುಣ್ಯ ತಿಥಿ ಕಾರ್ಯಕ್ರಮ ನಡೆದಿದೆ. ನಗರಸಭೆಯಲ್ಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ಒಂದು ಹಾರ ತಂದು ಹಾಕಲು ಹಣ ಇಲ್ಲವೇ ಎಂದು ಪ್ರಶ್ನಿಸಿದರು. ಸರಕಾರದ ಅನುಧಾನ ಎಷ್ಟು ಬರುತ್ತದೆ, ಪರಿಶಿಷ್ಟ ಜಾತಿ/ಪಂಗಡದವರಿಗೆ ಮೀಸಲು ಹಣ ಕೊಡುತ್ತಿದ್ದೀರಾ.. ಇಲ್ಲಿವರೆಗೂ ಎಷ್ಟು ಖರ್ಚು ಮಾಡುತ್ತಿದ್ದೀರಾ.. ಸರಕಾರದಿಂದ ಬರುವ ಅನುಧಾನವನ್ನು ನಗರಸಭೆಯ ೩೫ ವಾರ್ಡ್‌ಗಳಿಗೂ ಸಮನಾಗಿ ಹಂಚಬೇಕು, ಅಂಗನವಾಡಿಗಳ ಬಗ್ಗೆ ಸಲಹೆ ನೀಡಿ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ನಗರಸಭೆ ಆಯುಕ್ತರು, ಪರಿಶಿಷ್ಟ ಜಾರಿ ಮತ್ತು ಪಂಗಡಕ್ಕೆ ಕಳೆದ ವರ್ಷ ೧ ಕೋಟಿ ೩೯ ಲಕ್ಷದ ೨೮ ಸಾವಿರ ರೂಗಳನ್ನು ನಿಗಧಿ ಮಾಡಲಾಗಿತ್ತು. ಇಲ್ಲಿವರೆಗೂ ೪೦ ಲಕ್ಷ ಖರ್ಚಾಗಿದೆ. ಮತ್ತೆ ೪೨ ಲಕ್ಷ ರೂಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ಕೊಡಲಾಗುತ್ತಿದೆ. ಎಲ್ಲಾ ಕಾಮಗಾರಿಗಳು ನಡೆಯುತ್ತಿದೆ ಎಂದು ವಿವರ ಕೊಟ್ಟರು.Body:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.