ETV Bharat / state

ಮಲೆನಾಡಿನಲ್ಲಿ ಕಾಡಾನೆಗಳ ಹಿಂಡು... ಕಾಫಿ ತೋಟದ ಕಾರ್ಮಿಕರಲ್ಲಿ ಆತಂಕ

author img

By

Published : Oct 12, 2019, 8:29 PM IST

ನಾಲ್ಕು ಆನೆಗಳು ತಮ್ಮ ಮರಿಗಳೊಂದಿಗೆ ಕಾಫಿ ತೋಟದಲ್ಲಿ ಕಾಣಿಸಿಕೊಂಡಿದ್ದು, ಕಾರ್ಮಿಕರನ್ನು ಭಯಭೀತರನ್ನಾಗಿಸಿವೆ.

ಮಲೆನಾಡಿನಲ್ಲಿ ಕಾಡಾನೆಗಳ ಹಿಂಡು

ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಮಲಗಳಲೆ ಗ್ರಾಮದಲ್ಲಿ ನಾಲ್ಕು ಆನೆಗಳು ತಮ್ಮ ಮರಿಗಳೊಂದಿಗೆ ಕಾಫಿ ತೋಟದಲ್ಲಿ ಓಡಾಡುವ ಮೂಲಕ ತೋಟದ ಕಾರ್ಮಿಕರನ್ನು ಭಯಭೀತರನ್ನಾಗಿಸಿವೆ.

ಮಲೆನಾಡಿನಲ್ಲಿ ಪ್ರತಿನಿತ್ಯ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಕಾಡಂಚಿನಲ್ಲಿ ಮತ್ತು ಕಾಡುಗಳಲ್ಲಿ ಆನೆಗಳಿಗೆ ಬೇಕಾಗುವಂತಹ ಹಲಸು, ಬೈನೆ, ಬಿದಿರು ಮುಂತಾದವುಗಳು ಕಡಿಮೆಯಾಗುತ್ತಿರುವುದು ನಾಡಿನಡೆಗೆ ಬರಲು ಪ್ರಮುಖ ಕಾರಣವಾಗಿದೆ. ಈಗಾಗಲೇ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳು, ಕಾಡಾನೆಗಳು ನಾಡಿಗೆ ಬರುವುದಕ್ಕೆ ಪ್ರಮುಖ ಕಾರಣ ಕಾಡಿನ ಒತ್ತುವರಿ ಮತ್ತು ಕಾಡಂಚಿನ ಭಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವುದು ಎಂಬ ಮಾಹಿತಿ ನೀಡಿದ್ದಾರೆ ಎಂದು ಸ್ವತಃ ಸಂಸದರೇ ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ.

ಮಲೆನಾಡಿನಲ್ಲಿ ಕಾಡಾನೆಗಳ ಹಿಂಡು

ಇದು ಮಲೆನಾಡು ಭಾಗದ ಕೆಲವು ಮಂದಿ ಕಾಡುಗಳನ್ನು ನಾಶ ಮಾಡಿ ಅಕ್ರಮವಾಗಿ ಕಾಫಿ ತೋಟಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರಾ...? ಹಾಗಿದ್ರೆ ಅರಣ್ಯ ಭೂಮಿ ಒತ್ತುವರಿ ಆಗಿರುವುದೇ ಇದಕ್ಕೆಲ್ಲಾ ಕಾರಣವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರವೇ ಉತ್ತರ ನೀಡಬೇಕಾಗಿದೆ. ಜೊತೆಗೆ ಕಾಡು ಪ್ರಾಣಿಗಳ ನಾಡಿನ ವಲಸೆಗೆ ಬ್ರೇಕ್ ಹಾಕಬೇಕಿದೆ.

Intro:ಕಾಡಾನೆಗಳಿಗೂ ಆಲೂರು-ಸಕಲೇಶಪುರಕ್ಕೂ ಅದೇನೋ ಒಂಥರಾ ನಂಟು. ಮಲ್ನಾಡು ಜನ ಎಷ್ಟು ಬಾರಿ ಓಡಿಸಿದರು ಕಾಡಾನೆಗಳು ಮತ್ತೆ ಮತ್ತೆ ಕಾಫಿ ತೊಟಕ್ಕೆ ಲಗ್ಗೆ ಇಡುತ್ತಿವೆ.

ಹೌದು ಇವತ್ತು ಕೂಡ ಆಲೂರು ತಾಲೂಕಿನ ಮಲಗಳಲೆ ಗ್ರಾಮದಲ್ಲಿ ನಾಲ್ಕು ಆನೆಗಳು ತಮ್ಮ ತಮ್ಮ ಮರಿಗಳೊಂದಿಗೆ ಕಾಫಿ ತೋಟದಲ್ಲಿ ಓಡಾಡುವ ಮೂಲಕ ಕೂಲಿಕಾರ್ಮಿಕರನ್ನು ಭಯಭೀತರನ್ನಾಗಿಸಿವೆ.

ಪ್ರತಿನಿತ್ಯ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು ಕಾಡಂಚಿನಲ್ಲಿ ಮತ್ತು ಕಾಡುಗಳಲ್ಲಿ ಆನೆಗಳಿಗೆ ಬೇಕಾಗುವಂತಹ ಹಲಸು, ಬೈನೆ, ಬಿದಿರು ಮುಂತಾದವುಗಳು ಕಡಿಮೆಯಾಗುತ್ತಿರುವುದು ನಾಡಿನಡೆಗೆ ಬರಲು ಪ್ರಮುಖ ಕಾರಣವಾಗಿದೆ.

ಇನ್ನು ಈಗಾಗಲೇ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳು ಸಂಸದರು ಕಾಡಾನೆಗಳು ನಾಡಿಗೆ ಬರುವುದಕ್ಕೆ ಪ್ರಮುಖ ಕಾರಣ ಕಾಡಿನ ಒತ್ತುವರಿ ಮತ್ತು ಕಾಡಂಚಿನ ಭಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವುದು ಎಂಬ ಮಾಹಿತಿಯನ್ನು ನೀಡಿದ್ದಾರೆ ಎಂಬುದು ಸ್ವತಃ ಸಂಸದರೇ ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ.

ಹೀಗಾಗಿ ಮಲೆನಾಡು ಭಾಗದ ಕೆಲವು ಮಂದಿ ಕಾಡುಗಳನ್ನು ನಾಶಮಾಡಿ ಅಕ್ರಮವಾಗಿ ಕಾಫಿ ತೋಟಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರಾ. . ? ಹಾಕಿದ್ರೆ ಅರಣ್ಯ ಭೂಮಿ ಒತ್ತುವರಿ ಆಗಿರುವುದೇ ಇದಕ್ಕೆಲ್ಲಾ ಕಾರಣವೇ ಪ್ರಶ್ನೆ ಒಂದು ಈಗ ಉದ್ಭವವಾಗಿದೆ.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರವೇ ಉತ್ತರ ನೀಡಬೇಕಾಗಿದೆ ಜೊತೆಗೆ ಕಾಡುಪ್ರಾಣಿಗಳ ನಾಡಿನ ವಲಸೆಗೆ ಬ್ರೇಕ್ ಆಗಬೇಕಿದೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.