ETV Bharat / state

ಅಕ್ರಮ ಗೋಮಾಂಸ ಮಾರಾಟ: ಕಸಾಯಿಖಾನೆಗಳ ಮೇಲೆ ಅಧಿಕಾರಿಗಳಿಂದ ದಾಳಿ‌

author img

By

Published : May 4, 2019, 4:06 AM IST

ಅನಧಿಕೃತ ಕಸಾಯಿಖಾನೆಗಳ ಮೇಲೆ ದಾಳಿ. ಗೋಮಾಂಸ ವಶ, ಕಸಾಯಿಖಾನೆಗೆ ಬೀಗ.

ಅಕ್ರಮ ಗೋಮಾಂಸ ಮಾರಾಟ

ಹಾಸನ/ಬೇಲೂರು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್ ಹಾಗೂ ಪೊಲೀಸ್ ಸಿಬ್ಬಂದಿ ನೇತೃತ್ವದ ತಂಡ ದಾಳಿ ನಡೆಸಿ‌ ಮಾಂಸ ವಶಪಡಿಸಿಕೊಂಡಿದೆ.

ಪಟ್ಟಣದಲ್ಲಿನ ಅನಧಿಕೃತ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿ ಕಸಾಯಿಖಾನೆಗಳನ್ನು ಬಂದ್ ಮಾಡಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಾಧ್ಯಮಗಳಲ್ಲಿ ಕಳೆದ ಮೂರು ದಿನಗಳಿಂದ ಸುದ್ದಿ ಪ್ರಸಾರವಾದ ಹಿನ್ನೆಲೆ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ, ಅಂಗಡಿಗಳನ್ನು ಬಂದ್ ಮಾಡಲಾಗಿದೆ ಎಂದರು.

ಅಕ್ರಮ ಗೋಮಾಂಸ ಮಾರಾಟ

ಈಗಾಗಲೇ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅವರ ಗಮನಕ್ಕೂ ತರಲಾಗಿದ್ದು, ಅವರ ಆದೇಶದಂತೆ ವಿಶ್ವ ಪ್ರಸಿದ್ಧ ಬೇಲೂರು ಹಾಗೂ ಹಳೇಬೀಡಿಗೆ ಲಕ್ಷಾಂತರ ಪ್ರವಾಸಿಗರು ಆಗಮಿಸುವುದರಿಂದ ಪಟ್ಟಣದಲ್ಲಿ ಸ್ವಚ್ಛತೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಮಾಂಸದ ಅಂಗಡಿಗಳ ತೆರೆಯಲು ಅವಕಾಶ ನೀಡುವುದಿಲ್ಲ. ಪುರಸಭೆಯ ಆದೇಶ‌ ಮೀರಿ ಅಂಗಡಿಗಳನ್ನು ತೆರೆದರೆ ಕಠಿಣವಾಗಿ ಕ್ರಮ ಜರುಗಿಸಲಾಗುವುದು. ಅಲ್ಲದೆ, ಅಂಗಡಿ ತೆರೆಯದಂತೆ ನೋಡಿಕೊಳ್ಳಲು ಸ್ವತಃ ನಾವೇ ಪ್ರತಿನಿತ್ಯ ಪರಿಶೀಲನೆ ನಡೆಸುತ್ತೆವೆ ಎಂದು ಮಾಹಿತಿ ನೀಡಿದರು.

ಅಂಗಡಿ ಮಾಲೀಕರ ಜೊತೆ ನಮ್ಮ ಸಿಬ್ಬಂದಿ ಕೈ ಜೋಡಿಸಿರುವುದು ಕಂಡು ಬಂದಲ್ಲಿ ಅವರ ವಿರುದ್ಧವೂ ಸೂಕ್ತ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು. ತಾಲೂಕು ಆರೋಗ್ಯ ಅಧಿಕಾರಿ ವೆಂಕಟೇಶ್, ಪರಿಸರ ಅಭಿಯಂತರ ಮಧುಸೂಧನ್, ಕಂದಾಯ ಅಧಿಕಾರಿ ಬಸವರಾಜ ಶಿಗ್ಗಾವಿ ಇದ್ದರು.

Intro:ಅಕ್ರಮ ದನದ ಮಾಂಸ ಮಾರಾಟ ಅಧಿಕಾರಿಗಳಿಂದ ದಾಳಿ‌

ಹಾಸನ/ಬೇಲೂರು: ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್ ಹಾಗೂ ಪೋಲಿಸ್ ಸಿಬ್ಬಂದಿ ನೇತೃತ್ವದ ತಂಡ ದಾಳಿ ನಡೆಸಿ‌ ಮಾಂಸ ವಶಪಡಿಸಿಕೊಂಡರು.
ಪಟ್ಟಣದಲ್ಲಿನ ಅನಧಿಕೃತ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿ ಕಸಾಯಿಖಾನೆಗಳನ್ನು ಬಂದ್ ಮಾಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,ಮಾಧ್ಯಮಗಳಲ್ಲಿ ಕಳೆದ ಮೂರು ದಿನಗಳಿಂದ ಸುದ್ದಿ ಹಿನ್ನಲೆಯಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಗೊ ಮಾಂಸ ವಶಪಡಿಸಿಕೊಂಡಿದ್ದೇವೆ. ಅಲ್ಲದೆ, ಅಂಗಡಿಗಳನ್ನು ಬಂದ್ ಮಾಡಲಾಗಿದೆ ಎಂದರು.
ಈಗಾಗಲೇ ಜಿಲ್ಲಾಧಿಕಾರಿಗಳಿಗೆ, ಉಪವಿಭಾಗ ಅಧಿಕಾರಿಗಳು, ತಹಸೀಲ್ದಾರ್ ಅವರ ಗಮನಕ್ಕೂ ತರಲಾಗಿದೆ. ಇವರ ಆದೇಶದಂತೆ ವಿಶ್ವ ಪ್ರಸಿದ್ಧವಾಗಿರುವ ಬೇಲೂರು ಹಾಗೂ ಹಳೇಬೀಡಿಗೆ ಲಕ್ಷಾಂತರ ಪ್ರವಾಸಿಗರು ಆಗಮಿಸುವುದರಿಂದ ಪಟ್ಟಣವನ್ನು ಅತಿ ಹೆಚ್ಚಿನ ಸ್ವಚ್ಛತೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.ಇನ್ನು ಮುಂದೆ ಯಾವುದೇ ಕಾರಣಕ್ಕೂ ದನದ ಮಾಂಸದ ಅಂಗಡಿಗಳ ತೆರೆಯಲು ಅವಕಾಶ ನೀಡುವುದಿಲ್ಲ.ಪುರಸಭೆಯ ಆದೇಶ‌ ಮೀರಿ ಅಂಗಡಿಗಳನ್ನು ತೆರೆದರೆ ಕಠಿಣವಾಗಿ ಕ್ರಮ ಜರುಗಿಸಲಾಗುವುದು. ಅಲ್ಲದೆ, ಅಂಗಡಿ ತೆರೆಯದಂತೆ ನೋಡಿಕೊಳ್ಳಲು ಸ್ವತಃ ನಾವೇ ಪ್ರತಿನಿತ್ಯ ಪರಿಶೀಲನೆ ನಡೆಸುತ್ತೆವೆ. ಅಂಗಡಿ ಮಾಲೀಕರ ಜೊತೆ ನಮ್ಮ ಸಿಬ್ಬಂದಿಗಳು ಕೈ ಜೋಡಿಸಿರುವುದು ಕಂಡು ಬಂದಲ್ಲಿ ಅವರ ವಿರುದ್ಧವೂ ಸೂಕ್ತ ಕ್ರಮ ಜರುಗಿಸಲಾಗುವುದು. ಈ ಸಬಂಧ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ವೆಂಕಟೇಶ್,ಪರಿಸರ ಅಭಿಯಂತರ ಮಧುಸೂಧನ್,ಕಂದಾಯ ಅಧಿಕಾರಿ ಬಸವರಾಜ ಶಿಗ್ಗಾವಿ ಇದ್ದರು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ.

Body:0Conclusion:0

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.