ETV Bharat / state

ಸಿದ್ದರಾಮಯ್ಯ,ಡಿಕೆಶಿ ಸಿಎಂ ಆಗೋದು ಹಗಲುಗನಸು: ಸಚಿವ ಸಿಸಿ ಪಾಟೀಲ್

author img

By

Published : Jun 24, 2021, 9:06 PM IST

ಡಿಕೆಶಿ ಮತ್ತು ಸಿದ್ದರಾಮಯ್ಯ ಒಂದೊಂದು ನಾಟಕ ಮಾಡಿ ಅದರಲ್ಲಿ ಸಿಎಂ ಆಗಲಿ ಎಂದು ಸಚಿವ ಸಿಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಸಚಿವ ಸಿಸಿ ಪಾಟೀಲ್
ಸಚಿವ ಸಿಸಿ ಪಾಟೀಲ್

ಗದಗ: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಿಎಂ ಆಗೋದು ಹಗಲು ಕನಸು. ಒಂದು ಕಡೆ ಸಿದ್ದರಾಮಯ್ಯ ಮತ್ತೊಂದ್ಕಡೆ ಡಿಕೆಶಿ ನಾನೇ ಸಿಎಂ ಅಂತಿದಾರೆ. ಈ ರಾಜ್ಯಕ್ಕೆ ಎಷ್ಟು ಜನ ಸಿಎಂ ಅನ್ನೋದು ನನಗೆ ತಿಳಿಯುತ್ತಿಲ್ಲಾ ಅಂತಾ ಸಚಿವ ಸಿಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಸಚಿವ ಸಿಸಿ ಪಾಟೀಲ್

ಜಿಲ್ಲಾ ಆಡಳಿತ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಇನ್ನೂ ಸಮಯ ಇದೆ. ಈಗಲೇ ಮುಂದಿನ ಸಿಎಂ ಅಂತಿದಾರೆ, ಮುಂದಿನ ಸಿಎಂ ಕ್ಯಾಂಪೇನ್​ಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲಬೇಕು ಅಂದರೆ 113 ಸೀಟ್ ಬೇಕು. ಬಳಿಕ ಶಾಸಕಾಂಗ ಸಭೆಯಲ್ಲಿ ಸಿಎಂ ನಿರ್ಧಾರ ಮಾಡ್ತಾರೆ.

ನಮ್ಮಲ್ಲಿ ಶಾಸಕರು ಮುಖ್ಯಮಂತ್ರಿಯನ್ನ ಆರಿಸುತ್ತೇವೆ. ಕಾಂಗ್ರೆಸ್​ನಲ್ಲಿ ದೆಹಲಿಯಿಂದ ಚೀಟಿ ಯಾರ ಪರವಾಗಿ ಬರುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲಾ. ಇಬ್ಬರ ಹೊರತುಪಡಿಸಿ ಬೇರೆಯವರಿಗೆ ಬಂದರೇ ಏನಾಗುತ್ತೆ. ಹೇಳಿಕೆ ನೀಡುವುದಕ್ಕೆ ಏನು. ಹಣವಂತೂ ಖರ್ಚು ಆಗುವುದಿಲ್ಲ ಅಂತ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ನಾಯಕರ ಸಿಎಂ ಕ್ಯಾಂಪೇನ್​ಗೆ ಮಿರ್ಚಿ ಕಥೆ ಹೇಳಿದ ಸಚಿವರು, ತೋಂಟದಾರ್ಯ ಮಠದ ಸ್ವಾಮೀಜಿ ಈ ಹಿಂದೆ ಕಥೆಯೊಂದನ್ನ ಹೇಳ್ತಿದ್ರು. ಮಠದ ಎದುರಿಗೆ ಒಬ್ಬ ವ್ಯಕ್ತಿ ಕೂತು ಏನೋ ತಿಂದಹಾಗೆ ಮಾಡುತ್ತಿದ್ದನಂತೆ. ಸ್ವಾಮಿಗಳು ಕೇಳಿದ್ರೆ ಆ ವ್ಯಕ್ತಿ ಮಿರ್ಚಿ ತಿಂದಹಾಗೆ ಸುಮ್ನೆ ಮಾಡುತ್ತಿದ್ದೇನೆ ಎಂದಿದ್ದನಂತೆ.

ತಿಂದಹಾಗೆ ಮಾಡೋದಾದ್ರೆ ಧಾರವಾಡ ಪೇಡಾ ತಿನ್ನು ಗೋಕಾಕ್​ ಕರದಂಟು ತಿನ್ನು ಎಂದು ಸ್ವಾಮಿಗಳು ಹೇಳಿದ್ದರಂತೆ. ಅದರಂತೆ ನೀವು ಕನಸು ಕಾಣೋದಾದ್ರೆ ಪ್ರಧಾನ ಮಂತ್ರಿ, ವರ್ಡ್ಡ್ ಬ್ಯಾಂಕ್ ಅಧ್ಯಕ್ಷ ಆಗೋದನ್ನು ಕಾಣಿ ಅಂತಾ ಕಾಂಗ್ರೆಸ್​ ನಾಯಕರಿಗೆ ಟಾಂಗ್​ ನೀಡಿದ್ದಾರೆ.

ಓದಿ:Article 370 ಮರುಸ್ಥಾಪನೆಗೆ ಎಲ್ಲ ಪಕ್ಷಗಳ ಬೇಡಿಕೆ.. ಐತಿಹಾಸಿಕ ಸರ್ವಪಕ್ಷ ಸಭೆಯಲ್ಲಿ ಏನೆಲ್ಲ ನಡೀತು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.