ETV Bharat / state

ತಲ್ವಾರ್​​​ನಿಂದ ಕೇಕ್​ ಕತ್ತರಿಸಿ ವಿಕೃತಿ: ಬರ್ತ್‌ಡೇ ಬಾಯ್‌ಗೆ ಪೊಲೀಸರಿಂದ ಶಾಕ್‌

author img

By

Published : Sep 9, 2021, 4:54 PM IST

ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಯುವಕನೋರ್ವ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.

Youth cut the cake by talwar
ತಲ್ವಾರ್​​​ನಿಂದ ಕೇಕ್​ ಕತ್ತರಿಸಿದ ಯುವಕ

ಧಾರವಾಡ: ತಲ್ವಾರ್​​​ನಿಂದ ಕೇಕ್​ ಕತ್ತರಿಸಿ ಯುವಕನೋರ್ವ ಹುಟ್ಟುಹಬ್ಬ ಆಚರಿಸಿಕೊಂಡಿರುವ ಘಟನೆ ತಾಲೂಕಿನ ಹೊರವಲಯದಲ್ಲಿ ನಡೆದಿದೆ.

ಸಲಕಿನಕೊಪ್ಪ ಗ್ರಾಮದ ಪ್ರವೀಣ ಸಂದಿಮನಿ ಎಂಬಾತ ಹೊರವಲಯದಲ್ಲಿರುವ ಸಾಯಿ ದಾಬಾದಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ವಿಕೃತಿ ಪ್ರದರ್ಶಿಸಿದ್ದ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಗ್ರಾಮೀಣ ಪೊಲೀಸ್​ ಠಾಣಾ ಅಧಿಕಾರಿಗಳು ಯುವಕನನ್ನು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿದ್ದವರಿಗೆ ಬಿಗ್‌ ಶಾಕ್‌; ಮನೆ ಬೀಗ ಒಡೆದು ಕೆಜಿಗಟ್ಟಲೆ ಚಿನ್ನ, ಕೋಟಿ ಕೋಟಿ ನಗದು ಕಳ್ಳತನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.