ETV Bharat / state

ಜಲಮಂಡಳಿ ಗುತ್ತಿಗೆ ನೌಕರರ ಪಾದಯಾತ್ರೆ: ಸಿಎಂ ಮನೆ ಮುತ್ತಿಗೆ ಯತ್ನ ತಡೆದ ಡಿಸಿ

author img

By

Published : May 1, 2022, 10:43 PM IST

ಧಾರವಾಡ ಜಲಮಂಡಳಿ ಕಚೇರಿಯಿಂದ ಆರಂಭವಾದ ಗುತ್ತಿಗೆ ನೌಕರರ ಪಾದಯಾತ್ರೆ ಅವಳಿ ನಗರದ ಮಧ್ಯೆ ರಾಯಾಪೂರದಲ್ಲಿ ಕೊನೆಗೊಂಡಿತು.

ಜಲಮಂಡಳಿ ಗುತ್ತಿಗೆ ನೌಕರರ ಪಾದಯಾತ್ರೆ
ಜಲಮಂಡಳಿ ಗುತ್ತಿಗೆ ನೌಕರರ ಪಾದಯಾತ್ರೆ

ಧಾರವಾಡ: ಜಲಮಂಡಳಿ ಗುತ್ತಿಗೆ ನೌಕರರು ಹುಬ್ಬಳ್ಳಿಯಲ್ಲಿರುವ ಮುಖ್ಯಮಂತ್ರಿ ‌ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ. ಅವಳಿ ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಎಲ್ ಆ್ಯಂಡ್ ಟಿ ಕಂಪನಿಗೆ ನೀಡಿದ ಮೇಲೆ ನೌಕರರು ಪ್ರತಿಭಟನೆ ನಡೆಸಿದ್ದಾರೆ.

ಜಲಮಂಡಳಿ ಗುತ್ತಿಗೆ ನೌಕರರ ಪಾದಯಾತ್ರೆ

ಧಾರವಾಡ ಜಲಮಂಡಳಿ ಕಚೇರಿಯಿಂದ ಆರಂಭವಾದ ಗುತ್ತಿಗೆ ನೌಕರರ ಪಾದಯಾತ್ರೆ ಅವಳಿ ನಗರದ ಮಧ್ಯೆ ರಾಯಾಪೂರದಲ್ಲಿ ಕೊನೆಗೊಂಡಿತು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ ಹಾಗೂ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರು ಪಾದಯಾತ್ರೆ ತಡೆದರು. ನೌಕರರ ಪಾದಯಾತ್ರೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದರು. ಪಾದಯಾತ್ರೆಯ ದಾರಿಯುದ್ದಕ್ಕೂ ಮುಖಂಡರು ಪಾನೀಯ, ನೀರು, ಮಜ್ಜಿಗೆ, ಊಟ ಫ್ರೂಟ್​ ಸಲಾಡ್ ವ್ಯವಸ್ಥೆ ಮಾಡಿದ್ದರು.

ಓದಿ: ಬಳ್ಳಾರಿ: ಮಟ್ಕಾ ಬುಕ್ಕಿಗಳನ್ನು ಗಡಿಪಾರು ಮಾಡಲು ಪಟ್ಟಿ ಸಿದ್ಧಪಡಿಸಿದ ಪೊಲೀಸ್​ ಇಲಾಖೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.