ಧಾರವಾಡ: ಕಾಂಗ್ರೆಸ್ ಮುಖಂಡನ ವಿರುದ್ಧ ದೂರು ನೀಡಿದ ಶೋ ರೂಂ ಮ್ಯಾನೇಜರ್​

author img

By

Published : Sep 21, 2022, 5:19 PM IST

showroom manager complained against congress leader

ಕಾಂಗ್ರೆಸ್​ ಮುಖಂಡ ನಾಗರಾಜ್ ಗೌರಿ ವಿರುದ್ಧ ಶೋ ರೂಂ​ ಮ್ಯಾನೇಜರ್ ದೂರು ನೀಡಿದ್ದಾರೆ. ಶೋರೂಂ ಆವರಣದಲ್ಲಿ ಕುಡಿವ ನೀರಿನ ಪೈಪ್ ಲೈನ್ ಹಾಳಾಗಿರುವ ವಿಚಾರವಾಗಿ ಮಾತನಾಡಿದ್ದಕ್ಕೆ, ಈ ರೀತಿ ದೂರು ನೀಡಲಾಗಿದೆ ಎಂದು ನಾಗರಾಜ್​ ಗೌರಿ ಆರೋಪಿಸಿದ್ದಾರೆ.

ಧಾರವಾಡ: ರಾಯಾಪೂರದ ಕಾರ್ ಶೋ ರೂಂ​ನ ಮ್ಯಾನೇಜರ್​ ಕಾಂಗ್ರೆಸ್ ಮುಖಂಡನ ವಿರುದ್ಧ ದೂರು ನೀಡಿದ್ದಾರೆ. ಶಾಸಕ ಅರವಿಂದ ಬೆಲ್ಲದ ಮಾಲೀಕತ್ವದ ಶೋ ರೂಂ​ ಮ್ಯಾನೇಜರ್ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮ್ಯಾನೇಜರ್ ಮೃತ್ಯುಂಜಯ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶೋರೂಂ ಆವರಣದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾಳಾಗಿರುವ ವಿಚಾರವಾಗಿ ಕಾಂಗ್ರೆಸ್​ ಮುಖಂಡ ನಾಗರಾಜ್ ಗೌರಿ ಧ್ವನಿ ಎತ್ತಿದ್ದರು. ಅಲ್ಲದೇ ಶೋ ರೂಂಗೆ ಹೋಗಿ ಈ ಬಗ್ಗೆ ಮಾತನಾಡಿದ್ದರಂತೆ. ಹೀಗಾಗಿ ದೂರು ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಾಜ್ ಗೌರಿ, ಶಾಸಕ ಬೆಲ್ಲದ ದುರುದ್ದೇಶದಿಂದ ದೂರು ದಾಖಲಿಸಿದ್ದಾರೆ. 35 ವರ್ಷಗಳ ಹಿಂದೆ ಹಾಕಲಾಗಿದ್ದ ಪೈಪ್ ಲೈನ್ ಶೋ ರೂಂ ಆವರಣದಲ್ಲಿ ಹೋಗಿದೆ. ಎಲ್ ಎನ್ ಟಿ ಕಂಪನಿ ಜೊತೆ ಈ ಬಗ್ಗೆ ಮಾತನಾಡಿದ್ದೆ. ಇದಕ್ಕೆ ದಬ್ಬಾಳಿಕೆ ಹಾಕಿದ್ದಾರೆ ಎಂದು ನಾಗರಾಜ್ ಗೌರಿ ಹಾಗೂ ಕೆಲವರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ಸಾರ್ವಜನಿಕ ಆಸ್ತಿ ನುಂಗಿದ್ದಾರೆ, ಆ ಬಗ್ಗೆ ದಾಖಲೆ ಕಲೆ ಹಾಕುತಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಹುಬ್ಬಳ್ಳಿಗೆ ಆಗಮಿಸಿದ ಬಿಜೆಪಿ ಉಸ್ತುವಾರಿ: ಶಾಸಕ ಬೆಲ್ಲದ ಶಕ್ತಿ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.