ETV Bharat / state

ಜನ ಹುಚ್ಚ ಎಂದು ಹೀಯಾಳಿಸಿದರೂ ಹಿಂಜರಿಯಲಿಲ್ಲ ​: ಧಾರವಾಡದ ಕೃಷಿ ಯಂತ್ರ ಸಾಧಕನಿಗೆ 'ಪದ್ಮಶ್ರೀ' ಗರಿ

author img

By

Published : Jan 26, 2022, 7:39 PM IST

Updated : Jan 27, 2022, 2:23 PM IST

Padma awards 2022.. 10ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಧಾರವಾಡ ಜಿಲ್ಲೆಯ ಅಬ್ದುಲ್​ ಖಾದರ್​ ಸದ್ಯ ದೇಶದ ಗಮನ ಸೆಳೆದಿದ್ದಾರೆ. ರೈತರಾಗಿ ವಿಶೇಷ ತಂತ್ರಜ್ಞಾನದ ಮೂಲಕ ಹೊಸ ಹೊಸ ಆವಿಷ್ಕಾರ ಮಾಡಿರುವುದಕ್ಕೆ ಸದ್ಯ ಪದ್ಮಶ್ರೀ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿದೆ.

ಕೂರಿಗೆ ಯಂತ್ರ ಸಾಧಕನಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ
ಕೂರಿಗೆ ಯಂತ್ರ ಸಾಧಕನಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಅಬ್ದುಲ್ ಖಾದರ್ ನಡಕಟ್ಟಿನ್​​ ಈ ಬಾರಿಯ ಗಣರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಅಣ್ಣಿಗೇರಿ ಪಟ್ಟಣದ ರೈತಾಪಿ ಕುಟುಂಬದಿಂದ ಬಂದ ಇವರು ತಮ್ಮದೇ ಆದ ವಿಶೇಷತೆಗಳುಳ್ಳ ಕೂರಿಗೆ ಯಂತ್ರಗಳನ್ನ ಸಿದ್ಧಪಡಿಸಿ ಈ ಯಂತ್ರಗಳಿಂದಲೇ ಇಂದು ದೇಶದ ಗಮನ ಸೆಳೆದಿದ್ದಾರೆ.

ಧಾರವಾಡದ ಕೃಷಿ ಯಂತ್ರ ಸಾಧಕನಿಗೆ 'ಪದ್ಮಶ್ರೀ' ಗರಿ

ಮಳೆಗಾಲ ಬರುತ್ತಿದ್ದಂತೆಯೇ ರೈತರು ಕೃಷಿ ಚಟುವಟಿಕೆ ಶುರು ಮಾಡುತ್ತಾರೆ. ಒಮ್ಮೆಲೇ ಎಲ್ಲರೂ ಕೃಷಿ ಚಟುವಟಿಕೆ ಶುರು ಮಾಡೋದ್ರಿಂದ ಎತ್ತುಗಳ ಹಾಗೂ ಕೂಲಿ ಕಾರ್ಮಿಕರಿಗೆ ಭಾರಿ ಬೇಡಿಕೆ ಬರುತ್ತದೆ. ಹೊಲ ಸಮತಟ್ಟು ಮಾಡಲು, ಊಳಲು ಯಂತ್ರಗಳನ್ನು ಬಳಸಿಕೊಳ್ಳಬಹುದು. ಆದಾದ ಬಳಿಕ ಬಿತ್ತನೆ ಮಾಡಲು ಎತ್ತುಗಳ ಅಥವಾ ಕೃಷಿ ಕೂಲಿ ಕಾರ್ಮಿಕರ ಅವಶ್ಯಕತೆ ಇದ್ದೇ ಇರುತ್ತೆ. ಇದನ್ನು ಗಮನಿಸಿದ ನಡಕಟ್ಟಿನ್, ರೈತರಿಗೆ ಅತ್ಯವಶ್ಯಕವಾದ ಕೂರಿಗೆ, ಅಂದರೆ ಬಿತ್ತನೆ ಮಾಡೋ ಯಂತ್ರವನ್ನು ಕಂಡು ಹಿಡಿಯಬೇಕೆಂದು ನಿರ್ಧರಿಸಿದರು.

ಧಾರವಾಡದ ಯಂತ್ರ ಸಂತನಿಗೆ ಒಲಿದು ಬಂದ ಪದ್ಮಶ್ರೀ
ಧಾರವಾಡದ ಯಂತ್ರ ಸಂತನಿಗೆ ಒಲಿದು ಬಂದ ಪದ್ಮಶ್ರೀ

ಅತಿವೇಗವಾಗಿ ಉಳುಮೆ ಮಾಡುವ ಯಂತ್ರವನ್ನ ಕಂಡುಹಿಡಿಯಬೇಕು ಎಂಬ ಉದ್ದೇಶದಿಂದ ನಿರಂತರ ಪ್ರಯತ್ನ ಮಾಡಿ, ಕೂರಿಗೆ ಯಂತ್ರವನ್ನ ಕಂಡುಹಿಡಿದಿದ್ದಾರೆ. ಮೊದ ಮೊದಲು ಅಸ್ತಿಯನ್ನ ಮಾರಾಟ ಮಾಡಿ ಕೃಷಿ ಯಂತ್ರಗಳನ್ನ ತಯಾರು ಮಾಡುತ್ತಿದ್ದ ಇವರನ್ನು ಕಂಡು ಜನರು ಹುಚ್ಚ ಎಂದೂ ಸಹ ಕರೆದಿದ್ದರಂತೆ. ಆದ್ರೂ ರೈತರಿಗೆ ಅತ್ಯವಶ್ಯಕವಾದ ಕೂರಿಗೆ ಯಂತ್ರವನ್ನು ಕಂಡು ಹಿಡಿಯಬೇಕೆಂದು ನಿರ್ಧರಿಸಿದ ಇವರು, ಆರು ತಿಂಗಳು ಹಗಲು ರಾತ್ರಿ ಯೋಚಿಸಿ ಯಂತ್ರಕ್ಕೊಂದು ರೂಪ ನೀಡಿದ್ದಾರೆ.

ಇದನ್ನೂ ಓದಿ: ಸುರಂಗ ಕೊರೆದು ನೀರು ತಂದ ಭಗೀರಥನಿಗೆ 'ಪದ್ಮಶ್ರೀ' ಗೌರವ; ಸಾಹಸ ಸಿನಿಮಾಗಳಿಗೂ ಸ್ಫೂರ್ತಿ 'Tunnel Man'ನ ಸಾಧನೆ

ಸಣ್ಣದಾಗಿ ಆರಂಭವಾದ ಈ ಸಂಶೋಧನೆ ಇದೀಗ ಹೆಮ್ಮರವಾಗಿ ಬೆಳೆದಿದ್ದು, ನೂರಾರು ಜನರಿಗೆ ಉದ್ಯೋಗವನ್ನು ಸಹ ನೀಡಿದೆ. ತಮ್ಮದೇ ಆದ ಕೃಷಿ ಉತ್ಪನ್ನಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಅಬ್ದುಲ್​. ಈ ಪ್ರಶಸ್ತಿ ಇಡೀ ರೈತ ಸಮುದಾಯಕ್ಕೆ ಬಂದ ಪ್ರಶಸ್ತಿ ಎಂದು ಅಬ್ದುಲ್ ಅವರು ಸಂತಸ ಹಂಚಿಕೊಂಡಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated :Jan 27, 2022, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.