ETV Bharat / state

ಕಲಘಟಗಿಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ

author img

By

Published : Jun 27, 2020, 9:47 PM IST

ತಹಶೀಲ್ದಾರ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ‌ ಭಾವಚಿತ್ರಕ್ಕೆ ಶಾಸಕ ‌ಸಿ.ಎಂ. ‌ನಿಂಬಣ್ಣವರ ಪೂಜೆ ಸಲ್ಲಿಸುವ ಮೂಲಕ ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಯಿತು.

Nadaprabhu kempegowda Jayanthi
Nadaprabhu kempegowda Jayanthi

ಕಲಘಟಗಿ: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ಇಂದು ತಹಶೀಲ್ದಾರರ ಕಚೇರಿಯಲ್ಲಿ ಆಚರಿಸಲಾಯಿತು.

ತಹಶೀಲ್ದಾರ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ‌ ಭಾವಚಿತ್ರಕ್ಕೆ ಶಾಸಕ ‌ಸಿ.ಎಂ. ‌ನಿಂಬಣ್ಣವರ ಪೂಜೆ ಸಲ್ಲಿಸುವ ಮೂಲಕ ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಯಿತು.

ಬಳಿಕ ಮಾತನಾಡಿದ ಶಾಸಕರು, ಆಧುನಿಕ ಬೆಂಗಳೂರಿನ ನಿರ್ಮಾತೃ ಹಾಗೂ ನೀರಾವರಿ ವ್ಯವಸ್ಥೆ ಮಾಡುವ ಮೂಲಕ ಕೆಂಪೇಗೌಡರು ಅಭಿವೃದ್ಧಿಯ ಹರಿಕಾರರಾಗಿದ್ದರು. ಜಾತ್ಯಾತೀತ ಪ್ರಭುತ್ವ ನಿರ್ಮಾಣದ ಕನಸನ್ನು ಹೊತ್ತ ನಾಡಪ್ರಭು ಕೆಂಪೇಗೌಡರ ಆದರ್ಶಗಳು‌ ಅನುಕರಣೀಯ ಎಂದು ಅವರು ನುಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.