ETV Bharat / state

ಚುನಾವಣೆಯಲ್ಲಿ ಗೆದ್ದ ನಂತರ ಸುಮ್ಮನೇ ಕೂರದ ನೂತನ ಸದಸ್ಯ..

author img

By

Published : Jan 17, 2021, 9:22 PM IST

ಮೂಲಸೌಕರ್ಯಗಳನ್ನು ಒದಗಿಸಿ ತಮ್ಮ ಊರನ್ನು ಅಭಿವೃದ್ಧಿ ಮಾಡುವ ಕನಸನ್ನು ಕಂಡಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಯುವಕರು ಸಾಥ್ ನೀಡಿದ್ದಾರೆ..

grama panchayati member
ಚುನಾವಣೆಯಲ್ಲಿ ಗೆದ್ದ ನಂತರ ಕಾರ್ಯ ಪ್ರವೃತ್ತಿ

ಹುಬ್ಬಳ್ಳಿ : ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಜಯಗಳಿಸಿದ ಸದಸ್ಯರೊಬ್ಬರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆ ಮುನ್ನವೇ ತಮ್ಮ ಊರಿನಲ್ಲಿ ಸಮಸ್ಯೆಗಳನ್ನ ನಿವಾರಿಸಲು ಮುಂದಾಗಿದ್ದಾರೆ.

ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಮಲ್ಲಿಕಾರ್ಜುನ ರಡ್ಡೇರ ಎಂಬ ಯುವಕ ಇತ್ತೀಚೆಗೆ ನಡೆದ ಗುಡೇನಕಟ್ಟಿ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಮತಯಾಚನೆ ಮಾಡುವ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಯನ್ನು ಈಗಿನಿಂದಲೇ ಈಡೇರಿಸಲು ಶುರು ಮಾಡಿದ್ದಾರೆ.

ಚುನಾವಣೆಯಲ್ಲಿ ಗೆದ್ದ ನಂತರ ಖಾಲಿ ಇರದೆ, ಕೆಲಸ..

ಓದಿ: ತುಂಡುಡುಗೆಯಲ್ಲಿ ನೇಹಾ.. ಹಾಟ್​ ಫೋಟೋಗಳ ಮೂಲಕ ಪಡ್ಡೆಹೈಕ್ಳ ನಿದ್ದೆಗೆಡಿಸಿದ ಬೆಡಗಿ

ಚರಂಡಿ ಹಾಗೂ ವಾಟರ್ ಟ್ಯಾಂಕ್ ಸ್ವಚ್ಛತೆ, ಪ್ಲಾಸ್ಟಿಕ್ ಮುಕ್ತ ಗ್ರಾಮದ ಕನಸನ್ನು ಕಂಡಿರುವ ಮಲ್ಲಿಕಾರ್ಜುನ್‌ ರಡ್ಡೇರ್‌, ಈಗಾಗಲೇ ಸಾಕಷ್ಟು ಜನಪರ ಕಾರ್ಯವನ್ನು ಮಾಡುತ್ತಿದ್ದಾರೆ.

ಮೂಲಸೌಕರ್ಯಗಳನ್ನು ಒದಗಿಸಿ ತಮ್ಮ ಊರನ್ನು ಅಭಿವೃದ್ಧಿ ಮಾಡುವ ಕನಸನ್ನು ಕಂಡಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಯುವಕರು ಸಾಥ್ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.