ETV Bharat / state

ಧಾರವಾಡ ಗ್ರಾಮೀಣ ಕ್ಷೇತ್ರ: ಬಿಜೆಪಿಯಿಂದ ಈ ಬಾರಿ ಯಾರಿಗೆ ಟಿಕೆಟ್?

author img

By

Published : Mar 20, 2023, 11:51 AM IST

ಧಾರವಾಡದಲ್ಲಿ ಬಯಲು ಸೀಮೆ ಪ್ರಾಧಿಕಾರದ ಅಧ್ಯಕ್ಷ ತವಣಪ್ಪ ಅಷ್ಟಗಿ ಹಾಗೂ ಹಾಲಿ ಶಾಸಕ ಅಮೃತ್​ ದೇಸಾಯಿ ನಡುವೆ ಟಿಕೆಟ್ ಫೈಟ್ ಜೋರಾಗಿದೆ.

Dharwad
ತವಣಪ್ಪ ಅಷ್ಟಗಿ ಹಾಗೂ ಹಾಲಿ ಶಾಸಕ ಅಮೃತ ದೇಸಾಯಿ

ತವಣಪ್ಪ ಅಷ್ಟಗಿ ಹಾಗೂ ಹಾಲಿ ಶಾಸಕ ಅಮೃತ ದೇಸಾಯಿ ಪ್ರತಿಕ್ರಿಯೆ

ಧಾರವಾಡ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿದೆ. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಹಾಲಿ ಶಾಸಕರಿರುವಾಗಲೇ ಆಕಾಂಕ್ಷಿಗಳು ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.‌‌ ಬಿಜೆಪಿ ಟಿಕೆಟ್​​ಗಾಗಿ ಪಕ್ಷದೊಳಗೇ ಪೈಪೋಟಿ ನಡೆಯುತ್ತಿದೆ. ತವಣಪ್ಪ ಅಷ್ಟಗಿ ಹಾಗೂ ಅಮೃತ್​ ದೇಸಾಯಿ ನಡುವೆ ಟಿಕೆಟ್‌ ಗಿಟ್ಟಿಸಿಕೊಳ್ಳಲು ಸ್ಪರ್ಧೆ ಇದೆ. ಈ ಬಾರಿ ಟಿಕೆಟ್ ಕೊಡ್ತಾರೆ ಎಂಬ ಭರವಸೆಯಲ್ಲಿ ಬಯಲು ಸೀಮೆ ಪ್ರಾಧಿಕಾರದ ಅಧ್ಯಕ್ಷ ತವಣಪ್ಪ ಅಷ್ಟಗಿ ಹಾಗೂ ಧಾರವಾಡ ಗ್ರಾಮೀಣ ಶಾಸಕ ಅಮೃತ್ ದೇಸಾಯಿ ಇದ್ದಾರೆ.

ನಿಗಮದ ಅಧ್ಯಕ್ಷ ತವಣಪ್ಪ ಅಷ್ಟಗಿ ಬಿಜೆಪಿ ಸರ್ವೇಯಲ್ಲಿ ನನ್ನ ಹೆಸರೇ ಮೊದಲಿದ್ದು ನನಗೆ ಟಿಕೆಟ್ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಇತ್ತ ಹಾಲಿ ಶಾಸಕ ಅಮೃತ್ ದೇಸಾಯಿ ನಮ್ಮಲ್ಲಿ ಯಾವುದೇ ಸರ್ವೇೆಗಳು ನಡೆದಿಲ್ಲ. ಟಿಕೆಟ್ ಯಾರಿಗೆ ನೀಡಬೇಕು ಎಂಬುವುದನ್ನು ಹೈಕಮಾಂಡ್ ಡಿಸೈಡ್ ಮಾಡಲಿದೆ. ಯಾರಿಗೆ ಬೇಕಾದರೂ ಟಿಕೆಟ್ ನೀಡುವ ಹಕ್ಕು ಅವರಿಗಿದೆ. ಯಾರಿಗೆ ಟಿಕೆಟ್ ನೀಡುತ್ತಾರೋ ಅವರನ್ನು ಗೆಲ್ಲಿಸುವ ಕೆಲಸವನ್ನು ನಾವೆಲ್ಲರೂ ಮಾಡುತ್ತೇವೆ ಎಂದು ಒಗ್ಗಟ್ಟು ಪ್ರದರ್ಶಿಸಿದರು.

ಈಗಾಗಲೇ ಜನರಲ್ಲಿ ನಮ್ಮ ಅಡಳಿತದ ಬಗ್ಗೆ ವಿಶ್ವಾಸವಿದೆ. ಮತ್ತೊಮ್ಮೆ ಬಿಜೆಪಿ ನಾಯಕರು ನನಗೆ ಟಿಕೆಟ್ ನೀಡುವ ಭರವಸೆಯಿದೆ ಎಂದು ಅಮೃತ್ ದೇಸಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಟಿಕೆಟ್ ವಾರ್ ಜೋರಾಗಿರುವಾಗಲೇ ಮಾಜಿ ಶಾಸಕಿ ಸೀಮಾ ಮಸೂತಿ ಕೂಡ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನನಗೂ ಸ್ಪರ್ಧೆಗೆ ಅವಕಾಶ ಸಿಗಬಹುದು ಎಂದು ಕಾದು ಕುಳಿತಿದ್ದಾರೆ.

ಇದನ್ನೂ ಓದಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2023: ಅಂತಿಮ ಮತದಾರರ ಪಟ್ಟಿ ಪ್ರಕಟ

ಮಹದೇವಪುರ ಕ್ಷೇತ್ರ ಸ್ಥಿತಿಗತಿ: ಇನ್ನು ಮಹದೇವಪುರ ಕ್ಷೇತ್ರ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ 2ನೇ ಕ್ಷೇತ್ರ. ಅತಿ ಹೆಚ್ಚು ಐಟಿ ಕಂಪನಿಗಳಿಗೂ ತವರು. ಬೆಂಗಳೂರಿನ‌ ಹೊರವಲಯಗಳು ಮಹದೇವಪುರ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಐಟಿ ಕಂಪನಿಗಳ ಆಶ್ರಯ ತಾಣವಾಗಿರುವ ಈ ಕ್ಷೇತ್ರದಲ್ಲಿ ವಲಸಿಗ ಮತದಾರರ ಸಂಖ್ಯೆ ಅಧಿಕ. ಬಹುತೇಕ ಟೆಕ್ಕಿಗಳು ಕ್ಷೇತ್ರದಲ್ಲಿ ವಾಸವಾಗಿದ್ದಾರೆ. ಅನ್ಯ ರಾಜ್ಯದ ಜನರು ಈ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ.

ಬಹುರಾಷ್ಟ್ರೀಯ ಕಂಪನಿಗಳ ತಾಣವಾಗಿರುವ ಕ್ಷೇತ್ರದಲ್ಲಿ 11 ಗ್ರಾಮ ಪಂಚಾಯತಿಗಳಿವೆ. ಹಾಗಾಗಿ ನಗರೀಕರಣ ಹಾಗೂ ಹಳ್ಳಿಗಳ ಸಮೀಕರಣದ ಕ್ಷೇತ್ರ ಇದಾಗಿದೆ. ಸದ್ಯ ಇದು ಬಿಜೆಪಿಯ ಭದ್ರಕೋಟೆ. 2008ರ ಕ್ಷೇತ್ರ ವಿಂಗಡಣೆ ಬಳಿಕ ರಚನೆಯಾದ ಕ್ಷೇತ್ರದಲ್ಲಿ ಹಾಲಿ ಶಾಸಕ ಅರವಿಂದ ಲಿಂಬಾವಳಿ ಬಿಜೆಪಿಯ ಗೆಲುವಿನ ಕುದುರೆಯಾಗಿದ್ದಾರೆ. ಸತತ 3 ಬಾರಿಯೂ ಅರವಿಂದ ಲಿಂಬಾವಳಿ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಹಿಡಿದುಕೊಂಡಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಬಿಜೆಪಿಯಿಂದ ಮಹದೇವಪುರ ಕ್ಷೇತ್ರವನ್ನು ವಶಕ್ಕೆ ಪಡೆಯಲು ಪಣತೊಟ್ಟಿದೆ.

ಇದನ್ನೂ ಓದಿ: ಮಹದೇವಪುರ ಕ್ಷೇತ್ರ ಸ್ಥಿತಿಗತಿ: ಲಿಂಬಾವಳಿ ಬಿಗಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.