ಹುಬ್ಬಳ್ಳಿ: ಗ್ರಾಮೀಣ ಭಾರತದ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮೀಣ ಭಾಗದವರಿಗೆ ಬಿಎಸ್ಎನ್ಎಲ್ ಫ್ರಾಂಚೈಸಿಗಳನ್ನು ನೀಡಲಾಗುತ್ತದೆ ಬಿಎಸ್ಎನ್ಎಲ್ ಭಾರತ ನೆಟ್ ಉದ್ಯಮಿ ಯೋಜನೆಯ ಅಡಿಯಲ್ಲಿ ಬಿಎಸ್ಎನ್ಎಲ್ ಧಾರವಾಡ ಟೆಲಿಕಾಂ ಜಿಲ್ಲೆ ಜನರಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಮಾಜದ ಎಲ್ಲ ವರ್ಗಗಳ ಅಗತ್ಯತೆಗಳನ್ನು ಪೂರೈಸಲು, ಟೆಲಿಕಾಂ ಸೇವೆಗಳನ್ನು ಒದಗಿಸಲು ಬದ್ದವಾಗಿದೆ ಎಂದು ಬಿಎಸ್ಎನ್ಎಲ್ ಜನರಲ್ ಮ್ಯಾನೇಜರ್ ಡಿ.ಕೆ.ತ್ರಿಪಾಟಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಗ್ರಾಹಕರಿಗೆ ಆರಂಭಿಕ ವೆಚ್ಚದಲ್ಲಿ ಸಬ್ಸಿಡಿ ಮಾಡುವ ಮೂಲಕ ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ಹೆಚ್ಚಿನ ವೇಗದ ಬ್ರಾಡ್ ಬ್ಯಾಂಡ್ ಸಂಪರ್ಕಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ಇದೀಗ ಬಿಎಸ್ಎನ್ಎಲ್ ಭಾರತ್ ನೆಟ್ ಉದ್ಯಮಿ ಯೋಜನೆಯ ಅಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮೋಡ್ನಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಫ್ರ್ಯಾಂಚೈಸಿಗಳನ್ನು ನೀಡಲಾಗುತ್ತಿದ್ದು, ಆಸಕ್ತರು ನೊಂದಾಯಿಸಿಕೊಳ್ಳಬೇಕು ಎಂದರು.
ಫ್ರ್ಯಾಂಚೈಸಿ ಪಡೆಯುವವರು ಗ್ರಾಮೀಣ ಪ್ರದೇಶದ ಚಂದಾದಾರರಿಗೆ ಉಚಿತ ಮೋಡೆಮ್ ಮತ್ತು ಅನುಷ್ಠಾಪನಾ ಶುಲ್ಕ ರಹಿತ ಸಂಪರ್ಕಗಳನ್ನು ಒದಗಿಸಲಾಗುತ್ತಿದೆ. ಗ್ರಾಹಕರು ಮಾಸಿಕ ಯೋಜನೆ ಶುಲ್ಕವನ್ನು ಮಾತ್ರ ಪಾವತಿಸಿ ಸೇವೆ ಪಡೆಯಬಹುದು. ಈ ಮೂಲಕ ಗ್ರಾಮೀಣ ಭಾರತದ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ಧಾರವಾಡ ಟೆಲಿಕಾಂ ಜಿಲ್ಲೆ 17 ಸೈಟ್ಗಳನ್ನು 4ಜಿ ಸಂಪರ್ಕ ಕಲ್ಪಿಸಲು ಗುರುತಿಸಲಾಗಿದೆ. ಕೆಲಸ ಆರಂಭಿಸಲಾಗಿದೆ. ಇನ್ನು ಧಾರವಾಡ ಸಂಪರ್ಕ ಜಿಲ್ಲೆಯಲ್ಲಿ 6,700 ಪೋರ್ಟ್ ಔಟ್, 2800 ಚಂದಾದಾರರು ಪೋರ್ಟ್ ಇನ್ ಆಗಿದ್ದಾರೆ ಎಂದರು.
ಇದನ್ನೂ ಓದಿ: ಮೈಶುಗರ್ ಕಬ್ಬು ಅರೆಯುವಿಕೆ ಸ್ಥಗಿತ: 5 ತಿಂಗಳಲ್ಲಿ 1 ಲಕ್ಷ 300 ಟನ್ ಕಬ್ಬು ನುರಿಸಿದ ಕಾರ್ಖಾನೆ