ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಿಂದ ಅರಿವೆ ಗುರು ಪ್ರಶಸ್ತಿ ಪ್ರಕಟಗೊಂಡಿದೆ. ರಾಜ್ಯೋತ್ಸವ ಪ್ರಯುಕ್ತ ನೀಡಲಿರುವ ರಾಜ್ಯಮಟ್ಟದ ಪ್ರಶಸ್ತಿ ಇದಾಗಿದ್ದು, ಇದೇ ವರ್ಷದಿಂದ ಆರಂಭಗೊಂಡಿದೆ. ಈ ಕುರಿತು ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಘೋಷಿಸಿದರು.
ಈ ಬಾರಿ ಬಾಗಲಕೋಟೆ ಜಿಲ್ಲೆ ಮರೆಗುದ್ದಿಯ ನಿರುಪಾಧೀಶ ಸ್ವಾಮೀಜಿ, ರಸಾಯನಶಾಸ್ತ್ರಜ್ಞ ಪ್ರೊ ಗೌತಮ್ ಮತ್ತು ಮನೋವೈದ್ಯರಾಗಿರುವ ಡಾ. ಚಂದ್ರಶೇಖರ ಆಯ್ಕೆಯಾಗಿದ್ದಾರೆ. ನವೆಂಬರ್ 1ರಂದು ಕವಿವಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ. ಚಂದ್ರಶೇಖರ ಕಂಬಾರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ತಲಾ 25 ಸಾವಿರ ರೂ. ನಗದು ಒಳಗೊಂಡಿರುತ್ತದೆ.
ಇದನ್ನೂ ಓದಿ : ನಟನೆಗೂ ಸೈ ಗಾಯನಕ್ಕೂ ಜೈ ಅಂದಿದ್ದ ಪುನೀತ್: 'ಬಾನ ದಾರಿಯಲ್ಲಿ ಜಾರಿ ಹೋದ' ಅಪ್ಪು ಹಾಡಿದ ಬೆಸ್ಟ್ ಹಾಡುಗಳಿವು