ETV Bharat / state

ಅಪಘಾತದಲ್ಲಿ ಮೃತಪಟ್ಟ ಯೋಧ: ಸ್ವಗ್ರಾಮಕ್ಕೆ ಬಂದ ಪಾರ್ಥಿವ ಶರೀರ

author img

By

Published : Jul 1, 2019, 2:29 PM IST

ರಸ್ತೆ ಅಪಘಾತದಲ್ಲಿ ಮೃತಪಟ್ಟ ಯೋಧ ತಪ್ಪೆನಹಳ್ಳಿ ಬಸವರಾಜ್ ಪಾರ್ಥಿವ ಶರೀರ ಇಂದು ಬೆಳಗ್ಗೆ ಸ್ವಗ್ರಾಮಕ್ಕೆ ಆಗಿಮಿಸಿತು. ಪಾರ್ಥಿವ ಶರೀರ ಹೊತ್ತ ವಾಹನ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಇಡೀ ಗ್ರಾಮಸ್ಥರು ಯೋಧನಿಗೆ ಜೈಕಾರ ಕೂಗಿದರು.

ಯೋಧ ತಪ್ಪೆನಹಳ್ಳಿ ಬಸವರಾಜ್ (29) ಪಾರ್ಥಿವ ಶರೀರ ಆಗಮನ

ದಾವಣಗೆರೆ: ಹರಿದ್ವಾರದಲ್ಲಿ ಕರ್ತವ್ಯನಿರತನಾಗಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧ ತಪ್ಪೆನಹಳ್ಳಿ ಬಸವರಾಜ್ (29) ಪಾರ್ಥಿವ ಶರೀರ ಸ್ವಗ್ರಾಮ ಹರಪನಹಳ್ಳಿಯ ಹಲುವಾಗಲು ಗ್ರಾಮಕ್ಕೆ ಇಂದು ಮುಂಜಾನೆ ಆಗಮಿಸಿತು. ಇನ್ನು ಕೆಲವು ದಿನಗಳಲ್ಲಿ ಮೃತಪಟ್ಟ ಯೋಧ ಬಸವರಾಜನ ಮದುವೆ ಕಾರ್ಯ ನಡೆಯುವುದಿತ್ತು. ಆದರೆ, ದುರಾದೃಷ್ಟವಶಾತ್ ಕರ್ತವ್ಯ ನಿರತನಾಗಿದ್ದ ಸಿಐಎಸ್​ಎಫ್​ ಯೋಧ ಬಸವರಾಜ್ ಜೂ. 28ರಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಯೋಧನಿಗೆ ಜೈಕಾರ:

ಇಂದು ಮುಂಜಾನೆ ಹಲುವಾಗಲು ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ನಿದ್ದೆ ಮಾಡದೇ ಎಚ್ಚರದಿಂದಿದ್ದ ಇಡೀ ಗ್ರಾಮಸ್ಥರು ಯೋಧನಿಗೆ ಜೈಕಾರ ಕೂಗಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಯೋಧ ತಪ್ಪೆನಹಳ್ಳಿ ಬಸವರಾಜ್ (29) ಪಾರ್ಥಿವ ಶರೀರ ಆಗಮನ

ಯುವಕರ ಗುಂಪು ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಬರ‌ಮಾಡಿಕೊಂಡರು. ಯೋಧನ ಹುಟ್ಟೂರು ಹಲುವಾಗಲು ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ.

Intro:(ಸ್ಟ್ರಿಂಜರ್; ಮಧು ದಾವಣಗೆರೆ)

ದಾವಣಗೆರೆ; ಹರಿದ್ವಾರದಲ್ಲಿ ಕರ್ತವ್ಯನಿರತನಾಗಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧ ತಪ್ಪೆನಹಳ್ಳಿ ಬಸವರಾಜ್ (29)
ಪಾರ್ಥಿವ ಶರೀರ
ಸ್ವಗ್ರಾಮ ಹರಪನಹಳ್ಳಿಯ ಹಲುವಾಗಲು ಗ್ರಾಮಕ್ಕೆ ಇಂದು ಮುಂಜಾನೆ ಆಗಮಿಸಿತು..

ಮದುವೆ ನಿಶ್ಚಿತಾರ್ಥವಾಗಿ ಸ್ವಲ್ಪ ದಿನಗಳಲ್ಲಿ ಯೋಧ ಬಸವರಾಜ್ ಮದುವೆ ಕಾರ್ಯ ನಡೆಯುವುದಿತ್ತು, ಆದರೆ ದುರಾದೃಷ್ಟವಶಾತ್
ಕರ್ತವ್ಯ ನಿರತನಾಗಿದ್ದ ಸಿಐಎಸ್ಎಫ್ ಯೋಧ ಬಸವರಾಜ್ ಜೂನ್ 28ರಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ..

ಯೋಧನಿಗೆ ಯುವಕರ
ಜೈಕಾರ

ಇಂದು ಮುಂಜಾನೆ ಹಲುವಾಗಲು ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸಿತು. ಈ ವೇಳೆ ನಿದ್ದೆ ಮಾಡದೇ ಎಚ್ಚರದಿಂದ ಇದ್ದ ಇಡೀ ಗ್ರಾಮ ಯೋಧನಿಗೆ ಜೈಕಾರ ಕೂಗಿದರು. ಇನ್ನೂ ಕುಟುಂಬಸ್ಥರು ಆಕ್ರಂದನ
ಮುಗಿಲು ಮುಗಿಲು ಮುಟ್ಟಿತ್ತು. ಯುವಕರ ಗುಂಪು ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಬರ‌ ಮಾಡಿಕೊಂಡರು. ಯೋಧನ ಹುಟ್ಟುರು ಹಲುವಾಗಲು ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು,
ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ..

ಪ್ಲೊ..Body:(ಸ್ಟ್ರಿಂಜರ್; ಮಧು ದಾವಣಗೆರೆ)

ದಾವಣಗೆರೆ; ಹರಿದ್ವಾರದಲ್ಲಿ ಕರ್ತವ್ಯನಿರತನಾಗಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧ ತಪ್ಪೆನಹಳ್ಳಿ ಬಸವರಾಜ್ (29)
ಪಾರ್ಥಿವ ಶರೀರ
ಸ್ವಗ್ರಾಮ ಹರಪನಹಳ್ಳಿಯ ಹಲುವಾಗಲು ಗ್ರಾಮಕ್ಕೆ ಇಂದು ಮುಂಜಾನೆ ಆಗಮಿಸಿತು..

ಮದುವೆ ನಿಶ್ಚಿತಾರ್ಥವಾಗಿ ಸ್ವಲ್ಪ ದಿನಗಳಲ್ಲಿ ಯೋಧ ಬಸವರಾಜ್ ಮದುವೆ ಕಾರ್ಯ ನಡೆಯುವುದಿತ್ತು, ಆದರೆ ದುರಾದೃಷ್ಟವಶಾತ್
ಕರ್ತವ್ಯ ನಿರತನಾಗಿದ್ದ ಸಿಐಎಸ್ಎಫ್ ಯೋಧ ಬಸವರಾಜ್ ಜೂನ್ 28ರಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ..

ಯೋಧನಿಗೆ ಯುವಕರ
ಜೈಕಾರ

ಇಂದು ಮುಂಜಾನೆ ಹಲುವಾಗಲು ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸಿತು. ಈ ವೇಳೆ ನಿದ್ದೆ ಮಾಡದೇ ಎಚ್ಚರದಿಂದ ಇದ್ದ ಇಡೀ ಗ್ರಾಮ ಯೋಧನಿಗೆ ಜೈಕಾರ ಕೂಗಿದರು. ಇನ್ನೂ ಕುಟುಂಬಸ್ಥರು ಆಕ್ರಂದನ
ಮುಗಿಲು ಮುಗಿಲು ಮುಟ್ಟಿತ್ತು. ಯುವಕರ ಗುಂಪು ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಬರ‌ ಮಾಡಿಕೊಂಡರು. ಯೋಧನ ಹುಟ್ಟುರು ಹಲುವಾಗಲು ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು,
ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ..

ಪ್ಲೊ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.