ETV Bharat / state

ವ್ಯಕ್ತಿಯ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸಿದ ಕಳ್ಳರು: ಕೃತ್ಯ ಸಿಸಿಟಿವಿಯಲ್ಲಿ ಸೆರೆ

author img

By

Published : Nov 15, 2022, 12:27 PM IST

ಕೊಟ್ರೇಶ್​ ಎಂಬುವರು ಹಣವನ್ನು ಬೈಕ್​ನ ಬ್ಯಾಗ್​ನಲ್ಲಿ ಇಟ್ಟುಕೊಂಡು ಹೋಗುತ್ತಿದ್ದಾಗ, ಅವರ ಗಮನವನ್ನು ಬೇರೆಡೆ ಸೆಳೆದು ಕಳ್ಳರು ದರೋಡೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಡಿಸಿಸಿ ಬ್ಯಾಂಕ್​ನಲ್ಲಿ ಬಂಗಾರದ ಆಭರಣಗಳನ್ನು ಒತ್ತೆ ಇಟ್ಟು, 4 ಲಕ್ಷ 50 ಸಾವಿರ ಸಾಲವನ್ನು ಕೊಟ್ರೇಶ್ ಪಡೆದಿದ್ದರು.

Money theft in Davangere
ವ್ಯಕ್ತಿಯ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸಿದ ಕಳ್ಳರು

ದಾವಣಗೆರೆ: ‌ವ್ಯಕ್ತಿಯ ಗಮನ ಬೇರೆಡೆ ಸೆಳೆದು ಕಳ್ಳರು ಹಣ ಲಪಟಾಯಿಸಿರುವ ಘಟನೆ ಜಿಲ್ಲೆಯ ಜಗಳೂರು ಪಟ್ಟಣದ ಡಿಸಿಸಿ ಬ್ಯಾಂಕ್ ಬಳಿ ನಡೆದಿದೆ. ಕಳ್ಳ ಹಣ ಎಗರಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗಮನ ಬೇರೆಡೆ ಸೆಳೆದು ದರೋಡೆ: ಜಗಳೂರು ತಾಲೂಕಿನ ಹನುಮಂತಾಪುರ ಗ್ರಾಮದ ಕೊಟ್ರೇಶ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಕೆನರಾ ಬ್ಯಾಂಕ್​ನಲ್ಲಿ ಸಾಲ ರಿನಿವಲ್ ಮಾಡುವುದಕ್ಕೆ ಇಟ್ಟುಕೊಂಡಿದ್ದ ಹಣವನ್ನು ಕಳ್ಳರು ದೋಚಿದ್ದಾರೆ. ಮತ್ತೊಂದು ಬ್ಯಾಂಕ್​ನಲ್ಲಿ ಬಂಗಾರದ ಆಭರಣಗಳನ್ನು ಒತ್ತೆ ಇಟ್ಟು, 4 ಲಕ್ಷದ 50 ಸಾವಿರ ರೂಪಾಯಿ ಸಾಲವನ್ನು ಕೊಟ್ರೇಶ್ ಪಡೆದಿದ್ದರು. ಬೈಕ್ ಬ್ಯಾಗ್​ನಲ್ಲಿ ಹಣ ಇಟ್ಟುಕೊಂಡು ಹೋಗುತ್ತಿರುವುದನ್ನು ಗಮನಿಸಿದ್ದ ಕಳ್ಳರು, ಕೆಲ ಖದೀಮರು ಅಡ್ಡ ಬಂದಂತೆ ಮಾಡಿ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸಿದ್ದಾರೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸಿದ ಕಳ್ಳರು

ಸಾಲದ ಸುಳಿಯಲ್ಲಿ ಸಿಲುಕಿದ್ದ ಕೊಟ್ರೇಶ್ ಐದು ಲಕ್ಷ ಸಾಲ ತೀರಿಸಲು ಹೆಚ್​​ಡಿಎಫ್​ಸಿ‌ ಬ್ಯಾಂಕಿನಲ್ಲಿ ತಮ್ಮ ಬಂಗಾರದಾಭರಣಗಳನ್ನು ಒತ್ತೆ ಇಟ್ಟು, 4 ಲಕ್ಷದ 50 ಸಾವಿರ ಹಣವನ್ನು ತಂದಿದ್ದರು. ಆದ್ರೆ ಬ್ಯಾಂಕಿನ ಸಿಬ್ಬಂದಿ ಮಾತ್ರ ನಿಮ್ಮದು 5 ಲಕ್ಷ ಸಾಲ ಇರೋದು, ನೀವು 4 ಲಕ್ಷ 50 ಸಾವಿರ ಹಣವನ್ನು ತಂದಿದ್ದೀರಿ. ಇನ್ನೂ ಐವತ್ತು ಸಾವಿರ ರೂಪಾಯಿ ಕಟ್ಟಿ ಎಂದಿದ್ದರಂತೆ. ಆಗ ಕೊಟ್ರೇಶ್ ಅವರು ಮನೆಯಲ್ಲಿದ್ದ ಐವತ್ತು ಸಾವಿರ ರೂಪಾಯಿ ತರಲು ಹಣದ ಸಮೇತ ಬ್ಯಾಂಕಿನಿಂದ ಹೊರಬಂದು ಬೈಕ್​ನಲ್ಲಿ ಹೊರಟಿದ್ದಾರೆ.

ಇದನ್ನೂ ಓದಿ: ಕೊಳ್ಳೇಗಾಲದ ವ್ಯಾಪಾರಿಗೆ ಮಕ್ಮಲ್ ಟೋಪಿ: ಸ್ಕೂಟರ್ ಡಿಕ್ಕಿಯಲ್ಲಿದ್ದ ₹5 ಲಕ್ಷ ಮಾಯ

ಅಲ್ಲಿಂದ ಸ್ವಲ್ಪ ದೂರ ಕ್ರಮಿಸಿ ಬಂದ ಕೊಟ್ರೇಶ್ ಅವರ ಬೈಕ್​ಗೆ ಅಪರಿಚಿತ ವ್ಯಕ್ತಿ ಅಡ್ಡ ಬಂದಿದ್ದು, ಅವರ ಗಮನ ಬೇರೆಡೆ ಸೆಳೆದಿದ್ದಾನೆ. ಮತ್ತೋರ್ವ ಬೈಕ್​ನ ಬ್ಯಾಗ್​ನಲ್ಲಿದ್ದ ಹಣವನ್ನು ಎಗರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಜಗಳೂರು ಪೊಲೀಸ್​ ಠಾಣೆಯ ಪೊಲೀಸರು ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.