ವಿಚ್ಛೇದನ ಪ್ರಕರಣ : ಕೋರ್ಟ್ ಆವರಣದಲ್ಲೇ ಬಾವನ ಕತ್ತು ಕೊಯ್ದ ಬಾಮೈದ

author img

By

Published : Dec 7, 2021, 2:22 PM IST

Updated : Dec 7, 2021, 3:13 PM IST

man-who-preceded-the-assassination-at-court-premises

ಮೊದಲಿಗೆ ಕೋರ್ಟ್ ಆವರಣದಲ್ಲಿ ಮಾತಿನ ಚಕಮಕಿಯಾಗಿ ಎರಡು ಗುಂಪುಗಳ‌ ನಡುವೆ ಮಾರಾಮಾರಿಯಾಗಿದೆ. ಬಳಿಕ ಆರೋಪಿ ಮಲ್ಲಿಕಾರ್ಜುನ್, ಮಂಜುನಾಥ್‌ನ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ..

ದಾವಣಗೆರೆ : ಕೋರ್ಟ್ ಆವರಣದಲ್ಲೇ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಮೈದ ತನ್ನ ಬಾವನ ಕತ್ತು ಕೊಯ್ದಿರುವ ಘಟನೆಯಿಂದ ಇಡೀ ಜಗಳೂರು ಬೆಚ್ಚಿಬಿದ್ದಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿರುವ ಸಿವಿಲ್ ಕೋರ್ಟ್ ಆವರಣದಲ್ಲಿ ಈ ಘಟನೆ ಜರುಗಿದೆ. ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ಆವರಣದಲ್ಲಿ ಎರಡು ಕುಟುಂಬಗಳ ನಡುವೆ ಮೊದಲು ಮಾರಾಮಾರಿಯಾಗಿದೆ. ಬಾಮೈದ ಸ್ವಂತ ಬಾವನ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದಾನೆ.

ಬಾವ ಮಂಜುನಾಥ್ (35) ಎಂಬುವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಪತ್ನಿಯ ತಮ್ಮ ಮಲ್ಲಿಕಾರ್ಜುನ ಎಂಬಾತ ಮಂಜುನಾಥ್‌ನ ಮೇಲೆ ಹಲ್ಲೆ ಮಾಡಿದ್ದಾನೆ. ಮಂಜುನಾಥ್ ಹಾಗೂ ಆತನ ಪತ್ನಿ ವಿಚ್ಛೇದನಕ್ಕಾಗಿ 2008ರಿಂದ ಕೋರ್ಟ್‌ಗೆ ಅಲೆಯುತ್ತಿದ್ದಾರೆ.

ಇಂದು ಕೂಡ ಎಂದಿನಂತೆ ಎರಡು ಕುಟುಂಬಗಳು ಕೋರ್ಟ್‌ಗೆ ಬಂದಿದ್ದರು. ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದ ಮಂಜುನಾಥ್ ಮೇಲೆ ಹಿರೇಮ್ಯಾಗಳಗರೆ ಗ್ರಾಮದ ಮಲ್ಲಿಕಾರ್ಜುನ ಹಲ್ಲೆ ಮಾಡಿ ಕತ್ತು ಕೊಯ್ದು ಗಂಭೀರ ಗಾಯಗೊಳಿಸಿದ್ದಾನೆ.

ಮೊದಲಿಗೆ ಕೋರ್ಟ್ ಆವರಣದಲ್ಲಿ ಮಾತಿನ ಚಕಮಕಿಯಾಗಿ ಎರಡು ಗುಂಪುಗಳ‌ ನಡುವೆ ಮಾರಾಮಾರಿಯಾಗಿದೆ. ಬಳಿಕ ಆರೋಪಿ ಮಲ್ಲಿಕಾರ್ಜುನ್, ಮಂಜುನಾಥ್‌ನ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ.

ಗಾಯಾಳು ಮಂಜುನಾಥ್‌ನನ್ನು ಸರ್ಕಾರಿ ಆಸ್ಪತ್ರಗೆ ದಾಖಲು ಮಾಡಲಾಗಿದೆ. ಪೊಲೀಸರ ಸಮ್ಮುಖದಲ್ಲೇ ಈ ಘಟನೆ ಜರುಗಿದೆ. ಬಳಿಕ ಸ್ಥಳಕ್ಕೆ ಜಗಳೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Last Updated :Dec 7, 2021, 3:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.