ETV Bharat / state

ದಾವಣಗೆರೆ: ಒಂದೇ ಮನೆಗೆ ಎರಡು ಬಾರಿ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ - ವಿಡಿಯೋ

author img

By

Published : Jul 2, 2022, 4:15 PM IST

ಚನ್ನಗಿರಿ ತಾಲೂಕಿನ ನಾರಶೆಟ್ಟಿಹಳ್ಳಿಯಲ್ಲಿ ಒಂಟಿ ಮನೆಯಲ್ಲಿ ಕಾವಲಿಗೆ ಸಾಕಿದ್ದ ನಾಯಿಯನ್ನು ಚಿರತೆ ಕೊಂದು ಹಾಕಿದೆ. ಈ ಘಟನೆ ಬಗ್ಗೆ ಕೇಳುತಿದ್ದಂತೆ ಗ್ರಾಮದ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.

leopard-kills-dog-in-narashettihalli-channagiri-taluk
ದಾವಣಗೆರೆ: ಒಂದೇ ಮನೆಗೆ ಎರಡು ಬಾರಿ ನುಗ್ಗಿ ನಾಯಿ ಕೊಂದ ಹೊತ್ತೊಯ್ದ ಚಿರತೆ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ಭಾಗದಲ್ಲಿ ಚಿರತೆ ಕಾಟ ಹೆಚ್ಚಾಗುತ್ತಿದೆ. ಇದೀಗ ಶುಕ್ರವಾರ ರಾತ್ರಿ ಆಹಾರ ಅರಸಿ ನಾಡಿಗೆ ಬಂದ ಚಿರತೆಯೊಂದು ನಾಯಿಯನ್ನು ಕೊಂದು ಹಾಕಿದೆ. ಈ ಘಟನೆ ಜನರಲ್ಲಿ ಆತಂಕ ಸೃಷ್ಟಿಸಿದೆ.

ಚನ್ನಗಿರಿ ತಾಲೂಕಿನ ನಾರಶೆಟ್ಟಿಹಳ್ಳಿಯಲ್ಲಿ ಚಿರತೆ ರಾತ್ರಿ 1:30ರ ಸಮಾರಿಗೆ ಮಂಜುನಾಥ್‌ ಎಂಬುವವರ ಮನೆಯ ಕಾಂಪೌಂಡ್ ಹಾರಿ ನಾಯಿಯನ್ನು ಕಚ್ಚಿ ಕೊಂದಿದೆ. ಇದನ್ನು ಗಮನಿಸಿ ಮನೆಯವರು ಕೂಗಿದ ತಕ್ಷಣ ಅಲ್ಲಿಂದ ಚಿರತೆ ಕಾಲ್ಕಿತ್ತಿದೆ. ಆದರೆ, ಬೆಳಗಿನ ಜಾವ 4 ಗಂಟೆಗೆ ಮತ್ತೆ ಮನೆಯ ಕಾಂಪೌಂಡ್​ಗೆ ನುಗ್ಗಿ ಸತ್ತಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ. ಇದರ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ದಾವಣಗೆರೆ: ಒಂದೇ ಮನೆಗೆ ಎರಡು ಬಾರಿ ನುಗ್ಗಿ ನಾಯಿ ಕೊಂದ ಹೊತ್ತೊಯ್ದ ಚಿರತೆ

ಮಂಜುನಾಥ್‌ ಗ್ರಾಮದ ಹೊರವಲಯದಲ್ಲಿ ಹೊಸ ಮನೆ ನಿರ್ಮಿಸಿದ್ದಾರೆ. ಈ ಪ್ರದೇಶದಲ್ಲಿ ಒಂಟಿ ಮನೆ ಆಗಿರುವ ಕಾರಣ ಕಾವಲಿಗೆ ನಾಯಿ ಸಾಕಿದ್ದರು. ಚಿರತೆ ನುಗ್ಗಿ ನಾಯಿ ಕೊಂದಿರುವ ಘಟನೆ ಬಗ್ಗೆ ಕೇಳುತ್ತಿದ್ದಂತೆ ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿದೆ. ಚಿರತೆ ಹಾವಳಿ ತಡೆಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಕೊನೆಗೂ ಬಂದ ಬಸ್​.. ಪೂಜೆ ಮಾಡಿ ಗ್ರಾಮಸ್ಥರ ಹರ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.