ದಾವಣಗೆರೆ: ಬೈಕ್ ಸವಾರನೋರ್ವ ಆಯತಪ್ಪಿ ಕೆಳಗೆ ಬಿದ್ದು ಸಾವನಪ್ಪಿರುವ ಘಟನೆ ಹರಿಹರ ನಗರದ ಹೊರವಲಯದಲ್ಲಿನ ಎಂ.ಕೆ.ಇ.ಟಿ ಶಾಲೆ ಮುಂಭಾಗದಲ್ಲಿ ನಡೆದಿದೆ.
ಮೃತ ವ್ಯಕ್ತಿಯು ಹರಿಹರ ತಾಲ್ಲೂಕಿನ ಪಾಮೇನಹಳ್ಳಿ ಗ್ರಾಮದ ಚನ್ನಬಸವ (24)ಎಂದು ತಿಳಿದುಬಂದಿದ್ದು. ಬೈಕ್ನಲ್ಲಿ ಚಲುಸುತ್ತಿರುವಾಗ ಬೈಕ್ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿದ್ದರಿಂದ ಆತ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಕುರಿತು ಹರಿಹರ ನಗರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.