ETV Bharat / state

ಶೀಘ್ರವೇ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗುವುದು: ಪೊಲೀಸ್ ಆಯುಕ್ತ ಡಾ.ಪಿ.ಎಸ್‌.ಹರ್ಷ

author img

By

Published : Jan 21, 2020, 5:45 PM IST

Updated : Jan 21, 2020, 11:57 PM IST

ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆಟೋ ಚಾಲಕನ ವಿಚಾರಣೆ ನಡೆಯುತ್ತಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.

Soonly the accused will be arrested: police commissioner harsh
ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷ

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆಟೋ ಚಾಲಕನ ವಿಚಾರಣೆ ನಡೆಯುತ್ತಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷ

ಪ್ರಕರಣದಲ್ಲಿ ಸಂಶಯದ ಮೇಲೆ ಹಲವರನ್ನು ಪ್ರಶ್ನಿಸಲಾಗಿದ್ದು, ಹಲವೆಡೆ ಶೋಧಕಾರ್ಯ ನಡೆಸಲಾಗಿದೆ. ಬ್ಯಾಗ್ ತಂದಿಟ್ಟ ಶಂಕಿತನಿಗೂ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್​ಗೆ ಬೆದರಿಕೆ ಕರೆ ಮಾಡಿದ ವ್ಯಕ್ತಿಗೂ ಸಾಮ್ಯತೆ ಇದೆಯೇ ಎಂಬುದರ ಬಗ್ಗೆಯೂ ವಿಚಾರಣೆ ನಡೆಸಲಾಗ್ತಿದೆ ಎಂದರು.

ದೇಶ, ರಾಜ್ಯದ ಬೇರೆ, ಬೇರೆ ವಿಮಾನ‌ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಹಾಕಿದವರ ಚಹರೆಯನ್ನು ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ವಿಮಾನ ನಿಲ್ದಾಣದಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಶಂಕಿತನ ಭಾವಚಿತ್ರಕ್ಕೆ ಹೋಲುವ ವ್ಯಕ್ತಿ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದೆ. ತನಿಖಾ ತಂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ವಿಮಾನ ನಿಲ್ದಾಣ ಸುಸ್ಥಿತಿಯಲ್ಲಿದೆ. ನಿಷ್ಕ್ರೀಯ ಮಾಡಿದ ಬಾಂಬ್​ ಸ್ಫೋಟಕದ ಮಾದರಿಯನ್ನು ಬಾಂಬ್ ನಿಷ್ಕ್ರಿಯ ದಳ ಎಫ್ಎಸ್ಎಲ್‌ಗೆ ಕಳುಹಿಸಿದೆ. ವರದಿಯಲ್ಲಿ ಬಾಂಬ್‌ನ ಸಾಮರ್ಥ್ಯ ಮತ್ತು ಯಾವ ರೀತಿಯ ಬಾಂಬ್ ಎಂದು ತಿಳಿಯಲಿದೆ. ಮೇಲ್ನೋಟಕ್ಕೆ ಇದೊಂದು ಕಚ್ಚಾ ಸ್ಫೋಟಕ ಎಂದು ಬಾಂಬ್ ನಿಷ್ಕ್ರೀಯ ದಳ ಅಭಿಪ್ರಾಯಪಟ್ಟಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Intro:ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು , ಅಟೋ ಚಾಲಕನ ವಿಚಾರಣೆ ನಡೆಯುತ್ತಿದ್ದು ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮೀಷನರ್ ಡಾ ಪಿ ಎಸ್ ಹರ್ಷ ತಿಳಿಸಿದ್ದಾರೆBody:
ತನಿಖೆಯಲ್ಲಿ ತನಿಖಾ ತಂಡ ಸಾಕಷ್ಟು ಪ್ರಗತಿ ಸಾಧಿಸಿದೆ. ಸಂಶಯದ ಮೇಲೆ ಹಲವರನ್ನು ಪ್ರಶ್ನೆ ಮಾಡಲಾಗಿದ್ದು ಹಲವು ಕಡೆ ಶೋಧ ನಡೆಸಲಾಗಿದೆ.ಅಟೋ ಚಾಲಕನ ವಿಚಾರಣೆ ಪ್ರಗತಿಯಲ್ಲಿದೆ. ಬ್ಯಾಗ್ ತಂದಿಟ್ಟ ಶಂಕಿತ ಮತ್ತು ವಿಮಾನ ನಿಲ್ದಾಣದ ಟರ್ಮಿನಲ್ ಮೆನೆಜರ್ ಗೆ ಬೆದರಿಕೆ ಕರೆ ಗೆ ಸಾಮ್ಯತೆ ಇದೆಯ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೇರೆ ಬೇರೆ ವಿಮಾನ‌ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಿದವರ ಚಹರೆಯನ್ನು ಕ್ರೋಡೀಕರಿಸಲಾಗುತ್ತಿದೆ. ಈ ಬಗ್ಗೆ ದೇಶದ ಬೇರೆ ಬೇರೆ ವಿಮಾನ ನಿಲ್ದಾಣದಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಶಂಕಿತನ ಭಾವಚಿತ್ರ ಕ್ಕೆ ಹೋಲುವ ವ್ಯಕ್ತಿ ಬಗ್ಗೆ ಸಾರ್ವಜನಿಕರಿಂದ ಹಲವು ಮಾಹಿತಿ ಬಂದಿದೆ. ತನಿಖಾ ತಂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಪರಿಸ್ಥಿತಿ ಶಾಂತವಾಗಿದೆ. ಮಂಗಳೂರು ವಿಮಾನ ನಿಲ್ದಾಣ ಸುಸ್ಥಿತಿಯಲ್ಲಿದೆ. ಬಾಂಬ್ ನಿಷ್ಕ್ರಿಯ ‌ಮಾಡಿದ ಬಾಂಬ್ ನಿಷ್ಕ್ರಿಯ ದಳ ಸ್ಪೋಟಕದ ಮಾದರಿಯನ್ನು ಎಫ್ಎಸ್ಎಲ್ ರಿಪೋರ್ಟ್ ಗೆ ಕಳುಹಿಸಿದೆ. ವರದಿಯಲ್ಲಿ ಬಾಂಬ್ ನ ಸಾಮರ್ಥ್ಯ ಮತ್ತು ಯಾವ ರೀತಿಯ ಬಾಂಬ್ ಎಂದು ತಿಳಿಯಲಿದೆ. ಬಾಂಬ್ ನಿಷ್ಕ್ರೀಯ ದಳದವರು ಮೇಲ್ನೋಟಕ್ಕೆ ಇದೊಂದು ಕಚ್ಚಾ ರೀತಿಯ ಸ್ಪೋಟಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ಆಯಾಮದಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬೈಟ್ - ಡಾ ಪಿ ಎಸ್ ಹರ್ಷ, ಮಂಗಳೂರು ಪೊಲೀಸ್ ಕಮೀಷನರ್Conclusion:
Last Updated : Jan 21, 2020, 11:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.