ETV Bharat / state

ಅಪ್ಪು ಸರ್ ಮತ್ತೊಮ್ಮೆ ಹುಟ್ಟಿ ಬರಲಿ.. ಪುನೀತ್‌ಗಾಗಿ ಕಣ್ಣೀರಿಟ್ಟ ಪುತ್ತೂರಿನ ಬಾಲ ಪ್ರತಿಭೆ ದೀಕ್ಷಾ ರೈ..

author img

By

Published : Oct 30, 2021, 4:38 PM IST

ನಾನು ಸ್ಪರ್ಧೆಸಿದ್ದ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪುನೀತ್​ ಸರ್​​ ಅತಿಥಿಯಾಗಿ ಬಂದಿದ್ದರು. ಅವರನ್ನು ನೋಡಿ, ಅವರೊಟ್ಟಿಗೆ ಮಾತನಾಡಿ ತುಂಬಾ ಸಂತೋಷವಾಗಿತ್ತು. ಆದರೆ, ಇಂದು ಅವರು ನಮ್ಮ ಜೊತೆ ಇಲ್ಲ ಎಂಬ ವಿಚಾರವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರೊಟ್ಟಿಗೆ ಬೆರೆಯುತ್ತಿದ್ದ ಅಪ್ಪು ಸರ್​ ಮತ್ತೊಮ್ಮೆ ಹುಟ್ಟಿ ಬರಲಿ..

Puttur dancer diksha crying for her favorite hero puneeth death
ಪುತ್ತೂರಿನ ಬಾಲ ಪ್ರತಿಭೆ ದೀಕ್ಷಾ

ಪುತ್ತೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಅಪ್ಪು ವಯಸ್ಸಿನ ಅಂತರವಿಲ್ಲದೆ ಎಲ್ಲರನೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ಅವರ ನಿಧನಕ್ಕೆ ಸಣ್ಣ ಮಕ್ಕಳು ಕಣ್ಣೀರಿಟ್ಟಿದ್ದಾರೆ.

ಪುನೀತ್​​ ನಿಧನದ ಸುದ್ದಿ ಕೇಳಿ ಕಣ್ಣೀರಿಟ್ಟ ಪುತ್ತೂರಿನ ಬಾಲ ಪ್ರತಿಭೆ ದೀಕ್ಷಾ ರೈ..

ಸರಳತೆ, ಮೃದು ಹೃದಯಿ, ನಗುವಿನಿಂದ ಎಲ್ಲರಿಗೂ ಬೇಗನೆ ಪುನೀತ್​ ಹತ್ತಿರವಾಗುತ್ತಿದ್ದರು. ಅಪ್ಪುಗೆ ಹಿರಿಯರು ಮಾತ್ರವಲ್ಲದೆ, ಸಣ್ಣ ಸಣ್ಣ ಮಕ್ಕಳ ಅಭಿಮಾನಿ ಬಳಗ ಕೂಡ ಸಾಕಷ್ಟಿದೆ. ಅದರಂತೆ ದಕ್ಷಿಣಕನ್ನಡ ಜಿಲ್ಲೆಯ ಬಾಲಪ್ರತಿಭೆ, ನೃತ್ಯಗಾರ್ತಿ ದೀಕ್ಷಾ ರೈ ನಟ ಪುನೀತ್​ ನಿಧನ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದಾಳೆ.

ಪುತ್ತೂರಿನ ಸುಧಾನ ವಸತಿ ಶಾಲೆಯಲ್ಲಿ ದೀಕ್ಷಾ 10ನೇ ತರಗತಿಯ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ಕೆಲ ವರ್ಷಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಸಿದ್ದಳು. ಕಾರ್ಯಕ್ರಮಕ್ಕೆ ನಟ ಪುನೀತ್​ ಕೂಡ ಆಗಮಿಸಿದ್ದರು.

ಈ ವೇಳೆ ದೀಕ್ಷಾಳ ನೃತ್ಯಕ್ಕೆ ಅಪ್ಪು ಮಾರು ಹೋಗಿದ್ದರು. ನಂತರದ ದಿನಗಳಲ್ಲಿ ದೀಕ್ಷಾಳ ಜೊತೆ ಉತ್ತಮ ಸಂಬಂಧ ಬೆಳೆಸಿದ್ದರು. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಪುನೀತ್ ಅವರಿಗೆ ಪ್ರಶ್ನೆ ಕೇಳುವಂತಹ ಅವಕಾಶ ದೀಕ್ಷಾಳಿಗೆ ಲಭಿಸಿತ್ತು.

ಈ ಕುರಿತಂತೆ ಈಟಿವಿ ಭಾರತದೊಂದಿಗೆ ದೀಕ್ಷಾ ಮಾತನಾಡಿ, ಪುನೀತ್ ರಾಜ್​ ಕುಮಾರ್ ಸಾವಿನ ಸುದ್ದಿ ಕೇಳಿ ತುಂಬಾ ಬೇಸರವಾಯಿತು. ಅಪ್ಪು ಸರ್​ ನನ್ನ ಮೆಚ್ಚಿನ ನಾಯಕ. ನಾನು ಅವರ ದೊಡ್ಡ ಅಭಿಮಾನಿ.

ನಾನು ಸ್ಪರ್ಧೆಸಿದ್ದ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪುನೀತ್​ ಸರ್​​ ಅತಿಥಿಯಾಗಿ ಬಂದಿದ್ದರು. ಅವರನ್ನು ನೋಡಿ, ಅವರೊಟ್ಟಿಗೆ ಮಾತನಾಡಿ ತುಂಬಾ ಸಂತೋಷವಾಗಿತ್ತು. ಆದರೆ, ಇಂದು ಅವರು ನಮ್ಮ ಜೊತೆ ಇಲ್ಲ ಎಂಬ ವಿಚಾರವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರೊಟ್ಟಿಗೆ ಬೆರೆಯುತ್ತಿದ್ದ ಅಪ್ಪು ಸರ್​ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿದಳು.

ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ಬಗ್ಗೆ ಹೆಚ್ಚು ಒಲವಿದ್ದ ಪುನೀತ್ ಪುತ್ತೂರಿನಲ್ಲಿ ನಡೆಯುವ ಕೋಟಿ ಚೆನ್ನಯರ ಜೋಡುಕೆರೆ ಕಂಬಳದಲ್ಲೂ ಭಾಗವಹಿಸಿ ಕಂಬಳದ‌ ಬಗ್ಗೆ ತಮ್ಮ ಮೆಚ್ಚುಗೆಯ ಮಾತನಾಡಿದ್ದರು.

ಇದನ್ನೂ ಓದಿ: ನಾಳೆ ಪುನೀತ್ ಅಂತ್ಯಕ್ರಿಯೆ.. ಬೆಳಗಿನವರೆಗೂ ಅಂತಿಮ ದರ್ಶನಕ್ಕೆ ಅವಕಾಶ- ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.