ETV Bharat / state

ಮಂಗಳೂರಲ್ಲಿ ಮಳೆಗೆ ಹಲವೆಡೆ ಹಾನಿ

author img

By

Published : Mar 29, 2021, 11:59 PM IST

ಮಂಗಳೂರಲ್ಲಿ ಸುರಿದ ಗಾಳಿ, ಗುಡುಗು-ಸಿಡಿಲು ಸಹಿತ ಸುರಿದ ಮಳೆಗೆ ಹಲವೆಡೆ ಹಾನಿಯಾಗಿದೆ.

heavy-rain-in-in-mangaluru
ಮಂಗಳೂರಲ್ಲಿ ಮಳೆಗೆ ಹಲವೆಡೆ ಹಾನಿ

ಮಂಗಳೂರು: ನಗರದಲ್ಲಿ ರಾತ್ರಿ ಸುಮಾರು 9.30ಯಿಂದ ಅರ್ಧ ಗಂಟೆಗಳ ಕಾಲ ಸುರಿದ ಗಾಳಿ, ಗುಡುಗು-ಸಿಡಿಲು ಸಹಿತ ಸುರಿದ ಮಳೆಗೆ ಹಲವೆಡೆ ಹಾನಿಯಾಗಿದೆ.

heavy-rain-in-in-mangaluru
ದನದ ಕೊಟ್ಟಿಗೆಯ ಮೇಲೆ ಬಿದ್ದ ತೆಂಗಿನ ಮರ

ನಗರದ ಮಂಗಳಾದೇವಿ ಸಮೀಪದ ಮುಳಿಹಿತ್ಲು ಎಂಬಲ್ಲಿ ವಿದ್ಯುತ್ ಕಂಬ ನಿಂತಿರುವ ಎರಡು ಕಾರುಗಳ ಮೇಲೆಯೇ ಬಿದ್ದ ಪರಿಣಾಮ ಕಾರುಗಳು ಜಖಂಗೊಂಡಿವೆ. ಬೊಂಡಂತಿಲ ಗ್ರಾಮದ ವಿಜಯಕುಮಾರ್ ಆಳ್ವ ಅವರ ದನದ ಕೊಟ್ಟಿಗೆಯ ಮೇಲೆ ತೆಂಗಿನ ಮರ ಬಿದ್ದು, ಹಟ್ಟಿ ಜಖಂಗೊಂಡಿದೆ. ಅಲ್ಲದೆ ನಗರದ ಕೋಡಿಕಲ್​ನಲ್ಲಿಯೂ ಮನೆಯ ಮೇಲೆ ತೆಂಗಿನ ಮರ ಬಿದ್ದು ಒಂದು ಭಾಗ ಸಂಪೂರ್ಣ ಹಾನಿಯಾಗಿದೆ.

heavy-rain-in-in-mangaluru
ಧರೆಗುರುಳಿದ ವಿದ್ಯುತ್​ ಕಂಬ

ಕೇವಲ ಅರ್ಧ ಗಂಟೆ ಧಾರಾಕಾರವಾಗಿ ಸುರಿದ ಮಳೆಯು ಜನರನ್ನು ಬೆಚ್ಚಿ ಬೀಳಿಸಿದ್ದು, ಸುಮಾರಷ್ಟು ಹಾನಿ ಆಗಿದೆ‌. ಅಲ್ಲದೆ ವಿದ್ಯುತ್ ಕೂಡ ಕೈಕೊಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.