ETV Bharat / state

ದ.ಕ.ಜಿಲ್ಲೆಯಲ್ಲಿ ಕೊರೊನಾಕ್ಕೆ ಐವರು ಬಲಿ: 265 ಮಂದಿಗೆ ಸೋಂಕು ದೃಢ

author img

By

Published : Oct 11, 2020, 9:59 PM IST

ಇಂದು ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗಿರುವ ಪ್ರಕರಣಗಳಿಗಿಂತ ಗುಣಮುಖರಾದವರೇ ಹೆಚ್ಚಾಗಿದ್ದಾರೆ.

Dakshinakannada
Dakshinakannada

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಹೊಸದಾಗಿ 265 ಜನರಿಗೆ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 26 ಸಾವಿರ ಗಡಿ ದಾಟಿದೆ.

ಇಂದಿನ ಕೋವಿಡ್ ಪ್ರಕರಣಗಳಿಷ್ಟು :

ಇಂದು ಪತ್ತೆಯಾಗಿರುವ ಕೊರೊನಾ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತ ಪ್ರಕರಣ ಸಂಖ್ಯೆ 26,529 ಕ್ಕೆ ಏರಿಕೆಯಾಗಿದೆ.

ಮೃತರ ಮಾಹಿತಿ :

ಈ ದಿನ ಕೊರೊನಾಗೆ ಐವರು ಬಲಿಯಾಗಿದ್ದು, ಇದುವರೆಗೆ ಸೋಂಕಿಗೆ 605 ಜನರು ಸಾವನ್ನಪ್ಪಿದ್ದಾರೆ. ಇನ್ನು ಜಿಲ್ಲೆಯಲ್ಲಿ 4,180 ಸಕ್ರಿಯ ಪ್ರಕರಣಗಳಿವೆ.

ಗುಣಮುಖ :

ಇಂದು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 283 ಮಂದಿ ಗುುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 21,744 ಜನರು ಗುಣಮುಖರಾದಂತಾಗಿದೆ

ಕೋವಿಡ್ ಪರೀಕ್ಷಾ ವಿವರ :

ಜಿಲ್ಲೆಯಲ್ಲಿ ಈವರೆಗೆ 1,97,582 ಮಂದಿಯ ಗಂಟಲು ದ್ರವ ಮಾದರಿಯನ್ನು ತಪಾಸಣೆ ಮಾಡಲಾಗಿದ್ದು, ಅದರಲ್ಲಿ 1,71,053 ಮಂದಿಯಲ್ಲಿ ನೆಗೆಟಿವ್ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.