ಚಿತ್ರದುರ್ಗ: ಸತತ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಳೆಗೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಗೂಳಿಹಟ್ಟಿ ಗ್ರಾಮದಲ್ಲಿರುವ ಮನೆ ಕುಸಿದಿದೆ.
ಗೂಳಿಹಟ್ಟಿ ಶೇಖರ್ಗೆ ಸರ್ಕಾರದಿಂದ ಮಂಜೂರಾಗಿದ್ದ ಜನತಾ ಮನೆ ಇದಾಗಿದ್ದು, ಶೇಖರ್ ಶಾಸಕರಾಗುವ ಮೊದಲೇ ಮಂಜೂರಾಗಿದ್ದ ಜನತಾ ಮನೆ ಕುಸಿದ ಪರಿಣಾಮ ತಾಯಿ ಪುಟ್ಟಮ್ಮ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಚುನಾವಣೆ ವೇಳೆ ಜನತಾ ಮನೆ ಒಂದೇ ಎಂದು ಘೋಷಿಸಿಕೊಂಡಿದ್ದ ಶೇಖರ್, ಸಚಿವರಾದ ಬಳಿಕ ತಾಯಿ ಪುಟ್ಟಮ್ಮ, ತಂದೆ ದಿವಾಕರಪ್ಪ ಸೇರಿದಂತೆ ಶಾಸಕ ಗೂಳಿ ಹಟ್ಟಿ ಶೇಖರ್ ಕೂಡ ಇದೇ ಮನೆಯಲ್ಲಿ ವಾಸವಿದ್ದರು.
ಇದೀಗ ಮಳೆ ಆರ್ಭಟಕ್ಕೆ ಮನೆ ಕುಸಿತವಾಗಿದ್ದು, ಮನೆಯ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಮನೆ ಕಳೆದುಕೊಂಡ ತಾಯಿ ಪುಟ್ಟಮ್ಮ ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನೂ ಎರಡು ಅವಧಿಗೆ ಗೂಳಿ ಶಾಸಕರಾದರೂ ಹೊಸ ಮನೆ ಮಾತ್ರ ನಿರ್ಮಿಸಿರಲಿಲ್ಲ. ತಂದೆ ದಿವಾಕರಪ್ಪ ನಿಧನದ ಬಳಿಕ ತಾಯಿ ಪುಟ್ಟಮ್ಮ ಇದೆ ಮನೆಯಲ್ಲಿ ವಾಸವಿದ್ದರು.