ETV Bharat / state

ಚಿತ್ರದುರ್ಗದಲ್ಲೂ ಎಸಿಬಿ ದಾಳಿ: ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮನೆಯಲ್ಲಿ ತಲಾಶ್​

author img

By

Published : Jun 12, 2019, 2:16 PM IST

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎ.ಇ. ಮಹದೇವಪ್ಪ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮನೆ

ಚಿತ್ರದುರ್ಗ: ಎಸಿಬಿ ದಾಳಿಗೊಳಗಾದ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎ.ಇ. ಮಹದೇವಪ್ಪ ಅವರ ಆಸ್ತಿ ಪರಿಶೀಲನೆ ನಡೆಸಲಾಗಿದೆ.

ಹೊಳಲ್ಕೆರೆ ತಾಲೂಕಿನ ಕಣಿವೆಹಳ್ಳಿಯಲ್ಲಿರುವ ಮಹದೇವಪ್ಪ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ಗ್ರಾಮದಲ್ಲಿ ಮಹದೇವಪ್ಪ ಅವರಿಗೆ ಸೇರಿದ 2ಎಕರೆ ತೆಂಗಿನ ತೋಟ, 1ಎಕರೆ ಭೂಮಿ, 1/4ಎಕರೆ ಅಡಿಕೆ ತೋಟ ಇದೆ ಎಂದು ಪರಿಶೀಲನೆ ವೇಳೆ ತಿಳಿದುಬಂದಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮನೆ

ಇನ್ನು ಹೆಂಡತಿಯ ತವರು ಚಿಕ್ಕಮಗಳೂರು ಜಿಲ್ಲೆಯ ಬೀರನಹಳ್ಳಿ ಆಗಿದ್ದು, ಅದೇ ಗ್ರಾಮದಲ್ಲಿರುವ 4 ಎಕರೆ ತೆಂಗಿನ ತೋಟ, 8 ಎಕರೆ ಬೆದ್ದಲು ಭೂಮಿ, 2 ಎಕರೆ ಅಡಿಕೆ ತೋಟ ಮಹದೇವಪ್ಪನವರಿಗೆ ಸೇರಿದ್ದು ಎನ್ನಲಾಗ್ತಿದೆ.

ಇಬ್ಬರು ಗಂಡು ಮಕ್ಕಳು ಅಮೆರಿಕದಲ್ಲಿ ವಾಸವಾಗಿದ್ದು, ಓರ್ವ ಮಗ ಸಾಫ್ಟ್‌ವೇರ್ ಎಂಜಿನಿಯರ್, ಮತ್ತೋರ್ವ ಮಗ ಪ್ರೊಫೆಸರ್ ಆಗಿದ್ದಾರೆ. ಬೆಂಗಳೂರು ಮತ್ತು ಮಂಗಳೂರಿನಲ್ಲೂ ಸ್ವಂತ ಮನೆ, ಆಸ್ತಿಪಾಸ್ತಿಯನ್ನು ಮಹದೇವಪ್ಪ ಹೊಂದಿದ್ದಾರೆ ಎಂದು ಹೇಳಲಾಗ್ತಿದೆ.

Intro:ಚಿತ್ರದುರ್ಗದಲ್ಲೂ ಎಸಿಬಿ ದಾಳಿ : ಮಂಗಳೂರು ಮೂಲದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮನೆ ಪರಿಶೀಲನೆ

ಆ್ಯಂಕರ್:- ಎಸಿಬಿ ದಾಳಿಗೊಳಗಾದ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಇ ಮಹದೇವಪ್ಪರವರ ಆಸ್ತಿ ಪರಿಶೀಲನೆ ನಡೆಸಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಕಣಿವೆಹಳ್ಳಿಯಲ್ಲಿರುವ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮುಂದುವರೆಸಿದ್ದಾರೆ. ಇದೇ ಗ್ರಾಮದಲ್ಲಿ ಮಹದೇವಪ್ಪನವರಿಗೆ ಸೇರಿದ 2ಎಕರೆ ತೆಂಗಿನ ತೋಟ, 1ಎಕರೆ ಬೆದ್ದಲು ಭೂಮಿ, 1/4ಎಕರೆ ಅಡಿಕೆ ತೋಟ ಇದೇ ಎಂದು ಪರಿಶೀಲನೆಯಲ್ಲಿ ತಿಳಿದುಬಂದಿದೆ. ಇನ್ನೂ ಹೆಂಡತಿಯ ತವರು ಚಿಕ್ಕಮಗಳೂರು ಜಿಲ್ಲೆಯ ಬೀರನಹಳ್ಳಿ ಆಗಿದ್ದು, ಅದೇ ಗ್ರಾಮದಲ್ಲಿ 4ಎಕರೆ ತೆಂಗಿನ ತೋಟ, 8ಎಕರೆ ಬೆದ್ದಲು ಭೂಮಿ, 2ಎಕರೆ ಅಡಿಕೆ ತೋಟ ಮಹದೇವಪ್ಪನವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಇಬ್ಬರು ಗಂಡು ಮಕ್ಕಳು ಅಮೇರಿಕಾದಲ್ಲಿ ವಾಸವಾಗಿದ್ದು, ಒಬ್ಬ ಮಗ ಸಾಫ್ಟ್‌ವೇರ್ ಇಂಜಿನಿಯರ್, ಮತ್ತೊಬ್ಬ ಮಗ ಪ್ರೊಫೆಸರ್ ಆಗಿದ್ದಾರೆ. ಇನ್ನೂ ಬೆಂಗಳೂರು ಮತ್ತು ಮಂಗಳೂರಿನಲ್ಲೂ ಸ್ವಂತ ಮನೆ ಆಸ್ತಿಪಾಸ್ತಿಯನ್ನು ಮಹದೇವಪ್ಪ ಮಾಡಿರುವುದು ಬೆಳಕಿಗೆ ಬಂದಿದೆ.

ಫ್ಲೋ....Body:AcbConclusion:Raid

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.