ETV Bharat / state

ಆಂಜನೇಯ ಸ್ವಾಮಿ ದೇವಾಲಯದ ಕಿಟಕಿ ಒಡೆದು ಹುಂಡಿ ದೋಚಿದ ಕಳ್ಳರು

author img

By

Published : Feb 17, 2021, 4:36 PM IST

ಲಕ್ಷಾಂತರ ರೂಪಾಯಿಯನ್ನು ಹುಂಡಿಯಿಂದ ದೋಚಿದ್ದು, ಚಿಕ್ಕಮಗಳೂರಿನ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ..

the-robbers-smashed-the-window-of-the-sri-anjaneya-swamy-temple-and-robbed-money
ಆಂಜನೇಯ ಸ್ವಾಮಿ ದೇವಾಲಯದ ಕಿಟಕಿ ಒಡೆದು ಹುಂಡಿ ದೋಚಿದ ಕಳ್ಳರು

ಚಿಕ್ಕಮಗಳೂರು : ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ದೋಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಹೊರವಲಯದ ತೇಗೂರು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.

ಶ್ರೀಆಂಜನೇಯ ಸ್ವಾಮಿ ದೇವಸ್ಥಾನದ ಕಿಟಕಿ ಒಡೆದು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕಳ್ಳರು ತಮ್ಮ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಬಾರದೆಂದು ಸಂಪರ್ಕ ಕಟ್ ಮಾಡಿ ಕಳ್ಳತನ ಮಾಡಿದ್ದಾರೆ.

ಲಕ್ಷಾಂತರ ರೂಪಾಯಿಯನ್ನು ಹುಂಡಿಯಿಂದ ದೋಚಿದ್ದು, ಚಿಕ್ಕಮಗಳೂರಿನ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂಓದಿ: ಅದ್ದೂರಿಯಾಗಿ ಜರುಗಿದ ಜಾವಳಿ ಗಣಪತಿ ಪಲ್ಲಕ್ಕಿ ಉತ್ಸವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.