ಚಿಕ್ಕಮಗಳೂರು: ಶಾಸಕ ಎನ್, ಮಹೇಶ್ ಹಿಂದೂ ಧರ್ಮ, ವೈದಿಕ ಧರ್ಮವನ್ನು ಹೀನಾಯವಾಗಿ ನಿಂದಿಸಿದ್ದರು. ಅವರು ಜನಾಂಗ ಒಡೆದು ಶಾಸಕರಾಗಿ ಬಂದಿದ್ದಾರೆ. ಇಂತಹವರಿಗೆ ಸಚಿವ ಸ್ಥಾನ ಸಿಗುತ್ತೆ ಅನ್ನೋದಾದರೆ ಅದಕ್ಕೆ ನನ್ನ ವಿರೋಧವಿದೆ ಎಂದು ಬಿಜೆಪಿ ಶಾಸಕ ಎಂ. ಪಿ. ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎನ್.ಮಹೇಶ್ ಹಿಂದೂ ಧರ್ಮವನ್ನ ಮನು ಧರ್ಮ, ಜಾತಿ-ಧರ್ಮ ಎಂದು ಎತ್ತಿಕಟ್ಟಿ, ಜನಾಂಗ ಒಡೆದು ಶಾಸಕರಾಗಿದ್ದಾರೆ. ಇಂತಹವರನ್ನು ಬಿಜೆಪಿ ಸೇರಿಸಿಕೊಂಡಿರುವುದಕ್ಕೆ ನನ್ನ ಆಕ್ಷೇಪ ಇದೆ ಎಂದರು.
ಪಕ್ಷಕ್ಕಾಗಿ ದುಡಿದವರು ಮೂವರು ಇದ್ದೇವೆ, ನಮ್ಮಲ್ಲೇ ಯಾರನ್ನಾದ್ರು ಸಚಿವರನ್ನಾಗಿ ಮಾಡುತ್ತಾರೆ. ನಾನು ಏನಾದ್ರು ಹೇಳಿಕೆ ಕೊಟ್ರೆ ಪಕ್ಷಕ್ಕೆ ಎಚ್ಚರಿಕೆ ಕೊಟ್ಟಂತಾಗುತ್ತೆ, ಈಗ ಬೇಡ ಎಂದು ಹೇಳಿದ್ರು.