ETV Bharat / state

ಮೂಡಿಗೆರೆ: ತಂದೆಯಿಂದಲೇ ಮಗನ ಹತ್ಯೆ

author img

By

Published : Aug 12, 2021, 2:41 PM IST

Updated : Aug 12, 2021, 6:35 PM IST

ತಂದೆಯೇ ಮಗನನ್ನು ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

chikkamagaluru
ಕಿರಣ್ ಹಾಗೂ ಲಕ್ಷ್ಮಣ್ ಗೌಡ

ಚಿಕ್ಕಮಗಳೂರು : ತಂದೆಯೇ ತನ್ನ ಮಗನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ನಡೆದಿದೆ. ಕಿರಣ್ (30) ಎಂಬಾತನೆ ತನ್ನ ತಂದೆ ಲಕ್ಷ್ಮಣ್ ಗೌಡ (70) ನಿಂದ ಕೊಲೆಗೀಡಾದ ವ್ಯಕ್ತಿ.

ಕಿರಣ್​ ತನ್ನ ತಂದೆಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೂ ತಂದೆಯ ಗುಂಡೇಟಿಗೆ ಬಲಿಯಾಗಿದ್ದಾನೆ. ಕಳೆದ ಕೆಲ ವರ್ಷಗಳ ಹಿಂದೆ ಲಕ್ಷ್ಮಣ್ ಗೌಡಗೆ ಅಪಘಾತವಾಗಿತ್ತು. ಅಂದಿನಿಂದ ಮಗನೇ ತಂದೆಯ ಪಾಲನೆ ಪೋಷಣೆ ಮಾಡುತ್ತಿದ್ದ. ಆದರೆ, ಅಪಘಾತದ ಬಳಿಕ ಲಕ್ಷ್ಮಣ್ ಗೌಡ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂಬ ಮಾತುಗಳು ಕೇಳಿ ಬಂದಿವೆ.

ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಲಕ್ಷ್ಮಣ್ ಆಗಾಗ ಮಗನಿಗೆ ಹೇಳುತ್ತಿದ್ದನಂತೆ. ಆದರೂ ತಂದೆಯೊಂದಿಗೆ ಮಗ ಕಿರಣ್​ ಜೀವನ ನಡೆಸುತ್ತಿದ್ದ. ನಿನ್ನೆ ರಾತ್ರಿಯೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ತಂದೆ ಯಾವಾಗಲೂ ಹೀಗೆ ಹೇಳುತ್ತಾರೆಂದು ಕಿರಣ್ ತನ್ನ ಕೆಲಸದಲ್ಲಿ ತೊಡಗಿದ್ದ. ಆದರೆ ಇದೇ ವೇಳೆ ತಂದೆ ಬಂದೂಕಿನಿಂದ ಗುಂಡು ಹಾರಿಸಿ ಮಗನನ್ನು ಕೊಂದಿದ್ದಾನೆ.

ಘಟನೆ ತಿಳಿಯುತ್ತಿದ್ದಂತೆ ಗೋಣಿಬೀಡು ಪೊಲೀಸರು ಆರೋಪಿ ಲಕ್ಷ್ಮಣ ಗೌಡನನ್ನು ಬಂಧಿಸಿದ್ದಾರೆ. ಈ ಬಗ್ಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated :Aug 12, 2021, 6:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.