ETV Bharat / state

ಚಂದ್ರೇಗೌಡರು ನನ್ನ ಸ್ನೇಹ ಪಕ್ಷಾತೀತವಾಗಿತ್ತು, ಆತ್ಮೀಯವಾಗಿತ್ತು: ಬಿ ಎಸ್ ಯಡಿಯೂರಪ್ಪ

author img

By ETV Bharat Karnataka Team

Published : Nov 18, 2023, 4:55 PM IST

Updated : Nov 18, 2023, 6:37 PM IST

D B Chandregowda post death rituals: ಇತ್ತೀಚೆಗೆ ನಿಧನ ಹೊಂದಿದ ಡಿ. ಬಿ. ಚಂದ್ರೇಗೌಡರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಭಾಗವಹಿಸಿದ್ದರು.

B S Yediyurappa in D B Chandregowda's post death rituals
ಡಿ ಬಿ ಚಂದ್ರೇಗೌಡ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಿಎಸ್​ ಯಡಿಯೂರಪ್ಪ

ಡಿ ಬಿ ಚಂದ್ರೇಗೌಡ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಿಎಸ್​ ಯಡಿಯೂರಪ್ಪ

ಚಿಕ್ಕಮಗಳೂರು: ಹಿರಿಯ ರಾಜಕಾರಣಿ, ಮಾಜಿ ಸಚಿವರಾಗಿದ್ದ ಡಿ. ಬಿ. ಚಂದ್ರೇಗೌಡರು ಹಾಗೂ ನನ್ನ ಸ್ನೇಹ ಪಕ್ಷಾತೀತವಾಗಿತ್ತು ಹಾಗೂ ಆತ್ಮೀಯವಾಗಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗಾಗಿ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಚಂದ್ರೇಗೌಡರು ಹೊಸ ರಾಜಕೀಯಕ್ಕೆ ಸಾಕ್ಷಿಯಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅಭಿಮಾನದ ಮಾತುಗಳನ್ನಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿಯ ಸಹರಾ ಶಾದಿ ಮಹಲ್​ನಲ್ಲಿ ಆಯೋಜಿಸಿದ್ದ ಇತ್ತೀಚೆಗೆ ನಿಧನ ಹೊಂದಿದ ರಾಜಕೀಯ ಮುತ್ಸದ್ಧಿ ಡಿ ಬಿ ಚಂದ್ರೇಗೌಡರ 11ನೇ ದಿನದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಎಸ್​​​ವೈ, ಚಂದ್ರೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಮಸ್ಕರಿಸಿದರು. ನಂತರ ಮಾತನಾಡಿದ ಅವರು, 1983ರಲ್ಲಿ ಡಿ ಬಿ ಚಂದ್ರೇಗೌಡ ಅವರು ರೈತರಿಗಾಗಿ ಅಭೂತಪೂರ್ವ ರ‍್ಯಾಲಿ ಆಯೋಜಿಸಿದ್ದರು. 2009ರಲ್ಲಿ ಬಿಜೆಪಿಯಿಂದ ಸಂಸದರಾಗಿ ಪಕ್ಷಕ್ಕೆ ಶಕ್ತಿ ತುಂಬಿದ್ದರು. ಸದನದಲ್ಲಿ ಅವರು ಮಾತಿಗೆ ನಿಂತರೆ ಹೊರಗಿದ್ದವರು ಒಳಗೆ ಬರುತ್ತಿದ್ದರು. ಹಲವು ಖಾತೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದ ಕೀರ್ತಿ ಚಂದ್ರೇಗೌಡ ಅವರದ್ದಾಗಿದೆ ಎಂದು ಹೇಳಿದರು.

ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ ಎಸ್​ ಯಡಿಯೂರಪ್ಪ ಅವರ ಚಲನವಲನ ಎಂದಿಗಿಂತ ಹೆಚ್ಚು ಉತ್ಸಾಹದಾಕವಾಗಿ ಕಂಡು ಬಂತು. ಪುತ್ರ ಬಿ. ವೈ. ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ದೊರೆಯುತ್ತಿದ್ದಂತೆ ಬಿ.ಎಸ್. ಯಡಿಯೂರಪ್ಪ ಅವರು ಫುಲ್ ಆ್ಯಕ್ಟಿವ್ ಆಗಿದ್ದಾರೆ ಎನ್ನುವ ಮಾತುಗಳೂ ಈ ವೇಳೆ ಕೇಳಿಬಂದವು.

ಪುತ್ರನ ರಾಜಕೀಯ ಭವಿಷ್ಯ ಭದ್ರಪಡಿಸಿದ ಬಿಎಸ್​ವೈ: ಇತ್ತೀಚೆಗೆ ಬಿಜೆಪಿ ಹೈಕಮಾಂಡ್​ ಶಿಕಾರಿಪುರ ಶಾಸಕ ಹಾಗೂ ಬಿ ಎಸ್​ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿತ್ತು. ಆಯ್ಕೆಯಾದ ಒಂದು ವಾರದ ನಂತರ ಪದಗ್ರಹಣ ಕಾರ್ಯಕ್ರಮ ನಡೆದಿತ್ತು. ಮಗನ ಪದಗ್ರಹಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಿದ್ದ ಬಿಜೆಪಿ ಹಿರಿಯ ನಾಯಕ ಬಿ ಎಸ್​ ಯಡಿಯೂರಪ್ಪ, ಪುತ್ರನನ್ನು ಗ್ರ್ಯಾಂಡ್​ ಆಗಿ ಲಾಂಚ್​ ಮಾಡಿದ್ದರು. ಇದೇ ವೇಳೆ, ರಾಜ್ಯ ಬಿಜೆಪಿ ನಾಯಕರ ಮುಂದೆ ಮಗನ ಜನಪ್ರಿಯತೆಯನ್ನು ಬಿಎಸ್​ವೈ ಅನಾವರಣಗೊಳಿಸಿದ್ದರು.

ಮಗನಿಗೆ ರಾಜ್ಯಾಧ್ಯಕ್ಷನ ಸ್ಥಾನ ಕೊಡಿಸಲು ಬಿಎಸ್​ವೈ ಬಿಜೆಪಿ ಹೈಕಮಾಂಡ್​ ಮೇಲೆ ಪ್ರಭಾವ ಬೀರಿ ಒತ್ತಡ ತಂದು ಆಯ್ಕೆ ಮಾಡಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಯಾವುದೇ ಹೈಕಮಾಂಡ್​ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ ಎಂದು ಹೇಳುವ ಮೂಲಕ ಎಲ್ಲಾ ಆರೋಪಗಳನ್ನು ಬಿಎಸ್​ವೈ ತಳ್ಳಿ ಹಾಕಿದ್ದರು.

ಇದನ್ನೂ ಓದಿ: ಬೆಂಗಳೂರು: ಅಸಮಾಧಾನಿತ ಶಾಸಕ ಸೋಮಶೇಖರ್ ಜೊತೆ ಬಿಎಸ್​ವೈ ಮಾತುಕತೆ

Last Updated :Nov 18, 2023, 6:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.