ಗೌರಿಬಿದನೂರು : ತಾಲೂಕಿನ ಉತ್ತರಪಿನಾಕಿನಿ ನದಿ(uttarapinakini river)ಯ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಎರಡು ದಿನ ಕಳೆದರೂ ಪತ್ತೆಯಾಗದ ಹಿನ್ನೆಲೆ ಆತನ ಕುಟುಂಬಸ್ಥರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಆತಂಕಕ್ಕೆ ಒಳಗಾಗಿದ್ದಾರೆ.
ತಾಲೂಕಿನ ಅಲಕಾಪುರ ಗ್ರಾಮ (Alakaapura village) ಪಂಚಾಯತ್ ವ್ಯಾಪ್ತಿಯ ರಾಯರಕಲ್ಲಹಳ್ಳಿ ನಿವಾಸಿ ಕುಮಾರ್ (kumar) (45) ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ವೃತ್ತಿಯಲ್ಲಿ ಪೈಂಟರ್ ಆಗಿರುವ ಕುಮಾರ್, ಕಳೆದ ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಗ್ರಾಮದ ಹೊರವಲಯದ ಅವರ ನಿವಾಸಕ್ಕೆ ತೆರಳುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಕಳೆದ 2 ದಿನಗಳಿಂದ ಅಗ್ನಿಶಾಮಕ ದಳ ಹಾಗೂ SDRF ತಂಡಗಳು ಅಲಕಾಪುರದಿಂದ ನಗರದ ಕಿಂಡಿ ಅಣೆಕಟ್ಟುತನಕ ನದಿಯ ಎರಡೂ ಭಾಗದಲ್ಲಿ ಕೊಚ್ಚಿ ಹೋದ ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಸ್ಥಳಕ್ಕೆ ತಾಲೂಕು ದಂಡಾಧಿಕಾರಿಗಳಾದ ಶ್ರೀನಿವಾಸ್ ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಓದಿ: Dedication of Thief : ದಿನಕ್ಕೆ ಒಂದೇ ಬಾರಿ ಊಟ, ತೂಕ ಇಳಿಸಿಕೊಂಡು ಕಳ್ಳ ಕದ್ದಿದ್ದು ಬರೋಬ್ಬರಿ 37 ಲಕ್ಷ ರೂ.!